Saturday, January 26, 2019

ಅಂಬಾನಿಯ ಆಹ್ವಾನ ಪತ್ರಿಕೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath


2018 ಡಿಸೆ೦ಬರ್ ಅಪರಂಜಿ ಯಲ್ಲಿ 
ಅಂಬಾನಿಯ ಆಹ್ವಾನ ಪತ್ರಿಕೆ
ಮನೆಗೆ ಹೋಗಿ ಹೆಂಡತಿಯನ್ನು ಕೇಳಿದ
" ಇವತ್ತು ನನಗೆ ಏನಾದರೂ ಕೊರಿಯರ್ ಬಂದಿತ್ತೆ?"
" ನಿಮಗೆ ಯಾವ ಕೊರಿಯರ್ ಬರ್ತಾನೆ?"
" ಸರಿ, ಏನಾದರೂ ಪೋಸ್ಟ್ ಬಂದಿತ್ತೆ ?"
" ಇಲ್ಲ, ಏಕೆ?"
" ಒಂದು ಅಹ್ವಾನ ಪತ್ರಿಕೆ ಬರಬೇಕಿತ್ತು"
" ಯಾವುದಕ್ಕೆ ಆಹ್ವಾನ?"
" ಒಂದು ಮದುವೆಯದ್ದು ?"
" ಯಾರದು ? ನಮ್ಮ ಸಂಬಂಧೀಕರದ್ದು ಯಾವುದೂ ಇಲ್ಲವಲ್ಲ . ನಿಮ್ಮ ಆಫೀಸಿನವರದ್ದಾ?"
" ಇಲ್ಲ ಇಲ್ಲ ! ನಿನಗೆ ಅವರು ಗೊತ್ತಿಲ್ಲ ! ..ಅಂದರೆ ನನಗೆ ಅವರು ಗೊತ್ತು ಅಂತ ನಿನಗೆ ಗೊತ್ತಿಲ್ಲ "
" ಆಂಥವರು ಯಾರು?"
" ಅಂಬಾನಿಯವರು !"
" ಯಾವ ಅಂಬಾರಿ? ಯಾವ ಆನೆ?"
" ಇದು ಅಂಬಾನಿ ! ಅಂಬಾರಿ ಅಲ್ಲ ಅಮ್ ... ಬಾ.. ನಿ ! ರಿ ನಿ ಇದೆಯಲ್ಲ ಅದರಲ್ಲಿ ರಿ ಅಲ್ಲ ನಿ "
" ಆಯ್ತು ! ಗೊತ್ತಾಯಿತು ಅಂಬಾ ನಿ ! ಯಾವ ಆಂಬಾನಿ ಅಂತ ಕೇಳಬಹುದೇ? ನಿಮ್ಮ ಆಫೀಸಿನವರಲ್ಲ ಅಂದಿರಿ.. ಅಲ್ಲ ಏನೋ ಗುಮಾನಿ ! ಆಗರ್ಭ ಶ್ರೀಮಂತ ಅಂಬಾನಿಯವರೋ?"
"ಹೌದು, ಹೌದು !ಅಬ್ಬ! ಕಡೆಗೂ ಗೊತ್ತಾಯಿತು ! ನೀನು ಟ್ಯೂಬು ಲೈಟೇ!"
" ಮುಖೇಶ್ ಅವರೋ ? ಅನಿಲ್ ಅವರೋ? ಸರಿ, ಮುಖೇಶ್ ! ಪೆಡ್ದರ್ ರೋಡಿನಲ್ಲಿ ಎಷ್ಟೋ ಅಂತಸ್ತಿನ ಮನೆ ಉಳ್ಳವರಲ್ಲವೆ . .. ಇರಬೇಕು . ಅವರ ಮನೆಯಲ್ಲಿ ಮದುವೆ ಎಂದು ಓದಿದೆ "
" ಅದೇ ಮದುವೆಯ ಅಹ್ವಾನಪತ್ರಿಕೆಯನ್ನು ನಾನು ನಿರೀಕ್ಷಿಸುತ್ತಿದ್ದೇನೆ!"!
" ಆಯಿತು . ಈಗ ಒಂದು ಪ್ರಶ್ನೆ ಕೇಳಬಹುದೆ?"
" ಏಕೋ ಬಹಳ ಕ್ರಾಸ್ ಎಕ್ಸಾಮಿನೇಷನ್ ಆಗ್ತಾ ಇದೆ ! ಕೇಳು "
" ಶ್ರೀಮಂತ ಅಂಬಾನಿಯವರಿಗೆ ಸರಕಾರಿ ಕಛೇರಿಯ ಮಧ್ಯ ದರ್ಜೆಯ ಕಾರಕೂನ ಹೇಗೆ ಪರಿಚಯವಾದರು ? "
" ಹಾಸ್ಯ ಮಾಡ್ತಾ ಇರು ! ಮಧ್ಯ ದರ್ಜೆ ಈವತ್ತು ! ನಾಳೆ ಮೇಲು ದರ್ಜೆ ಅಗ್ತೀನಿ. "

" ಅದು ಸರಿ. ಆಗುತ್ತೆ ಆಗುತ್ತೆ ನಿಮ್ಮ ನಿವೃತ್ತಿಯ ಸಮಯದಲ್ಲೇ ಅಗಬಹುದು ! ಆದರೆ ನನ್ನ ಪ್ರಶ್ನೆ ಗೆ ಉತ್ತರ ಸಿಗಲಿಲ್ಲ. ಶ್ರೀ ಮಂತರಿಗೆ ನೀವು ಹೇಗೆ ಗೊತ್ತು ?
" ಅವರು ನನ್ನ ಸ್ನೇಹಿತರು"
" ಅದೇ ಕೇಳ್ತಾ ಇರೋದು ! ಅದು ಹೇಗೆ ಆಯಿತು ?"
" ನನಗೆ ಆವರು ವೇವ್ ಮಾಡಿದರು"
" ನಿಮಗೆ ಅವರು ವೇವ್ ಮಾಡಿದರು?"
" ಏನು ನೀನು ಗಿಣೀನಾ? .. ಹೇಳ್ತೀನಿ . ನಾನು ಚೌಪಾತಿಯಲ್ಲಿ ರಸ್ತೆ ದಾಟಲು ಹಿಂತಿದ್ದೆ . ಅಗ ಅವರ ಕಾರು ಆಲ್ಲಿ ಬಂದು ನಿಂತಿತು. ಅದರಲ್ಲಿ ಮುಖೇಶ್ ಕುಳಿತಿದ್ದರು. ನಾನು ಅವರಿಗೆ ವೇವ್ ಮಾಡಿದೆ ಅವರು ಮುಗಳ್ನಕ್ಕು
ವಾಪಸ್ಸು ವೇವ್ ಮಾಡಿದರು ."
" ಅಂದರೆ ಇದು ವೇವ್ ವೇವ್ ಸಂಬಂಧ.. ಹೀಗಾ.? ನೋಡಿ,ನನ್ನ ಕೈ"
" ಹೌದು ! ಆದರೆ ಅವರಿಗೆಲ್ಲ ಇದು ಅಭ್ಯಾಸ ಅಲ್ವಾ ! ನಿನಗಿಂತ ಚೆನ್ನಾ ಗಿಯೇ ವೇವ್ ಮಾಡಿದರು ! ಬರೀ ವೇವ್ ಆಲ್ಲ. ನಕ್ಕರು ಕೂಡ ! ಆಳವಾದ ಸಂಬಂಧಗಳೆಲ್ಲಾ ಹೀಗೆಯೇ ಶುರುವಾಗುತ್ತವೆ ಗೊತ್ತಾ?"
"ಅದು ಮುಖೇಶ್ ಅಂಬಾನಿ ಎಂದು ನಿಮಗೆ ಚೆನ್ನಾಗಿ ಗೊತ್ತೋ?..ಕಾರಿನ ಗಾಜು ಕಪ್ಪಗಿದ್ದಿರಬೇಕಲ್ಲವೆ ?
" ನಾನು ಬಹಳ ಹತ್ತಿರ ಇದ್ದೆ . ಅದಕ್ಕೆ .. ಇಷ್ಟೇ ದೂರ .."
" ನೀವೊಬ್ಬರೇನಾ ಅಲ್ಲಿದ್ದದ್ದು ?"
" ಏನು ಪ್ರಶ್ನೆ ಇದು ! ಚೌಪಾತಿಯಲ್ಲಿ ಜನ ರಸ್ತೆ ದಾಟ್ತಾನೆ ಇರೋಲ್ಲ ?
" ಅಂದರೆ ನಿಮ್ಮ ಜೊತೆ ಬಹಳ ಜನ ಇದ್ದರೂ ..ಅಂಬಾನಿಯವರು ನಿಮಗೆ ಮಾತ್ರ ವೇವ್ ಮಾಡಿದರು. ಅಲ್ಲ್ವೆ?"
" ಹೌದು, ನಕ್ಕರು ಕೂಡ .ಏನಿದು ಕ್ರಾಸ್ ಎಕ್ಸ್ಸಮಿನೇಷನ್ ಮುಗಿಯೋಹಾಗೇ ಕಾಣಲಿಲ್ಲವಲ್ಲ. .. ಸರಿ ಇರಬಹುದು"
" ಅಂಬಾನಿಯವರು ನಿಮಗೆ ಮಾತ್ರ ಅಲ್ಲ, ಅಲ್ಲಿ ನಿಂತಿದ್ದ ಎಲ್ಲರಿಗೂ ವೇವ್ ಮಾಡಿರಬಹುದು ಅಲ್ಲವೇ"
ಅಂದರೆ ನಿಮ್ಮನ್ನು ನೋಡಿರದ ಸಾಧ್ಯತೆಯೂ ಇದೆ ಅಲ್ಲವೇ ಯುವರ್ ಹಾನರ್"
" ಟೀವಿ ನೋಡೋದು ಜಾಸ್ಸ್ಸ್ತಿ ಯಾಗಿದೆ "
" ಬಿಡಿ. ನಿಮಗೇ ವೇವ್ ಮಾಡಿದರು ಅಂದುಕೊಳ್ಳೋಣ.. ನಿಮ್ಮ ಹೆಸರು , ವಿಳಾಸ ಎಲ್ಲ ಅವರಿಗೆ ಹೇಗೆ ತಿಳಿಯುತ್ತೆ?"
"ಅಯ್ಯೋ ಹುಚ್ಚಿ ! ಲೀಲಾಜಾಲ !"
" ನನಗೂ ಬರುತ್ತೆ ಪದಗಳು. ಅಂತರ್ಜಾಲ! ನಾನು ಕೇಳಿದ್ದಕ್ಕೆ ಉತ್ತರ ಕೊಡಿ "
" ಅವರಿಗೆ ಇರುವ ಹಣ ಎಷ್ಟು ? ದೇಶದ ದೊಡ್ಡವರು ಕೂಡ ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ತಾರಂತೆ ಗೊತ್ತಾ?... ಅವರ ಪ್ರಭಾವ ಎಷ್ಟು ! . ಏನು ಬೇಕಾದಾರೂ ತಿಳಿದುಕೋತಾರೆ. ದಿನ, ಸಮಯದಲ್ಲಿ , ಚೌಪಾತಿಯ ಟ್ರಾಫಿಕ್ ಸ್ಸ್ಸ್ಸಿಗ್ನಲ್ ನಲ್ಲಿದ್ದಾಗ ಅವರು ಡ್ರೈವರ್ ಮಹಾಶಯನಿಗೆ ಹೇಳಿರುತ್ತಾರೆ:: " ವಾಹನ ಚಾಲಕನೇ ! ನೋಡು ಅಲ್ಲಿ ಹಲ್ಲು ಕಿರಿಯುತ್ತಾ ವೇವ್ ಮಾಡುತ್ತಿರುವ ವ್ಯಕ್ತಿಯನ್ನು ನೋಡು . ಅವನ ಮುಖವನ್ನು ಕಾರಿನ ಕ್ಯಾಮೆರಾದಲ್ಲಿ ಸೆರೆ ಹಿಡಿ. ಆವನು ಯಾರು, ಹೆಸರೇನು, ವಿಳಾಸವೇನು ಎಂಬುದು ನನಗೆ ತಿಳಿಯಬೇಕು. ನನಗೆ ಮಾಹಿತಿ ೨೪ ಗಂಟೆಯೊಳಗೆ ಬೇಕು. .. ೨೪ ಏನು ೧೨ ಗಂಟೆಯ ಒಳಗೇ ಅವರಿಗೆ ಮಾಹಿತಿ ಸಿಕ್ಕಿರುತ್ತೆ !"
" ಅಂತೂ ನಿಮ್ಮ ವಿಷಯ ಎಲ್ಲಾ ಅಂಬಾನೀಯವರಿಗೆ ತಿಳಿದಿದೆ !"
" ಅವತ್ತು ನಮ್ಮಿಬ್ಬರ ಮಧ್ಯೆ ಇನ್ನೊಂದು ಸಂಬಧವೂ ಹುಟ್ಟಿತು. ನಮ್ಮಿಬ್ಬರ ಮಧ್ಯೆ ಒಂದು ತರಹ ವಿದ್ಯುತ್ ಶಕ್ತಿಯ ವಿನಿಮಯ ವಾಯಿತು. "
"ಬ್ಯಾಟರಿ, ಜನರೇಟರ್ ಇಲ್ಲದೆಯೇ ? "
". ನನ್ನ ಹೆಸರಿನ ಕಡೆಯ ಅಕ್ಷರವೂ ಅವರ ಹೆಸರಿನ ಕಡೆಯ ಅಕ್ಷರವೂ ಒಂದೇ !"
" ! ಇದು ವೇವ್ ವೇವ್ ಅಲ್ಲದೆ ಶ್ ಶ್ ಸಂಬಂಧ !"
" ಹಾಸ್ಯ ಮಾಡ್ತಿರು. ಎಲ್ಲ ದೊಡ್ಡವರು ನಮ್ಮಂತಹ ಅಭಿಮಾನಿಗಳಿಗೆ % ಆಹ್ವಾನಪತ್ರಿಕೆಗಳನ್ನು ಮೀಸಲಾಗಿಟ್ಟುಕೊಂಡಿರುತ್ತಾರೆ. ಅಂದರೆ ಒಟ್ಟು ಹತ್ತು ಸಾವಿರ ಜನರನ್ನು ಕರೆದರೆ ನಮ್ಮಂತಹವರು ನೂರಾದರೂ ಇರ್ತಾರೆ. .. ನೋಡ್ತಾ ಇರು ! . ಅವರೆ ಬಂದು ನಮ್ಮಿಬ್ಬರನ್ನೂ ಆಹ್ವಾನಿಸಬಹುದು "
" ಹೌದು ಬರಬಹುದು. ಬರಬಹುದು ಕಾಯೋಣ "
.......................................................
ಒಂದು ವಾರದ ಆನಂತರ
" ಏನು, ನಿಮ್ಮ್ಮ್ಮ ಅಂಬಾನಿ ಕಡೆಯವರು ಯಾರೂ ಬರಲೇ ಇಲ್ಲ"
" ಪಾಪ ! ನಾವೂ ಅಂತಹ ದೊಡ್ಡವರ ತೊಂದರೆಗಳನ್ನು ಅರ್ಥಮಾಡಿಕೊಳ್ಳಬೇಕು . ಮುಖೇಶ್ ನಮ್ಮ ಪರ ಮಾತಾಡಿರ್ತಾರೆ. ಅದರೆ ನೀತಾಜಿ ತಮ್ಮ .ಪಿ.ಎಲ್ ಕ್ರಿಕೆಟ್ ಟೀಮನ್ನು ನೆನಸಿಕೊಂಡು ಹರಭಜನ್ ಮರೆತು ಹೋಯ್ತಲ್ಲ ಅಂತಾರೆ. ಆಗ ನನಗೆ ಬರಬೇಕಾದ ಆಹ್ವಾನ ಅವರಿಗೆ ಹೋಗಿರುತ್ತೆ . ಏನು ಮಾಡೋದು ?"
" ನನ್ಗೇನನ್ನಿಸ್ಸುತ್ತೆ ಗೊತ್ತಾ. ಆಗ ನೀತಾಜಿ ಹೇಳಿರ್ತಾರೆ " ಸತಿ ಇಲ್ಲದಿದ್ದರೂ ನಮಗೆ ಮೊಮ್ಮಗು ಹುಟ್ಟುತ್ತಲ್ಲ, ಅದರ ನಾಮಕರಣಕ್ಕೆ ನಿಮ್ಮ ಚೌಪಾತಿಯ ಅಭಿಮಾನಿಯನ್ನು ಕರೆದೇ ಕರೆಯೋಣ.. ಅದಿರಲಿ ಯಾವತ್ತಾ ದರೂ ಚೌಪಾತೀಲಿ ನಿಮಗೆ ದೀಪಿಕಾ ಪದುಕೋಣೆ ಸಿಕ್ಕಿದ್ದರಾ? "
--------------- ಪಾಲಹಳ್ಳಿ ವಿಶ್ವನಾಥ್
















No comments:

Post a Comment