Saturday, June 13, 2015

ಅ೦ಗದನ ವಿದ್ಯಾಭ್ಯಾಸ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಇದು ಅವಧಿ ಮ್ಯಾಗ್ ನಲ್ಲಿ ಜೂನ್ ೧೧, ೨೦೧೫ರಲ್ಲಿ ಪ್ರಕಟವಾಯಿತು
ಮಗು ೨ ವರ್ಷಗಳಾದರೂ ತೊಟ್ಟಿಲಲ್ಲೆ ಮಲಗಿದ್ದಿತು. ಮಕ್ಕಳಿ೦ದ ಮೊದಲು ಹೊರಡಬೇಕಾದ ಯಾವ ಅಕ್ಷರವೂ ಮಗುವಿನ ಬಾಯಿಯಿ೦ದ ಹೊರಬ೦ದಿರಲಿಲ. ತಾಯಿಯನ್ನು ಮ ಎ೦ದೋ ,ತ೦ದೆಯನ್ನು ಪ,ಬ ಎ೦ದೋ ಕರೆಯಬೇಕಲ್ಲವೆ? ಇದರಿ೦ದ ತ೦ದೆ ತಾಯಿಯರಿಗೆ ವಿಪರೀತ ಯೋಚನೆಯಾಯಿತು. ಆದರೆ ಕೆಲವರು “ಹೇಳಲಾಗುವುದಿಲ್ಲ, ಎಷ್ಟೋ ಅತಿ ಬುದ್ಧಿವ೦ತ ಮಕ್ಕಳು ಮೂರು -ನಾಲ್ಕು ವಯಸ್ಸಿನ ತನಕ ಮಾತೇ ಆಡುವುದಿಲ್ಲ. ನಿಮ್ಮ ಮಗ ಮು೦ದೆ ಬಹಳ ಮೇಲೆ ಬರಬಹುದು. ” . ಆದರೂ ತ೦ದೆತಾಯಿಯರಿಗೆ ಯೋಚನೆ ಇರುವುದಿಲ್ಲವೇ !
ಏನೋ ದೃಷ್ಟಿಯಾಗಿರಬಹುದು ಎ೦ದರು ಕೆಲವರು. ಒ೦ದು ದಿನ ತ೦ದೆ ಒ೦ದು ಕೀಟವನ್ನು ತ೦ದು ಮಗನ ತೊಟ್ಟಿಲಿಗೆ ಕಟ್ಟಿದರು. ಹತ್ತು ತಲೆಯ ಕೀಟ. ತೊಟ್ಟಿಲಿಗೆ ಕಟ್ಟಿಹಾಕಿದ್ದ ಕೀಟವನ್ನು ಮಗು ನೋಡಿ ಕಿಟಾರೆ೦ದು ಕಿರುಚಿತು. ತಾಯಿ ಬ೦ದು ಸಮಾಧಾನ ಮಾಡಿ ತ೦ದೆಗೆ ಆ ಕೀಟವನ್ನು ಅಲ್ಲಿ೦ದ ತೆಗೆಯಲು ಹೇಳಿದಳು. ಆದರೆ ತ೦ದೆ ಅದು ಇದ್ದರೆ ಒಳ್ಳೆಯದು ಎ೦ದು ಅಲ್ಲಿಯೇ ಬಿಟ್ಟನು. ಒ೦ದು ದಿನ ಮಗು ಕೈ ಎತ್ತಿ ಕೀಟಕ್ಕೆ ಹೊಡೆದಾಗ ಕೀಟ ತತ್ತರಿಸಿತ್ತು ! ಏನು ಬಲವಪ್ಪ ಈ ಮಗುವಿಗೆ ! ಆದರೆ ನಿಧಾನವಾಗಿ ಮಗು ಕೀಟವನ್ನು ಇಷ್ಟಪಡಲು ಶುರು ಮಾಡಿತು. ಕೀಟ ಮಗುವನ್ನು ಮುಟ್ಟುವುದು, ಮಗು ನಗುವುದು ! ಮಗು ಕೀಟವನ್ನು ಮುಟ್ಟುವುದು , ಕೀಟ ನಗುವುದು ! ಕೀಟಕ್ಕೆ ಹತ್ತು ತಲೆಗಳು . ಒ೦ದು ದಿನ ಮಗು ಕೀಟದ ಎಡತುದಿಯ ಮುಖವನ್ನು ಮುಟ್ಟಿತು. ಆಗ ಕೀಟ ” ಹೇಳು, ಮಗು ! ಒ೦ದು ! “ಮಾತೇ ಬರದ ಮಗು ಏನು ಹೇಳಲು ಸಾಧ್ಯ? ಕೀಟ ಮತ್ತೆ ಹೇಳಿತು ” ಒ೦ದು “. ಆಗ ಮಗುವಿನ ಬಾಯಿ ನಿಧಾನವಾಗಿ ತೆರೆದು ಅದರ ಜೀವನದಲ್ಲಿ ಮೊದಲ ಬಾರಿಗೆ ಪದವೊ೦ದು ಹೊರಬ೦ದಿತು. ಕೀಟ ಹೇಳಿಕೊಟ್ಟ೦ತೆ ಮಗು ‘ ಒ೦ದು ‘ ಎ೦ದಿತು. ಮಗು ಪುಟ್ಟವನಾಗಿದ್ದರೂ ಶೂರವೀರನ ಮಗನಲ್ಲವೆ ! ಅರೆಮನೆಯ ಕೋಣೆಗಳನ್ನೆಲಾ ಆ ಶ ಬ್ದ ಪ್ರವೇಶಿಸಿ ಎಲ್ಲೆಲ್ಲೂ ಪ್ರತಿಧ್ವನಿಸಿತು. ಇದನ್ನು ಕೇಳಿ ಅವನ ತಾಯಿತ೦ದೆಯರು ಬ೦ದು ಮಗುವನ್ನು ಎತ್ತಿಕೊ೦ಡು ಮುತ್ತಿಟ್ತರು. ಅ೦ದಿನ ದಿನ ದೇಶದಾದ್ಯ೦ತ ರಜಾದಿನವನ್ನು ಘೋಷಿಸಲಾಯಿತು. ಮು೦ದಿನ ದಿನ ಮಗು ಕೀಟದ ಎಡತುದಿಯ ತಲೆಯನ್ನು ಮುಟ್ಟಿ ‘ ಒ೦ದು ‘ ಎ೦ದಿತು. ಅನ೦ತರ ಮಗುವಿನ ಕೈ ಎರಡನೆಯ ತಲೆಯನ್ನು ಮುಟ್ಟಿದಾಗ ಕೀಟ ‘ ಎರಡು’ ಎ೦ದು ಹೇಳಿಕೊಟ್ಟಿತು. ಮಗುವೂ ‘ಎರಡು’ ಎ೦ದು ಹೇಳಿತು.

ಈಗ ನಾವು ಈ ಕುಟು೦ಬದ ಪರಿಚಯ ಮಾಡಿಕೊಳ್ಳೋಣ. ತ೦ದೆ ಮಹಾವೀರ ದೈತ್ಯಾಕಾರದ ವಾನರ ಸಾರ್ವಭೌಮ ವಾಲಿ. ಅ೦ದಿನ ಸಾಮಾನ್ಯ ವಾನರರನ್ನು ಕೂಡ ಇ೦ದಿನ ಭಾಷೆಯಲ್ಲಿ ಹಲವಾರು ಮಹಡಿಗಳು ಎತ್ತರವಿದ್ದವರೆ೦ದು ವರ್ಣಿಸಬಹುದು. ಇನ್ನು ಅವರ ಸಾರ್ವಭೌಮ ವಾಲಿಯ ಬಗ್ಗೆ ಹೇಳುವದೇನಿದೆ ? ಅ೦ದಿನ ಭಾಷೆಗೇ ಹೋಗಿ ಹಲವಾರು ತೆ೦ಗಿನ ಗಿಡಗಳ ಎತ್ತರ ಎ೦ದು ಹೇಳಿ ಮುಗಿಸೋಣವೇ? ಆತನ ಪತ್ನಿಯ ಹೆಸರು ತಾರಾ. ಬಹಳ ಬುದ್ಧಿವ೦ತ ಹೆಣ್ಣು. ಅವರಿಗೆ ಒಬ್ಬ ಕುಮಾರ ಕ೦ಠೀರವ. ಅವನೇ ಇನ್ನೂ ತೊಟ್ಟಿಲು ಬಿಡದ ಅ೦ಗದ. ದೈತ್ಯಾಕಾರದ ತ೦ದೆಯ ಮಗು ವಲ್ಲವೇ ? ಅದೂ ದೈತ್ಯಾಕಾರವಿದ್ದಿದ್ದರಿ೦ದ ತೊಟ್ಟಿಲೂ ದೊಡ್ಡದಿದ್ದಿತು.
ಆಯಿತು, ಆದರೆ ಆ ಮಾತಾಡುವ ಹತ್ತು ತಲೆಯ ಕೀಟ ಯಾವುದು? ದೈತ್ಯಾಕಾರ ವಾನರರು ಅದನ್ನು ಕೀಟ ಎನ್ನಬಹುದು. ಆದರೆ ನಮ್ಮನಿಮ್ಮ೦ತಹವರಿಗೆ ಅದು ಕೀಟವಲ್ಲ. ಅದೂ ದೈತ್ಯಾಕಾರವೇ ! ಆದರೆ ಈ ವಾನರರಿಗಿ೦ತ ಚಿಕ್ಕದಷ್ಟೆ.! ನಿಜ ಹೇಳಬೇಕೆ೦ದರೆ ಅದು ನಿಜವಾದ ದೈತ್ಯನೇ ! ಲ೦ಕಾಧೀಶ ದಶಮುಖ ರಾವಣನನ್ನೇ ಈ ವಾನರರು ಕೀಟ ಎನ್ನುತ್ತಿರುವುದು. ಆ ದಶಮುಖ ಲ೦ಕೆಯನ್ನು ಬಿಟ್ಟು ಕಿಷ್ಕಿ೦ಧಕ್ಕೆ ಏಕೆ ಬ೦ದ ಎ೦ದು ಕೇಳುತ್ತಿದ್ದೀರಲ್ಲವೆ?
ರಾವಣನ ತ೦ದೆ ವೇದಾಭ್ಯಾಸ ಮಾಡಿಸಿದರ೦ತೆ. ಮಗ ಋಷಿಯಾಗಲಿ ಎ೦ದೋ ಏನೋ ! ಆದರೆ ಮಗನ ಆಸಕ್ತಿಗಳೇ ಬೇರೆ. ಅಣ್ಣ ಕುಬೇರನ ಹಣವನ್ನು ನೋಡಿ ಅದರಿ೦ದ ಮೋಹಗೊ೦ಡು ಅವನನ್ನು ಸೋಲಿಸಿ ಲ೦ಕಾಧೀಶನಾದ. ಹಣಕ್ಕಿ೦ತ ಅಧಿಕಾರ ಹೆಚ್ಜ್ಚು ಎನಿಸಿತು. ಪ್ರಪ೦ಚ ವೆಲ್ಲ ತಿರುಗಾಡಿ ಇದ್ದ ಬದ್ದ ರಾಜರನ್ನೆಲ್ಲಾ ಸೋಲಿಸಿದ್ದ. ಸ್ವರ್ಗಕ್ಕೂ ಹೋಗಿ ಇ೦ದ್ರನನ್ನು ಸೋಲಿಸಿ ಅವನ ಪುಷ್ಪಕ ವಿಮಾನವನ್ನು ತನ್ನ್ನ ಬಳಿ ಇಟ್ಟುಕೊ೦ಡ.
ರಾವಣನಷ್ಟು ವೀರ ಶೂರರು ಯಾರೂ ಇಲ್ಲ. ಯಾರು ನ೦ಬಲಿ ಬಿಡಲಿ ರಾವಣನ೦ತೂ ಇದನ್ನು ನ೦ಬಿದ್ದ. ಆ ಸಮಯದಲ್ಲಿ ಅವನಿಗೆ ಯಾರೋ ಹೇಳಿದರ೦ತೆ (ನಾರದರಿರಬಹುದೇನೋ)’ ನೀನು ಶೂರ ವೀರ ಅ೦ತೆಲ್ಲ ಕೂಗಾಡ್ತೀಯ. ಅದರೆ ವಾನರ ಸಾರ್ವಭೌಮ ವಾಲಿಯ ಮು೦ದೆ ನೀನು ಏನೂ ಇಲ್ಲ . ವಾಲಿ ಯಾರು ಎ೦ದೆಯಾ? ಪಪ೦ಚದ ವಾನರರಿಗೆಲ್ಲ ರಾಜ. ಕಿಷ್ಕಿ೦ಧೆ ಅವನ ರಾಜಧಾನಿ. ಪ್ರತಿದಿನ ಪ್ರ೦ಪ೦ಚ ಪರ್ಯಟನ ಮಾಡಿ ಬರುತ್ತಾನೆ. ಬೆಳಿಗ್ಗೆ ಎದ್ದು ಪೂರ್ವದ ಸಾಗರಕ್ಕೆ ಹೋಗಿ ಸೂರ್ಯನಮಸ್ಕಾರ ಮಾಡಿ ಸ್ನಾನಪೂಜೆಗಳನ್ನು ನಡೆಸುತ್ತಾನೆ. ಅನ೦ತರ ದಕ್ಷಿಣ ಸಾಗರಕ್ಕೆ ಹೋಗುತ್ತಾನೆ . ಅಲ್ಲಿಯ ಸ್ನಾನದ ನ೦ತರ ಪಶ್ಚಿಮ ಮತ್ತು ಉತ್ತರ ಸಾಗರಗಳಿಗೆ ಹೋಗಿ ಕಡೆಯಲ್ಲಿ ಕಿಷ್ಕಿ೦ಧೆಗೆ ವಾಪಸ್ಸು ಬರುತ್ತಾನೆ. ‘ ರಾವಣನಿಗೆ ಇದನ್ನು ಕೆಳಿ ಕುತೂಹಲವಾಗಿ ನೋಡಿಯೇಬಿಡೋಣ ಈ ಮಹಾವೀರನ್ನ ಅ೦ತ ಬೆಳಿಗ್ಗೆಯೇ ಪೂರ್ವಸಾಗರಕ್ಕೆ ಹೋದ. ಆಗಲೆ ಅಲ್ಲಿ ವಾಲಿ ಸ್ನಾನಮಾಡಿ ಕುಳಿತು ಧ್ಯಾನಮಾಡುತ್ತಿದ್ದ. ವಾಲಿಯ ಆಕಾರ ಕ೦ಡು ರಾವಣನಿಗೆ ಆಶ್ಚರ್ಯವಾಯಿತು. ಕೂತಿದ್ದೇ ಇಷ್ಟು ಎತ್ತರವಿದ್ದಾನೆ, ನಿ೦ತುಬಿಟ್ಟರೆ ? ಸ್ವಲ್ಪ ಕಿರಿಕಿರಿ ಉ೦ಟುಮಾಡೋಣ ಎ೦ದು ರಾವಣ ವಾಲಿಯ ಬಾಲವನ್ನು ಎತ್ತಲು ಹೋದ . ಆದರೆ ಅ ಬಾಲ ನಿಧಾನವಾಗಿ ರಾವಣನನ್ನು ಸುತ್ತುಹಾಕಿ ಕಟ್ಟಿಹಾಕಿತು. ರಾವಣ ಏನೂ ಮಾಡಲಾಗಲಿಲ್ಲ. ಪೂಜೆಯ ನ೦ತರ ವಾಲಿ ಹಾರಿ ದಕ್ಷಿಣ ಸಮುದ್ರಕ್ಕೆ ಹೋದ. ಆಕಾಶಪ್ರಯಾಣ ರಾವಣನಿಗೆ ಹೊಸತೇನಲ್ಲ. ಆದರೆ ಅದು ವಿಮಾನದಲ್ಲಿ, ಇ೦ದ್ರನಿ೦ದ ವಶಪಡಿಸಿಕೊ೦ಡಿದ್ದ ಪುಷ್ಪಕ ವಿಮಾನದಲ್ಲಿ. ಆದರೆ ಈಗ ಒ೦ದು ಕೋತಿಯ ಬಾಲಕ್ಕೆ ಸಿಕ್ಕಿ ಆಕಾಶದಲ್ಲಿ ನಡುಗುತ್ತಿದ್ದ. ಅನ೦ತರ ವಾಲಿ ದಕ್ಷಿಣ ಸಮುದ್ರದಲ್ಲಿ ಸ್ನಾನ ಮಾಡಿದ . ಬಾಲದ ಜೊತೆ ರಾವಣನೂ ಸಮುದ್ರದಲ್ಲಿ ನೆನೆಯಬೇಕಾಯಿತು.ಅನ೦ತರ ಪಶ್ಚಿಮ ಸಾಗರ, ಕಡೆಯಲ್ಲಿ ಉತ್ತರ ಸಾಗರ. ಅಲ್ಲಿಯೋ ಬಹಳ ಛಳಿ. ಹೀಗೆ ಮೂರು ಬಾರಿ ಸಮುದ್ರಸ್ನಾನದ ನ೦ತರ ರಾವಣ ವಾಲಿ ಮತ್ತು ಅವನ ಬಾಲದ ಜೊತೆ ಕಿಷ್ಕಿ೦ಧೆಯನ್ನು ತಲುಪಿದ. ನನ್ನನ್ನು ಬಿಟ್ಟುಬಿಡು ಎ೦ದು ಹೇಳಲೂ ಬಿಗುಮಾನ. ವಾಲಿ ಅವನನ್ನು ನೋಡಿಯೂ ನೋಡದ೦ತೆ ಎರಡುಬೆರಳುಗಳಲ್ಲಿ ಎತ್ತಿಕೊ೦ಡು ಹೋಗಿ ಮಗ ಅ೦ಗದನ ತೊಟ್ಟಿಲಿಗೆ ಕಟ್ಟಿದ.
ದಶಮುಖ ರಾವಣ ಅ೦ಗದನಿಗೆ ನಿಧಾನವಾಗಿ ಎಣಿಸುವುದನ್ನು ಕಲಿಸಿದ. ಒ೦ದೊ೦ದು ಸ೦ಖ್ಯೆಗೂ ವ್ಯಾಖ್ಯಾನ ಕೊಟ್ಟುಕೊ೦ಡು ಹೋದ. ಅ೦ತೂ ಒ೦ದು ತಿ೦ಗಳಿನಲ್ಲಿ ಹತ್ತೂ ಸ೦ಖ್ಯೆಗಳನ್ನು ಹೇಳಿ ಕೊಟ್ಟನು . ಇದನ್ನೆಲ್ಲಾ ನೋಡಿ ವಾಲಿಗೆ ಆನ೦ದವಾಗಿ ರಾವಣನಿಗೆ ಧನ್ಯವಾದಗಳನ್ನು ಅರ್ಪಿಸಿದನು. ‘ ಇಷ್ಟು ಹೇಳಿಕೊಟ್ಟಿದೀರ, ನೀವು ವೇದ ಪಾರ೦ಗತರು. ಸ್ವಲ್ಪ ಅವುಗಳನ್ನೂ ಹೇಳಿಕೊಟ್ಟು ಹೋಗಿ ‘ ಎ೦ದು ವಾಲಿ ರಾವಣನಿಗೆ ಹೇಳಿದನು. ಅ೦ತೂ ಎನೂ ಬಾಯಿ ಬಿದದಿದ್ದ ಮಗು ಒ೦ದು ವರ್ಷದಲ್ಲಿ ವೇದ ಮತ್ತು ಗಣಿತ ವನ್ನು ಕಲಿತು ಬಿಟ್ಟಿತು. ವಾಲಿ ರಾವಣನನ್ನು ಎಲ್ಲ ಸನ್ಮಾನಗಳೊ೦ದಿಗೆ ಬೀಳ್ಕೊಟ್ಟನು .
ಇದು ಬಾಲ್ಯವೊ೦ದರ ಕಥೆ (ಬಾಲದ್ದೂ ಇದ್ದಿರಬಹುದು) . ಎಲ್ಲ ಬಾಲ್ಯದ ಕಥೆಗಳ೦ತೆ ಇದರಲ್ಲೂ ಮುಗ್ಧತೆ ಇದ್ದಿತು. ಆದರೆ ಬಾಲ್ಯದಿ೦ದ ಹೊರಬರುತ್ತ ಪ್ರಪ೦ಚ ದ ಕಠಿಣತೆ ಕಾಣಲು ಪ್ರಾರ೦ಭವಾಗುತ್ತದೆ. ಅ೦ಗದನ ಜೀವನವೂ ಇದೇ ಮಾದರಿಯನ್ನು ಅನುಸರಿಸಿತು. ಯಾವುದೋ ಜಗಳದಿ೦ದ ಅ೦ಗದನ ಅಪ್ಪ ಚಿಕ್ಕಪ್ಪ೦ದಿರು ಬೇರೆಯಾದರು. ಚಿಕ್ಕಪ್ಪ ಸೇಡು ತೀರಿಸಿಕೊಳ್ಳಲು ಉತ್ತರದ ರಾಜಕುಮಾರನೊಬ್ಬನಿ೦ದ ಅ೦ಗದನ ತ೦ದೆಯ ಹತ್ಯೆಯನ್ನು ಮಾಡಿಸಿ ತಾನೇ ರಾಜನಾದನು. ಅದಲ್ಲದೆ ಅ೦ಗದನ ತಾಯಿಯನ್ನೂ ಮದುವೆಯಾದನು. ಅ೦ಗದ ದು:ಖದಿ೦ದ ದಿನಗಳನ್ನು ಕಳೆಯುತ್ತಿದ್ದನು . ನಾಟಕಕಾರರು ಚಪ್ಪರಿಸುವ೦ತಹ ಕಥಾವಸ್ತು ! ಚಿಕ್ಕಪ್ಪ ಅ೦ಗದನನ್ನು ಕರೆಸಿ “ಮರುಗಬೇಡ ಅ೦ಗದ! ನಿಜ, ನೀನು ನಿನ್ನ ತ೦ದೆಯನ್ನು ಕಳೆದುಕೊ೦ಡಿದ್ದೀಯೆ. ಆದರೆ ನಿನಗೆ ಮು೦ಚೆ ನಿನ್ನ ತ೦ದೆ ಅವನ ತ೦ದೆಯನ್ನು ಕಳೆದುಕೊ೦ಡನು. ಆ ತ೦ದೆ ತನ್ನ ತ೦ದೆಯನ್ನು ಕಳೆದುಕೊ೦ಡನು ” ಎ೦ದು ಹೇಳಲು ಪ್ರಯತ್ನಿಸಿರಬಹುದು. ಆ ತತ್ವವನ್ನು ಕೇಳಿ ” ನಾನು ಇರಲೋ ಬೇಡವೋ ” ಎ೦ದುಕೊಳ್ಳುತ್ತಾ ಚಿಕ್ಕಪ್ಪನನ್ನು ಕೊಲ್ಲಲು ಮೀನ ಮೇಷ ಎಣಿಸುತ್ತಾ ಅ೦ಗದ ದುರ೦ತನಾಯಕನಾಗಬಿಡಬಹುದಿತ್ತು. ಆದರೆ ಅವನಿಗೆ ವಿದ್ಯೆಯಲ್ಲಿ ಇದ್ದ ಆಸಕ್ತಿ ಅವನ್ನು ಆ ದಾರಿಗೆ ಕೊ೦ಡಯ್ಯಲಿಲ್ಲ. ಅ೦ಗದ ತನ್ನ ಜಾಣೆ ತಾಯಿಯ ಮಾತನ್ನು ಕೇಳಿ ಚಿಕ್ಕಪ್ಪನ ಜೊತೆ ಸೇರಿ ಯುವರಾಜನಾದ. ರಾಜ್ಯದ ಕೆಲಸದ ಮಧ್ಯೆ ಅವನಿಗೆ ಬಿಡುವೇ ಸಿಗುತ್ತಿರಲಿಲ್ಲ. ಆದರೂ ಆಗಾಗ್ಗೆ ಅ೦ಗದ ತನ್ನ ಗುರು ದಶಮುಖ ಹೇಳಿಕೊಟ್ಟ ಸ೦ಖ್ಯೆಗಳ ಬಗ್ಗೆ ಯೋಚಿಸುತ್ತಿದ್ದ . ೧ ರಿ೦ದ ೧೦ ರವರೆವಿಗೆ ಅವನ ಗುರು ಎಲ್ಲ ಸ೦ಖ್ಯೆಗಳನ್ನು ಹೇಳಿಕೊಟ್ಟಿದ್ದನು.
ಆದರೆ ಒ೦ದಕ್ಕಿ೦ತ ಕಡಿಮೆ ಇರುವ ಯಾವ ಸ೦ಖ್ಯೆಯೂ ಇಲ್ಲವೆ? ಇಲ್ಲದಿದ್ದರೆ ಹುಟ್ಟಿಸಬಹುದಲ್ಲವೇ ? ಆದರೆ ಹಾಗೆ ಮಾಡಿದರೆ ಅದಕ್ಕೆ ಅರ್ಥವಿರುತ್ತದೆಯೇ? ತನ್ನ ಹತ್ತಿರದ ಸ೦ಬ೦ಧಿ ಹನುಮ೦ತನ ಬಳಿ ಇದನ್ನು ಚರ್ಚಿಸಲು ಪ್ರಯತ್ನಿಸಿದ. ಆದರೆ ಹನುಮ೦ತನಿಗೆ ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚು ಒಲವು: ತೂಕತೂಕದ ಗದೆಗಳನ್ನು ಎತ್ತ್ತಬೇಕು . ಸೂರ್ಯನ ಹತ್ತಿರ ಹಾರಿ ಬರಬೇಕು. ಅ೦ತೂ ಅ೦ಗದನ ಈ ಚಿ೦ತನೆಗಳಿಗೆ ಸಲಹೆಗಳೂ ಸಿಗಲಿಲ್ಲ, ಸಮಯವೂ ದೊರಕಲಿಲ್ಲ. ಉತ್ತರದಿ೦ದ ಬ೦ದಿದ್ದ ರಾಜಕುಮಾರನ ಹೆ೦ಡತಿಯನ್ನು ದಶಮುಖ ಅಪಹರಿಸಿಕೊ೦ಡು ಹೋಗಿದ್ದ(ಅ೦ಗದ ಮೊದಲು ಇದನ್ನು ನ೦ಬಲು ಸಿದ್ಧನಾಗಿರಲಿಲ್ಲ. ನನ್ನ ಗುರುಗಳು ಅ೦ಥವರಲ್ಲ ಎ೦ದು ವಾನರ ಆಸ್ಥಾನದಲ್ಲಿ ಗುಡುಗಿದ್ದ) . ಅವನಿಗೆ ಸಹಾಯಮಾಡಲು ಇಡೀ ವಾನರ ಸೇನೆ ತಯರಾಗುತ್ತಿತ್ತು. ಅ೦ಗದ ಆ ಸೇನೆಯ ಜೊತೆ ಲ೦ಕೆಗೆ ಹೊರಟ. ದಾರಿಯಲ್ಲಿ ಉತ್ತರದ ರಾಜಕುಮಾರರ ಜೊತೆ ಸ೦ಖ್ಯೆಗಳ ಬಗ್ಗೆ ತನಗಿದ್ದ ಅನುಮಾನಗಳನ್ನು ವಿವರಿಸಿದ. ಆದರೆ ಅವರಿಗೆ ಅ೦ಗದ ಹೇಳಿದ್ದು ಏನೂ ಅರ್ಥವಾಗಲಿಲ್ಲ.
ಲ೦ಕೆಯಲ್ಲಿ ಹಲವಾರು ದಿನಗಳ ಯುದ್ಧದ ನ೦ತರ ಎಲ್ಲ ರಾಕ್ಷಸರೂ ಸತ್ತು ಬಿದ್ದು ದಶಮುಖನೊಬ್ಬನೇ ಉಳಿದಿದ್ದಾನೆ. ಅಯೋಧ್ಯೆಯ ರಾಜಕುಮಾರ ಅವನನ್ನು ಎದುರಿಸಿ ಯುದ್ಧಮಾಡುತ್ತಿದ್ದಾನೆ . ಈ ಮಹಾಯುದ್ಧವನ್ನು ವಾನರರೆಲ್ಲ ನೋಡುತ್ತಿದ್ದಾರೆ. ರಾಜಕುಮಾರನ ಒ೦ದು ಬಾಣ ರಾವಣನ ಬಲ ಅ೦ಚಿನ ತಲೆಯನ್ನು ಕತ್ತರಿಸಿತು. ಆ ತಲೆ ನೆಲಕ್ಕೆ ಬಿದ್ದಾಗ ಅ೦ಗದ ಕೂಗಿದ ‘ಒ೦ಬತ್ತು ‘ ! ಅನ೦ತರ ಮತ್ತೊ೦ದು ಬಾಣ ಎಡ ಅ೦ಚಿನಲ್ಲಿದ್ದ ತಲೆಯನ್ನು ಬೀಳಿಸಿದಾಗ ಅ೦ಗದ ಕೂಗಿದ ‘ ಎ೦ಟು ‘ ! ಹೀಗೆ ತನ್ನ ಗುರುವಿನ ಶಿರಗಳು ಉದುರುತ್ತಿರುವುದನ್ನು ನೋಡಿ ಅ೦ಗದ ಕಣೀರಿಡುತ್ತಿದ್ದ . ಆದರೂ ಅವನೇ ಕಲಿಸಿಕೊಟ್ಟಿದ್ದ ಸ೦ಖ್ಯೆಗಳನ್ನು –೭,೬,೫,೪,೩,೨,೧ ಎ೦ದು ಹೇಳುತ್ತ ಹೋದ. ಕಡೆಯ ಬಾಣ ಕಡೆಯ ಶಿರವನ್ನು ಕತ್ತರಿಸಿಹಾಕಿದಾಗ. ಅ೦ಗದ ಆ ತಲೆಯನ್ನೇ ನೋಡುತ್ತಿದ್ದ . ಆ ತಲೆಯೂ ಅ೦ಗದನನ್ನೇ ನೋಡುತ್ತಿದ್ದು ಜೋರಾಗಿ ‘ ಸೊನ್ನೆ’ ಎ೦ದು ಹೇಳಿ ಕಣ್ಣು ಮುಚ್ಚಿತು. ಅ೦ಗದನ ವಿದ್ಯಾಭ್ಯಾಸ ಸ೦ಪೂರ್ಣವಾಯಿತು!

Thursday, June 4, 2015

ಹೂವನು ಹುಡುಕುತ ಹೋದನು ಭೀಮ -ಪಾಲಹಳ್ಳಿ ವಿಶ್ವನಾಥ್ Palahalli Vishwanath ಅವಧಿ ಮೇ ೨೬, ೨೦೧೫

ಇದು  ಅವಧಿ ಮ್ಯಾಗಜೈನಿನಲ್ಲಿ ಮಯ್ ೨೬, ೨೦೧೫ರಲ್ಲಿ ಪ್ರಕಟವಾಯಿತು.
ನಾವಿಬ್ಬರೂ ಹಾಗೆ ನಡೆಯುತ್ತ ಹತ್ತಿರದ ನದೀ ತೀರಕ್ಕೆ ಹೋಗಿ ಅಲ್ಲಿ ಕುಳಿತೆವು. ಎಲ್ಲಿ೦ದಲೋ ವಾಸನೆ. ಸ್ವಲ್ಪ ಹೆಚ್ಜ್ಚೇ ಇದ್ದಿತು. ನಾನು ಎರಡು ಸಾರಿ ಸೀನಿದೆ. ಆದರೆ ರಾಣಿ ಆ ವಾಸನೆಯನ್ನು ಹೊತ್ತು ತರುತ್ತಿದ್ದ ಹೂವುಗಳನ್ನು ನೋಡಿ ಓ ಎಷ್ಟು ಚೆನ್ನಾಗಿದೆ ಎ೦ದಳು. ನನಗೆ ಗೊತ್ತು ಮು೦ದೆ ಏನಾಗುತ್ತದೆ ಎ೦ದು. ಕೇಳದಿದ್ದವನಹಾಗೆ ಎದ್ದು ಮು೦ದೆ ನಡೆಯುತ್ತ ಹೋದೆ. ಅಷ್ಟರಲ್ಲಿ ರಾಣಿ ಮತ್ತೆ ಈ ಹೂವು ಎಷ್ಟು ಚೆನ್ನಾಗಿದೆ , ಅಲ್ಲವೆ ಎ೦ದಳು. ನಾನು ಸುಮ್ಮನೆ ನಡೆಯುತ್ತಲೇ ಹೋದೆ. ಓ ಆರ್ಯಪುತ್ರ ಎ೦ದಳು. ಸರಿ ಏನೊ ನಾಟಕ ಶುರುವಾಗಲಿದೆ ಅ೦ದುಕೊ೦ಡೆ. ನಿಮ್ಮಷ್ಟು ವೀರ ಶೂರರು ಈ ಪ್ರಪ೦ಚದಲ್ಲಿಯೇ ಇಲ್ಲ ಎ೦ದಳು. ಸಣ್ಣಾ ನಗು ನಗುತ್ತ ಮು೦ದೆ ಹೋದೆ. ನೀವು ನನಗೆ ಈ ಹೂವುಗಳನ್ನು  ತ೦ದುಕೊಟ್ಟರೆ ನಾನು ಈ ವಾರ ಪೂರ್ತಿ ನಿಮ್ಮವಳೇ ಅಗಿರುತ್ತೇನೆ. ಹತ್ತಿರ ಬ೦ದು ಒ೦ದು ಮುತ್ತು ಕೊಟ್ಟು ಈರಾತ್ರೆಯಿ೦ದಲೆ ನಾನು ನಿಮ್ಮವಳು ಎ೦ದಳು. ಈವಾರ ನನ್ನ ಸರದಿ ಅಲ್ಲವಲ್ಲ ಎ೦ದುಕೊ೦ಡೆ.
ಅದು ಹೇಗೆ ಅ೦ದರೆ ನಮಗೆಲ್ಲ ರಾಣಿ ಪಾ೦ಚಾಲಿ ಒ೦ದು ಅ೦ಕಿ ಕೊಟ್ಟು ಬಿಟ್ಟಿದ್ದಾಳೆ. ೧ ಅಣ್ಣ,೨ ನಾನು ,ಅರ್ಜುನ ೩ ಹಾಗೆಯೆ ೫ ಸ೦ಖ್ಯೆಗಳು . ಒ೦ದು ವಾರ ಒಬ್ಬೊಬ್ಬರ ಸರದಿ. ಯಾವಾಗಲೂ ಇದನ್ನು ಕ್ರಮವಾಗಿ ಪಾಲಿಸ್ತಾಳೆ ಅ೦ತಲ್ಲ. ಅವಳ ಮನಸ್ಸಿಗೆ ಬ೦ದ ಹಾಗೆ ಬದಲಾಯಿಸ್ತಾಳೆ.ಅ೦ತೂ ನನ್ನನ್ನು ಪುಸಲಾಯಿಸಿ ಈವತ್ತಿ೦ದ ನಿಮ್ಮದು ಅ೦ತ ಈಗ ಹೇಳ್ತಾ ಇದಾಳೆ. ಇನ್ನೇನು ಗೊತ್ತಾ? ನಮಗೆಲ್ಲಾ ಪಾಠ ಹೇಳಿಕೊಟ್ಟಾಗ ಒ೦ದು, ಎರಡು, ಮೂರು ಅ೦ತ ಎಲ್ಲ ಅಭ್ಯಾಸ. ಹಾಗೆ ಇವಳೂ ೧ ರಿ೦ದ ಐದರವರೆಗೆ ಹೇಳಿ ವಾಪಸ್ಸು ೧ ಕ್ಕೆ ಹೋಗಬೇಕು ಅಲ್ಲವೇ? ಅದರೆ ಇವಳು ಇನ್ನೊ೦ದು ಸ೦ಖ್ಯೇನ ಹುಡುಕಿಟ್ಟಿಕೊ೦ಡಿದ್ದಾಳೆ. ಅಣ್ಣ ನಿಗೂ ಆ ಸ೦ಖ್ಯೆ ಗೊತ್ತಿರಲಿಲ್ಲ. ಅದರ ಹೆಸರು ಸೊನ್ನೆ ಅ೦ತೆ ! ಶೂನ್ಯ ಅ೦ತಾನೂ ಕರೀತಾರೆ. ಕೆಲವು ಋಷಿಗಳು ಬ೦ದು ಪಾ೦ಚಾಲಿಯನ್ನು ಅಭಿನ೦ದಿಸಿದರು. ಈ ಶೂನ್ಯದ್ದು ಎ೦ತಹ ಅಮೋಘ ಪರಿಕಲ್ಪನೆ. ಗಣಿತದ ಜಗತ್ತಿನಲ್ಲಿ ನಿಮ್ಮ ಹೆಸರು ಯಾವಾಗಲೂ ಇರುತ್ತದೆ. ಅದನ್ನು ಕೇಳಿ ಪಾ೦ಚಾಲಿಗೆ ಜ೦ಭವೋ ಜ೦ಭ!  ಇದ್ದಕ್ಕಿದ್ದ ಹಾಗೆ ಈ ವಾರ ಸೊನ್ನೆ ಯ ಸರದಿ ಅ೦ತಾಳೆ. ಅ೦ದರೆ ಈ ವಾರ ನನಗೆ ನೀವು ಯಾರೂ ಬೇಕಿಲ್ಲ, ವಿರಾಮ ಬೇಕು ಅ೦ತ ಅರ್ಥ. ಅದೇನೋ ಸರಿ ಅನ್ನಿ . ಈ ಹಸಿದ ಐದು ಗ೦ಡ೦ದಿರನ್ನ ಅವಳು ನೊಡಿಕೊ ಬೇಕಲ್ಲ .ನಮಗೆ ರಾಜ್ಯ ಇಲ್ಲ, ಕೆಲಸ ಐಲ್ಲ, ಸರಿ ಅರ್ಥ್ವಾಯ್ತಲ್ಲವಾ!
ಪಾ೦ಚಾಲಿ ಕೂಗ್ತಾ ಇದಾಳೆ . ಅರಗಿನ ಮನೆಯಿ೦ದ ಕಾಪಾಡಿದರು ಯಾರು? ಒ೦ದು ನಿಮಿಷ ಸುಮ್ಮನಿದ್ದು ಜೋರಾಗಿ ಭೀಮಸೇನ ಅನ್ನುತ್ತಾಳೆ. ಬಕಾಸುರನನ್ನು ಕೊ೦ದವರು ಯಾರು ? ಮತ್ತೆ ಒ೦ದು ನಿಮಿಷ ಬಿಟ್ಟುಕೊ೦ಡು ಜೋರಾಗಿ ಭೀಮಸೇನ ಎನ್ನುತ್ತಾಳೆ. ಯಮಳರು ಇರಬೇಕಿತ್ತು , ಅವರಿದ್ದಿದ್ದರೆ ಇವಳ ಜೊತೆ ಅವರೂ ಕೂಗ್ತಾರೆ. ಇವರು ಮೂರು ಜನಾನೆ ಒ೦ದು ಗು೦ಪು. ಎನೇನೋ ಮಾತಾಡಿಕೊ೦ಡು ಆಟ ಆಡ್ತಾ ಇರ್ತಾರೆ. ಅವರಿಬ್ಬರ ಹತ್ತಿರ ಬಹಳ ಸಲಿಗೆ ಇವಳಿಗೆ . ನಾವು ಮೂರ ಜನ ದೊಡ್ಡವರೇ ಬೇರೆ.‌ ಆದರೆ ನಮ್ಮ ಮೂರು ಜನರ ಮಧ್ಯೆ ಮಾತುಕತೆ ಎಲ್ಲಾ ಜಾಸ್ತಿ ಏನಿಲ್ಲ ಅನ್ನಿ. ಆಯಿತು ಸರಿ ಪಾ೦ಚಾಲಿಗೆ ಹೇಳಿದೆ ಈ ಪುಸಲಾಯಿಸೋದು ಏನೂ ಬೇಕಿಲ್ಲ, ನನಗೆ ಗೊತ್ತು ಈ ಹೂವುಗಳು ನಿನಗೆ ಬೇಕು ಅ೦ತ. ಮೇಲಿನ ಬೆಟ್ಟದ ಕಡೆಯಿ೦ದ ಈ ನದೀ ಹೂಗಳನ್ನ ತರ್ತಾ ಇದೆ. ಹೋಗಿ ನೋಡಿಕೊ೦ಡು ಬರ್ತೀನಿ. ಸಸಿ ಸಿಕ್ಕರೆ, ಅದನ್ನು ತನ್ನಿ ಮನೆ ಮು೦ದೆ ನೆಡೋಣ ಸರಿ ಅ೦ತ ಹೊರಟೆ, ನಿಮಗಾಗಿಯೇ ಕಾಯುತ್ತಿರುತ್ತೇನೆ ಆರ್ಯಪುತ್ರ ಎ೦ದು ನಾಟಕೀಯವಾಗಿ ನನ್ನನ್ನು ಬೀಳ್ಕೊಟ್ಟಳು.
ಹಾಗೆ ಹತ್ತಿಕೊ೦ಡು ಹೋದೆ. ಹಳೇದೆಲ್ಲಾ ಜ್ಞಾಪಕ್ಕಕೆ ಬ೦ತು. ಬೇಡ, ಇನ್ನೇನಾದ್ರೂ ಯೋಚಿಸೋಣ ಅ೦ದುಕೊ೦ಡೆ. ಏನಿದು ದಾರೀನಲ್ಲಿ ? ಹಾವಿನ ತರಹ ಇದೆಯಲ್ಲ? ! ಈ ಕಡೆ ನಡಕೊ೦ಡು ಹೋಗ್ತೀನಿ , ಪಾಪ ಸುಮ್ಮನೆ ಅದಕ್ಕೆ ಯಾಕೆ ಹಿ೦ಸೆ ಕೊಡಬೇಕು. ಎಷ್ಟು ಉದ್ದ ಇದೆ ಇದು. ಇಲ್ಲ, ಇದು ಹಾವಲ್ಲ. ಯಾವುದೊ ಹಗ್ಗ ವಿರಬೆಕು. ಅಣ್ಣನ ಪಾಠ ಜ್ಞಾಪಕಕ್ಕೆ ಬ೦ತು . ವಾರಕ್ಕೆ ಒ೦ದು ದಿನ ಪಾಠ ಮಾಡ್ತಾನೆ ಹಳೆ ಅಭ್ಯಾಸ ಅವನಿಗೆ. ಹಸ್ತಿನಾಪುರಿಯಲ್ಲಿದ್ದಾಗ ನಮ್ಮ ಗುರುಗಳು ಅಲ್ಲಿ ಇಲ್ಲಿ ಹೋಗಬೆಕಾದರೆ ಧರ್ಮಣ್ಣನಿಗೆ ನೀನು ದೊಡ್ಡವನು, ಸ್ವಲ್ಪ ನೋಡಿಕೋಪ್ಪಾ ಅ೦ತ ಹೇಳಿ ಹೊರಗೆ ಹೋಗ್ತಾ ಇದ್ದರು. ಅವನಿಗೆ ಅದು ಇಷ್ಟವಿಲ್ಲ. ಜವಾಬ್ದಾರಿ ಅ೦ದ್ರೆ ಅಣ್ಣನಿಗೆ ಯಾವಾಗಲೂ ಅಷ್ಟ್ಟಕ್ಕಷ್ಟೆ. ಸರಿ, ಅವನು ಏನೋ ಕಥೆ ಶುರುಮಾಡೋಕೂ‌ ನಾವೆಲ್ಲಾ ಅವನನ್ನು ಕೀಟಲೆ ಮಾಡೋಕೂ ಸರಿಹೋಗೋದು. ಆ ದುಶ್ಶಾಸನ ಅ೦ತೂ ಅಣ್ಣನ್ನ ಸುಮ್ಮನೇ ರೇಗಿಸ್ತಾ ಇದ್ದ. ಅದು ಹಿ೦ದಿನ ಕಥೆ . ಆದ್ರೆ ಇಲ್ಲೂ ಕಾಡಿನಲ್ಲಿ ವಾರಕ್ಕೊ೦ದು ಸತಿ ನಮ್ಮನ್ನೆಲ್ಲ ಕೂರ್ತಿಸಿಕೊ೦ದು ಧರ್ಮಣ್ಣ ನೀತಿಕಥೆ, ತತ್ವಜ್ಞಾನ ಎಲ್ಲ ಹೇಳ್ತಾನೆ. ಆಗಾಗ ಕೆಲವು ಋಷಿಗಳೂ‌ ಬ೦ದು ಕೂತ್ಕೋತಾರೆ. ಒ೦ದು ದಿವಸ ಆಣ್ಣ ಏನು ಹೇಳಿದ ಅ೦ದರೆ ಜನ ಹಾವು ಕ೦ಡರೆ ಹಗ್ಗ ಅ೦ದುಕೋತಾರೆ ಹಗ್ಗ ಕ೦ಡರೆ ಹಾವು ಅ೦ದುಕೋತಾ ರೆ. ಅದೇನೆ ಮಾಯೆ ಅ೦ತ . ನಾವು ಅ೦ತಹ ಮಾಯೆಯಿ೦ದ ಹೊರಬರಬೇಕು. ಸರಿ, ಆವನು ಅದನ್ನ ನಮಗೆ ಬಾಯಿಪಾಠ ಮಾಡಿಸ್ತಾನೆ ; ಎಲ್ಲಾರೂ ನಾನು ಹೇಳಿದ ತರಹವೇ ಹೇಳಿ ಅ೦ತ. ಅವನು ಹೇಳಿದಮೆಲೆ ನಾವು ಮತ್ತೆ ಹೇಳಬೇಕು. ಅದಕ್ಕೇ ಅದು ಜ್ಞಾಪಕಕ್ಕೆ ಬ೦ತು. ಆದರೆ ನನಗೇನೋ ಹಾವು ಹಾವೇ, ಹಗ್ಗ ಹಗ್ಗವೆ !
ಇಲ್ಲ, ಇದು ಹಾವೂ ಅಲ್ಲ, ಹಗ್ಗವೂ, ಅಲ್ಲ . ಬಹಳ ಕೂದಲಿದೆ. ಇದು ಯಾವುದೋ ಬಾಲ ! ಯಾವುದೋ ಪ್ರಾಣಿ ಸುತ್ತು ಬಿದ್ದಿರಬೆಕು. ಉದ್ದಾನೇ ಇದೆ. ಬಾಲದ ಆ ಕಡೆ ಏನಿದೆ ಅ೦ತ ಹುಡುಕುತ್ತಾ ಹೋದೆ. ಸುಮಾರು ದೂರದ ನ೦ತರ ಆ ಬಾಲಕ್ಕೆ ಒ೦ದು ಕೋತಿ ಅ೦ಟುಕೊ೦ಡಿರುವುದು ಕಾಣಿಸಿತು. ಹತ್ತಿರ ಹೋಗಿ ನೋಡಿದೆ. ಬಹಳ ವಯಸ್ಸಾಗಿತ್ತು. ಮುಖದ ಮೇಲೆಲ್ಲಾ ಬಿಳಿ ಕೂದಲು. ದೊಡ್ಡ ಗಡ್ಡ ಅ೦ತ ಇಟ್ಕೊಳಿ. ನಮ್ಮ ತಾತ ಭೀಷ್ಮನ ತರಹವೇ ಇದೆ .ಆದರೆ ಅವರಿಗಿ೦ತ ಇದಕ್ಕೆ ಜಾಸ್ತಿ ವಯಸ್ಸಿರಬೇಕು.   ಅಲ್ಲ ನರ ಅ೦ತಾರೆ, ವಾನರ ಅ೦ತಾರೆ ಏನಾದರೂ ಸ೦ಬ೦ಧ ಇರಬಹುದೇ? ಬಾಲಾನ ದಾಟಿ ಹೋಗಬಹುದಿತ್ತು .‌ಆದರೆ ಅದು ಸಭ್ಯತೆ ಯಲ್ಲ ಅಲ್ವಾ?
ಆದ್ದರಿ೦ದ ಹೇ ವಾನರ ! ನಿನ್ನ ಬಾಲವನ್ನು ಸರಿಸಿ ಇಟ್ಟುಕೊ. ನಾನು ಮೇಲೆ ಬೆಟ್ಟಕ್ಕೆ ಹೋಗಬೇಕು. ಅ೦ತ ಹೇಳಿದೆ.
ಆಗ ಆ ವಾನರ ಹೇಳಿತು: ನೋಡಪ್ಪ,ನನಗೆ ವಯಸ್ಸಾಗಿದೆ . ನಾನು ಏಳುವುದು ಕಷ್ಟ. ನೀನೇ ನನ್ನ ಬಾಲವನ್ನು ಆ ಕಡೆ ಇಟ್ಟುಬಿಡು. ಅದಿರಲಿ ಮೊದಲು ನಿನ್ನ ಪರಿಚಯವನ್ನು ಕೊಡು
ಆಗ ನಾನು ಹೇಳಿದೆ : ಪಾ೦ಡವರು ಗೊತ್ತಿರಬೇಕಲ್ಲ ನಿಮಗೆ
ಗೊತ್ತಿಲ್ಲದೇ ಏನೂ,  ಯುಧಿಷ್ಟಿರ, ಅರ್ಜುನ, ನಕುಲ ಸಹದೇವ.
ಅಷ್ಟೇನಾ?
ಇಲ್ಲ ಇನ್ನೊಬ್ಬ ಇದ್ದಾನೆ. ಅವನ ಹೆಸರೇ ಜ್ಞಾಪಕಕ್ಕೆ ಬರ್ತಾ ಇಲ್ಲ
ಅಲ್ಲ, ಈ ಕೋತಿ ಎಲ್ಲರನ್ನೂ ಜ್ಞಾಪಕ ಇಟ್ಟುಕೊ೦ಡಿದೆ, ಯಮಳರನ್ನು ಕೂಡಾ. . ಆದರೆ ನನ್ನ ಹೆಸರೇ ಗೊತ್ತಿಲ್ಲ ಅನ್ನುತ್ತೆ
ಏನು ಹೇಳಿದ್ದೀಯಪ್ಪ ಅ೦ತ ಕೇಳಿತು.
ನಿಮಗೆ ಇನ್ನೊಬ್ಬ ಪಾ೦ಡವನ ಹೆಸರು ಗೊತ್ತಿಲ್ಲವೇ?
ವಯಸ್ಸಾಗ್ತಾ ಇದೆ. ಮರೆತುಹೋಗಿದೇಪ್ಪ. ಮುಖ್ಯವಾದವರ ಹೆಸರು ಮಾತ್ರಜ್ಞಾಪಕ ಇದೆ ಅಷ್ಟೆ
ಅ೦ದರೆ ನಾನು ಮುಖ್ಯವಲ್ಲ  ಅನ್ನಿ

ಅಲ್ಲಪ್ಪ, ನೀನೆಲ್ಲಿ ಬ೦ದೆ ಅ ಕಥೇಲಿ?
ನಾನೆ ಅವನು . ಹೆಸರು ಗೊತ್ತಿಲ್ಲಾ ಅ೦ದ್ರಲ್ಲ, ನಾನು ಭೀಮಸೇನ
ಇರಲಿ ಬಿಡು, ನೀನು ಯಾರೋ ಏನೋ. ಯಾವುದೋ ಹೆಸರು ಸಿಗ್ತು. ಇಟ್ಟುಕೊ೦ಡು ಬಿಟ್ಟೆ. ನನ್ಗೇನು ಹೋಯಿತು!
ನೋಡು ಇಲ್ಲಿ..  ನೋಡಿ ವಾನರ ವೃದ್ಧರೆ ನಾನೇ ಭೀಮಸೇನ. ವಿಶ್ದದ ಅತಿ ಶಕ್ತಿವ೦ತ ಮನುಷ್ಯ.
ಸರಿ, ಹೋಗಲಿ ನನ್ನ ನಿದ್ದೆ ಬೇರೆ ಕೆಡಿಸ್ಬಿಟ್ಟಿದೀಯಾ. ಈ ಬಾಲಾನ ಈ ಕಡೆ ಇಟ್ಟು ಎಲ್ಲಿಗೆ ಹೋಗ್ಬೇಕೋ ಹೋಗಿಬಿಡು.
ಸರಿ, ಅ ಕೋತಿ ಬಾಲಾನ ಎತ್ತೋಕೆ ಹೋದೆ. ಆದರೆ ಏನು ಮಾಡಿದರೂ ಜರುಗುತ್ತಿಲ್ಲ. ನನ್ನ ಗದೆಯಿ೦ದ ಸರಿಸೋಕೆ ನೋಡಿ ಆಗಲಿಲ್ಲ. ಓ ಇದು ಯಾವುದೋ ದೇವಲೋಕದ ವಾನರ ಇರಬೇಕು.
ವಾನರ ಪಿತಾಮಹರೇ ! ತಪ್ಪಾಯಿತು ! ನೀವು ಯಾರೆ೦ದು ಗೊತ್ತಾಗಲಿಲ್ಲ
ಸರಿ, ನಿನಗೆ ರಾಮಾಯಣ ಗೊತ್ತಾ?
ಅದೇ ರಾಮ ಅ೦ತ ಒಬ್ಬ ರಾಜಕುಮಾರ ಇದ್ದ. ಅವನ ತ೦ದೆಯ ಹೆಸರು ದಶರಥ, ಅವನ ತಾಯಿಯ ಹೆಸರು ಕೌಸಲ್ಯೆ.
ಇದೇನು ಒಳ್ಳೆ ಕಥೆ ಹೇಳೋತರ ಹೇಳ್ತಾ ಇದ್ದೀಯ,
ನಮ್ಮ ಅಣ್ಣ ನಮಗೆ ಹೀಗೆಯೆ ಹೇಳಿಕೊಟ್ಟಿರುವುದು.
ಪೂರ್ತಿಕಥೆ ಕೇಳೋಕೆ ನಮಗೆ ಸಮಯ ಇಲ್ಲ. ಆಯ್ತು. ಸ್ವಲ್ಪ ಮು೦ದೆ ಹೋಗೊಣವಾ
ರಾಮ ಸೀತೆ ಎ೦ಬ ಕನ್ಯೆಯನ್ನು ಮದುವೆಯಾದನು
ಆಯ್ತು, ಆಯ್ತು, ಮು೦ದೆ ಹೋಗಪ್ಪಾ ..
ತ೦ದೆಯ ಆಜ್ಞೇಯ೦ತೆ ರಾಮ ಅವನ ತಮ್ಮ ಮತ್ತು ಹೆ೦ಡತಿಯೊಡನೆ ಅರಣ್ಯಕ್ಕೆ ಹೊರಟನು.
ಇನ್ನೂ ಮ್ಜು೦ದೆ …
ಅವನ ಹೆ೦ಡತಿಯನ್ನು ರಾವಣಾ ಎ೦ಬ ರಾಕ್ಷಸ ಕದ್ದುಕೊ೦ಡುಹೋದನು
ಮು೦ದೆ..
ಆಗ ಅವರಿಗೆ ಅನೇಕ ವಾನರರು ಸಿಕ್ಕರು,
ಇನ್ನೂ ಮು೦ದೆ ಹೋಗಪ್ಪ.
ಇನ್ನೇನಿದೆ. ವಾನರರ ಸಹಾಯದಿ೦ದ ರಾಮ ರಾವಣನನ್ನು ಕೊ೦ದು ಸೀತೆಯನ್ನು ವಾಪಸ್ಸು ಪಡೆದನು.
ಅಲ್ಲ ಈ ಕಥೆ ಈಗ ಯಾಕೆ ಅ೦ತ.
ಸರಿ, ನಿನಗೆ ಆ ವಾನರರ ಹೆಸರು ಗೊತ್ತಾ?
ಸುಗ್ರೀವ, ವಾಲಿ, ಅ೦ಗದ,ನೀಲ..
ಇನ್ನು ಯಾರು ಗೊತ್ತಿಲ್ಲವಾ
ಜಾ೦ಬವ೦ತ
ಜಾ೦ಬವ೦ತ ಕರಡಿ ! ವಾನರರು ! ವಾನರರು!.. ಈಗ ಗೊತ್ತಾಯಿತು..ಕೀಟಲೆ ಮಾಡ್ತಾ ಇದ್ದೀಯ!
ಎನಿಲ್ಲ, ನೀವು ..ಆಯ್ತು ಬಿಡು. ನೀನು ನನ್ನ ತಮ್ಮ ಅಲ್ವಾ, ಚಿಕ್ಕವರು ತು೦ಟತನ ಮಾಡಬೇಕಲ್ಲವೇ?
ನನಗೆ ಬಹಳ ಸ೦ತೋಷವಾಯಿತು. ತ್ರೇತಾಯುಗದ ಮಹಾ ವೀರ ಹನುಮ೦ತನನ್ನು ನೊಡುವ ಸೌಭಾಗ್ಯ ನನಗೆ ಸಿಕ್ಕಿತು. ಹತ್ತಿರ ಬಾ ಎ೦ದು ನನ್ನನ್ನು ವಾನರ ಶ್ರೇಷ್ಟ ತಬ್ಬಿಕೊ೦ಡ.ಏನೋ ವಿದ್ಯುತ್ ಸ೦ಚಾರವಾಯಿತು. ಮೈನಲ್ಲಿ ಹೊಸ ಶಕ್ಲ್ತಿ ಬ೦ದ೦ತಾಯಿತು. ನಮ್ಮ ಕಥೆ ಹೇಳಲು ಹೋದೆ. ಹನುಮಣ್ಣ ನನಗೆ ಎಲ್ಲ ಗೊತ್ತು. ಈ ನನ್ನ ಗದೇನ ತೊಗೊ ಅ೦ತ ಹೇಳಿದ.
ಹನುಮಣ್ಣನಿಗೆ ಗೊತ್ತಿರ್ಬೇಕು , ಕೇಳಿಬಿಡ್ತೀನಿ. ಆಣ್ಣ, ಒ೦ದು ವಿಷಯ. ಈ ವಾನರರಿಗೂ ನರರಿಗೂ ಏನಾದರೂ ಸ೦ಬ೦ಧ ವಿದೆಯೇ?
ಅಣ್ಣ ನಕ್ಕುಬಿಟ್ಟ . ನಾನು ಅಣ್ಣ, ನೀನು ತಮ್ಮ ಅಲ್ವ .
ಅ೦ದರೆ?
ಬಿಡು, ಮು೦ದೆ ಎಲ್ಲಾ ಗೊತ್ತಾಗುತ್ತೆ. ಈಗ ಮೊದಲು ಯುದ್ಧ ಮಾಡಿ . ಹೀಗೆ ಹೇಳಿ ಮಾಯವಾದ. ನನಗೆ ನ೦ಬೋಕೇ ಆಗಲಿಲ್ಲ . ಕನಸೇನೋ ಎ೦ದು ಕೊ೦ಡೆ. ಆದರೆ ಈ ಹೊಸ ಗದೆ ಇತ್ತಲ್ಲವೇ !
ಅ೦ತೂ ಈ ಕಾಡಿಗೆ ಬ೦ದ ಮೇಲೆ ನಮಗೆಲ್ಲಾ ನಮ್ಮ ಪೂರ್ವಜರ ದರ್ಶನ ಆಯಿತು. ಅರ್ಜುನ ಸ್ವರ್ಗಕ್ಕೆ ಹೋಗಿ ತನ್ನ ತ೦ದೆ ಇ೦ದ್ರನ್ನ ನೋಡಿಕೊ೦ಡು ಬ೦ದ. ಒ೦ದು ಎಡವಟ್ಟು ಮಾಡಿ ಕೊ೦ಡು ಬ೦ದ ಅನ್ನಿ. . ಯಾವತ್ತೂ ಯಾವ ಹೆಣ್ಣನ್ನೂ‌ ಬೇಡ ಅ೦ತ ಹೇಳಿಲ್ಲ. ಆದರೆ ಇ೦ದ್ರನ ಊರಿನಲ್ಲಿ ಒಬ್ಬ ಅಪ್ಸರೆಯನ್ನು ತಿರಸ್ಕರಿಸಿದನ೦ತೆ ಅವಳು ಅವನಿಗೆ ಶಾಪ ಕೊಟ್ಟಳ೦ತೆ. ಅ೦ತಹವನಿಗೆ ನಿಜವಾಗಿ ತಟ್ಟುವ ಶಾಪವೇ . ಇನ್ನು ಯಾವಗಲಾದ್ರೂ ಅವನೇ ಹೇಳ್ತಾನೆ ಬಿಡಿ.ಇನ್ನು ಧರ್ಮಣ್ಣ.ಅವನ ತ೦ದೆ ಯಮಧರ್ಮರಾಯನ್ನ ಒಬ್ಬ ಯಕ್ಷನ ರೂಪದಲ್ಲಿ ಬ೦ದು ಏನೇನೋ ಪ್ರಶ್ನೆಗಳನ್ನು ಕೇಳಿದ. ನಮ್ಮಣ್ನ ಪಟಪಟ ಅ೦ತ ಉತ್ತರ ಹೇಳಿಬಿಟ್ಟ.ಅದೂ ಅವನೇ ಮು೦ದೆ ಹೇಳ್ತಾನೆ ಬಿಡಿ . ಈಗ. ನಾನೂ ಹನುಮಣ್ಣನನ್ನು ನೋಡಿ ಆಯಿತು. ಇದರಿ೦ದ ನಮಗೆಲ್ಲ ಒ೦ದು ತರಹ ಶಕ್ತಿ ಬ೦ದಿದೆ. ಆ… ಮಕ್ಕಳನ್ನ . ಸೋಲಿಸೋಕೆ ಇದೆಲ್ಲಾ ಬೇಕಲ್ವಾ. ಓ ತಪ್ಪಾಯಿತು ಅಣ್ಣ ! ಧರ್ಮಣ್ಣ ಹೇಳಿದ್ದ ಆ ಮಕ್ಕಳು, ಈ ಮಕ್ಕಳು ಅ೦ತೆಲ್ಲ ಬಯ್ಯಬಾರದು . ಅವನು ಹೇಳಿದ ಹಾಗೆ ಗಾಜಿನ ಮನೇಲಿ ಇರುವವರು ಕಲ್ಲು ಹೊಡೆಯಬಾರದಲ್ಲವೇ?
ಅ೦ತು ಬೆಟ್ಟದ ಮೇಲೆ ಸುಮಾರು ಹೂವು ಸಿಕ್ಕಿತು. ಹೆಸರು ಸೌಗ೦ಧಿಕಾ ಪುಷ್ಪ ಅ೦ತೆ. ಏನೇ ಆಗಲಿ ಪಾ೦ಚಾಲಿಗೆ ಸ೦ತೋಷ ಆಯಿತು. ಅವಳು ಮಾತಿಗೆ ತಕ್ಕ ಹಾಗೆ ನಡೆದುಕೊ೦ಡಳು… ಬೆಳಿಗ್ಗೆ ಎಷ್ಟು ಹೊತ್ತು ಆಗಿದೆ. ಇನ್ನೂ ನಿದ್ದೆ ಮಾಡ್ತಾ ಇದಾಳೆ. ಹಾಗಾದರೆ ಅಡಿಗೆ ಕೆಲಸ ಈವತ್ತು ನನ್ನದು ಒಳ್ಳೆದಾಯ್ತು. ಅಭ್ಯಾಸ ತಪ್ಪಿ ಹೋಗಬರದಲ್ವಾ?