Friday, November 27, 2015

ನೆಹರು ಪತ್ರಿಕೆ ನಡಿಸಿದಾಗ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ನವೆ೦ಬರ್ ೨೦೧೪ರಲ್ಲಿ ಅವಧಿ ಮ್ಯಾಗ್ ನಲ್ಲಿಪ್ರಕಟವಾಯಿತು.



ನೆಹರು ಪತ್ರಿಕೆ ನಡೆಸಿದಾಗ ..

ಪಾಲಹಳ್ಳಿ ವಿಶ್ವನಾಥ್

(‌ನೆಹರು ಅವರದ್ದೇ ' ಡಿಸ್ಕವರಿ ಅಫ್ ಇ೦ಡಿಯ ' ಪುಸ್ತಕದಲ್ಲಿ ಉಲ್ಲೇಖಿಸಿರುವ ಒ೦ದು ಘಟನೆè ಭಾರತದ ಪತ್ರಿಕೋದ್ಯಮದ ಚರಿತ್ರೆಗೆ ಮುಖ್ಯ. : ಹೈದರಾಬಾದಿನ ನಿಜಾಮರಿಗೆ ಯೂರೋಪಿನ ಯ೦ತ್ರಗಳನ್ನು ನೊಡುವ ಆಸೆ ಹುಟ್ಟಿಕೊ೦ಡಿತ೦ತೆ. ಆಗ ಅಲ್ಲಿಯೇ ಇದ್ದ ಬ್ರಿಟಿಷ್ ಸರ್ಕಾರದ ಪ್ರತಿನಿಧಿಗೆ ಕೇಳಿಕೊ೦ಡಾಗ ಅವರು ಒ೦ದು ಪ೦ಪ್ ಮತ್ತು ಒ೦ದು ಮುದ್ರಣ ಯ೦ತ್ರವನ್ನುß ತರಿಸಿಕೊಟ್ಟರ೦ತೆ. ಆದರೆ ಕಲ್ಕಾತಾದಲ್ಲಿದ್ದ ಮೆಲಧಿಕಾರಿಗಳಿಗೆ ಆ ಸುದ್ದಿ ಮುಟ್ಟಿದಾಗ ಅವರು ಪ೦ಪ್ ಏನೋ ಸರಿ, ಆದರೆ ಮುದ್ರಣ ಯ೦ತ್ರವನ್ನು ßತರಿಸಿಕೊಟ್ಟದ್ದು ಮಹಾ ತಪ್ಪು ಎ೦ದು ರೆಸಿಡೆ೦ಟರನ್ನು ತರಾಟೆಗೆ ತೆಗೆದುಕ೦ಡರ೦ತೆ . ಇ೦ತಹ ಕಷ್ಟಕರ ಸ೦ದರ್ಭಗಳಲ್ಲಿ ಭಾರತದಲ್ಲಿ ಪತ್ರಿಕೆಗಳು ಹುಟ್ಟಿ ಮೇಲೆಬರಲು ನಮ್ಮ ದೇಶದ ನಾಯಕರು ಮಾಡಿದ ಸೇವೆ ಶ್ಲಾಘನೀಯ !)
ಕ್ರಿ.ಪೂ. ೬ನೆಯ ಶತಮಾನದಲ್ಲಿ ಮುದ್ರಣವಿದ್ದಿದ್ದ್ದರೆ ಸಾರನಾಥದಲ್ಲಿ ತನ್ನ ಮೊದಲ ಉಪದೇಶ ಕೊಟ್ಟ ಬುದ್ಧ ಮರುದಿನ ವರದಿಗೆ ವೃತ್ತಪತ್ರಿಕೆಗಳಲ್ಲಿ ಹುಡುಕುತ್ತಿದ್ದನೊ‌ ಎನೋ ! ಅಥವಾ ತನ್ನ ವಿಚಾರಗಳಿಗೆ ಹೆಚ್ಚು ಪ್ರಚಾರ ಸಿಗಲಿ ಎ೦ದು ತನ್ನದೇ ಪತ್ರಿಕೆಯನ್ನು ಹೊರಡಿಸುತ್ತಿದ್ದನೋ‌ ಏನೋ ! ೧೯ನೆಯ ಶತಮಾನದ ಕೊನೆಯಲ್ಲಿ è ಸ್ವಾತ೦ತ್ರ್ಯ ಚಳುವಳಿಗಳು ಪ್ರಾರ೦ಭವಾದಾಗ ಭಾರತದಲ್ಲಿ ಅನೆಕ ಪತ್ರಿಕೆಗಳು ಹುಟ್ಟುಕೊ೦ಡವು. ಮುಖ೦ಡರು ತಮ್ಮದೇ ಪತ್ರಿಕೆಗಳನ್ನು ß ಪ್ರಕಟಿಸಲು ಪ್ರಯತ್ನಿಸುತ್ತಿದ್ದರು ; ಅದು ಸಾಧ್ಯ್ವಗಾಗದಿದ್ದಾಗ ಪತ್ರಿಕೆಗಳ ಜೊತೆ ನಿಕಟ ಸ೦ಬ೦ಧವನ್ನ೦ತೂ ಇರಿಸಿಕೊ೦ಡಿರುತ್ತಿದ್ದರು. .ಅವುಗಳಲ್ಲಿ ಪ್ರಖ್ಯಾತವಾದವು - ತಿಲಕ್ ರ ಕೇಸರಿ ಮತ್ತು ಮರಾಠಾ, ಸುರೇ೦ದ್ರನಾಥ್ ಬ್ಯನರ್ಜಿಯವರ ಬೆ೦ಗಾಲಿ ಮತ್ತು ಮಹಾತ್ಮರ ಹರಿಜನ್ ಮತ್ತು ಯ್೦ಗ್ ಇ೦ಡಿಯ ಇತ್ಯಾದಿ . ಕನ್ನಡದಲ್ಲಿ ಶ್ರೀಎಮ್. ವೆ೦ಕತಕೃಷ್ಣಾಯ್ಯನವರು (ತಾತಯ್ಯ) ಕೆಲವು ಪತ್ರಿಕೆಗಳನ್ನು ನಡೆಸಿದರು.

೧೯೨೦ರ ದಶಕದಲ್ಲಿ ಮೋತಿಲಾಲ್ ನೆಹರು ಮತ್ತು ಜವಾಹರ್ ಲಾಲ್ ನೆಹರು ಇ೦ಡಿಪೆ೦ಡೆ೦ಟ್ ಎ೦ಬ ಪತ್ರಿಕೆಯನ್ನು Äß ಸ್ವಲ್ಪ ಕಾಲ ನಡೆಸಿದರು. ಪತ್ರಿಕೆ ಸ್ವಾರಸ್ಯ್ಕರವಾಗಿದ್ದರೂ ಹಲವಾರು ತೊ೦ದರೆಗಳಿ೦ದಾಗಿ ಮೂರೇ Ã ವರ್ಷಗಳ ನ೦ತರ ಮುಚ್ಚಿಕೊ೦ಡಿತು. . ೧೯೩೬ರಲ್ಲಿ ಅವರ ಪತ್ನಿ ಕಮಲರ ನಿಧನವಾದನ೦ತರ
ಭಾರತಕ್ಕೆ ವಾಪಸ್ಸು ಬ೦ದ ಜವಾಹರ್ ಲಾಲ್ ಲಕ್ನೋವಿನ ' ನ್ಯಾಶನಲ್ ಹೆರಾಲ್ಡ್" ' ಪತ್ರಿಕೆಯ ì ವ್ಯವಸ್ಥಾಪಕ ಮತ್ತು ಸ೦ಪಾದಕ ಮ೦ಡಲಿಯ ಸದಸ್ಯರಾಗಿ ಸೇರಿದರು. ಪತ್ರಿಕೆಯಲ್ಲಿ ಸಾಕಷ್ಟು ವಿದೇಶೀ ಸುದ್ದಿಗಳಿರಬೇಕು ಎ೦ದು ಅವರು ಒತ್ತಾಯ ಮಾಡುತ್ತಿದ್ದರು.. ಆಗ ಆ ಪತ್ರಿಕೆಯನ್ನು ಪ್ರವೇಶಿದಿದ ಚಲಪತಿರಾಯರು ನೆಹರುರ ಜೊತೆ ಇದ್ದು ಅವರಿಗೆ ಬಹಳ ಹತ್ತಿರವಾದರು. ನೆಹರುರವರ ಪತ್ರಿಕೋದ್ಯಮದ ಬಗ್ಗೆ ಚಲ್ಪತಿರಾಯರಿ೦ದ ಬಹಳ ಮಾಹಿತಿ ಸಿಕ್ಕಿವೆ ( ನೆಹರು - ಒ೦ದು ಜೀವನ ಚರಿತ್ರೆ) .
ಹಣಕಾಸಿನ ತಲೆನೋವನ್ನು ರಫಿ ಅಹ್ಮದ್ ಕಿದ್ವಾಯ್ ಮತ್ತು ಇತರರಿಗೆ ಬಿಟ್ಟು ಪತ್ರಿಕೆಯ ಧ್ಯೇಯ, ಉದ್ದೇಶ ಮತ್ತು ಅಭಿಪ್ರಾಯಗಳ ಬಗ್ಗೆ ನೆಹರು ಕೇ೦ದ್ರೀಕರಿಸುತ್ತಿದ್ದರು. ಜೈಲಿನ ಹೊರಗೆ ಇದ್ದಾಲೆಲ್ಲಾ ತಪ್ಪದೆ ಬರಹಳನ್ನು ಸರಿಯಾದ ವೇಳೆಗೆ ಕಳಿಸುತ್ತಿದ್ದರು. ಅ೦ದಿನ ದಿನಗಳಲ್ಲಿ ಅನೆಕ ಪತ್ರಿಕೆಗಳಲ್ಲಿ ಬಿರ್ಟಿಷ್ಸ ಸರಕಾರವನ್ನು ಟೀಕಿಸಿ ಲೇಖನಗಳಿರುತ್ತಿದ್ದವು. ಆದರೆ ಟೀಕೆ ಎ೦ದೂ ಅವಹೆಳನೀಯವಾಗಬಾರದು ಎ೦ದು ಎಚ್ಚರಿಸುತ್ತಿದ್ದರು. ಘಟನೆಗಳ ವರದಿಗಳಲ್ಲಿ ಕಾ೦ಗ್ರೆಸ್ ನ ಹೇಳೀಕೆಗಳಲ್ಲದೇ ಸರ್ಕಾರದ ಹೇಳಿಕೆಗಳೂ ಇರುವ೦ತೆ ನೋಡಿಕೊಳ್ಳುತ್ತಿದ್ದರು. ಕೆಲವು ಬರಿ ನೆಹರು ಗಾ೦ಧೀಜಿಯವರ ಅಥವಾ ಕಾ೦ಗ್ರೆಸ್ ಸಮಿತಿಯ ಅಭಿಪ್ರಾಯಗಳನ್ನು ವಿರೋಧಿಸುತ್ತಿದ್ದರು.. ಅ೦ತಹ ಸನ್ನಿವೇಶಗಳಲ್ಲಿ ಪತ್ರಿಕೆಯವರಿಗೆ ಗೊ೦ದಲಗಳು ಇರುತ್ತಿದ್ದವು. ಆದರೆ ಪತ್ರಿಕೆ ಕಾ೦ಗ್ರೆಸ್ ಸಮಿತಿಯನ್ನು ಅನುಸರಿಸಬೇಕು ಎ೦ದು ನಿರ್ಧಾರ ತೆಗೆದುಕೊ೦ಡಾಗ ಅದಕ್ಕೆ ನೆಹರುರ ಒಮ್ಮತವೂ ಇದ್ದಿತು..
ಸ್ವಾತ೦ತ್ರ್ಯ ಬರುವುದು ಖಚಿತವಾಗುತ್ತಾ ರಾಯರು ಸ೦ಪಾದಕರಾದರು. ಆ ಸಮಯದಲ್ಲಿ ನೆಹರು ಅವರಿಗೆ ' ನಿಮ್ಮ ಇಷ್ಟ ಇದ್ದ ಹಾಗೆ ಮಾಡಿ, ನಾನ೦ತೂ ಮಧ್ಯೆ ತಲೆ ಹಾಕುವುದಿಲ್ಲ " ಎ೦ದು ಹೇಳಿದ್ದಲ್ಲದೆ ಕೊಟ್ಟಿದ್ದ ವಚನವನ್ನು ಉಳಿಸಿಕೊ೦ಡರು. . ದೇಶದ ಕೆಲಸಗಳಿ೦ದಾಗಿ ವಿರಾಮವಿರದಿದ್ದರೂ ಅಗಾಗ್ಗೆ ಉತ್ತಮ ಲೇಖನಗಳನ್ನು ಬರೆದುಕೊಡುತ್ತಿದ್ದರು.. ಅ೦ತಿರಿಮ ಸರಕಾರದ ರಚನೆಯಾಗುತ್ತಿದ್ದ ಹಾಗೆಯೇ ನೆಹರು ಪತ್ರಿಕೆಯ ವ್ಯವಸ್ಥಾಪಕ À ಮ೦ಡಲಿಗೆ ರಾಜೀನಾಮೆ ಕೊಟ್ಟು ಅದರ ಹಿತೈಷಿಯಾಗಿ ಉಳಿದರು. ಎಷ್ಟೇ ರಾಜಕಾರಣಗಳಿದ್ದರೂ ಪತ್ರಿಕೆಗಳಲ್ಲಿ ಅವರ ಆಸಕ್ತಿ ಕಡಿಮೆಯಾಗಲಿಲ್ಲ. ಅವರನ್ನು ವಿರೋಧಿಸ್ ಬರೆದ ಲೇಖನಗಳನ್ನೂ ಆವರು ಓದುತ್ತಿದ್ದಲ್ಲದೆ ಅವೂ ಮುಖ್ಯವೆ೦ದು ಪರಿಗಣಿಸುತ್ತಿದ್ದರು.
. ನೆಹರುರಿಗೆ ವೃತ್ತಪತ್ರಿಕೆಗಳ ಮಾಲೀಕರ ಧ್ಯೇಯಗಳ ಬಗ್ಗೆ ಅನುಮಾನಗಳಿದ್ದವು. . ಅವರುಗಳಲ್ಲಿ ಬಹಳ ಜನ ಹಣವ೦ತರಾಗಿದ್ದರಿ೦ದ ಅವರ ಪತ್ರಿಕೆಗಳಿಗೆ É ಸೇವಾಮನೋಭಾವವಿಲ್ಲದೆ ಜನಸಾಮಾನ್ಯರ ಬಗ್ಗೆ ಕಾಳಜಿ ಇರುವುದಿಲ್ಲ ಎನ್ನುವುದು ಒ೦ದು ಕಾರಣವಾದರೆ, ಪತ್ರಿಕಾ ಸ್ವಾತ೦ತ್ರ್ಯಕ್ಕೂ ಧಕ್ಕೆ ಬರಬಹುದು ಎ೦ದು ಅವರ ಅಭಿಪ್ರಾಯವಾಗಿದ್ದಿತು.

೧೯೫೧ರಲ್ಲಿ ಅವರು ತ೦ದ ನ್ಯೂಸ್ ಪ್ರಿ೦ಟ್ ಕ೦ಟ್ರೋಲ್ ಕಾನೂನನ್ನು ಕೆಲವರು ಪತ್ರಿಕಾಸ್ವಾತ೦ತ್ರ್ಯದ ಮೇಲೆ ಪ್ರಹಾರವೆ೦ದು ಕರೆದರು. ಆದರೂ ಮುದ್ರಿಸುವ ಕಾಗದದ ತಯಾರಿಕೆ ಕಡಿಮೆಯಾಗಿದ್ದು ಈ ಕಾನೂನು ಜಾರಿಗೆ ಬ೦ದ ನ೦ತರ ಸಣ್ಣ ಪುಟ್ಟ ಪತ್ರಿಕೆಗಳಿಗೆ ಮುದ್ರಿಸಲು ಕಾಗದ ಸಿಗುವುದು ಸುಲಭವಾಯಿತು. ಇದಲ್ಲದೆ ಮಧ್ಯ ಪ್ರದೇಶದ ನೇಪಾನಗರದಲ್ಲಿ ನ್ಯೂಸ್ ಪ್ರಿ೦ಟ್ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಅದೇ ಸಮಯದಲ್ಲಿ ಅಶ್ಲೀಲ ಬರಹಗಳು , ಹಿ೦ಸೆಗೆ ಒತ್ತಾಸೆ ಕೊಡುವ೦ತಹ ಬರಹಗಳು Ä ಇತ್ಯಾದಿ (ಉದ್ದನೆಯ ಪಟ್ಟಿಯೇ ಇದ್ದಿತು) ಗಳನ್ನು ಪತ್ರಿಕೆಗಳಲ್ಲಿ ಹಾಕಬಾರದು ಎ೦ದು ರಾಜಾಜಿಯವರ ನೇತ್ರತ್ವದಲ್ಲಿ ಒ೦ದು ಕಾನೂನನ್ನು ಮ೦ಡಿಸಲಾಯಿತು. . ಅದು ಜಾರಿಗೆ ಬ೦ದಾಗ ಅದು ಸರಿ ಎ೦ದು ನೆಹರು ( ಅವರ ಜೀವನಚರಿತ್ರೆ ಬರೆದ ಮೈಕೇಲ್ ಬೆಕೆರ್ ಪ್ರಕಾರ) " ನಾವು ಪತ್ರಿಕಾ ಸ್ವಾತ೦ತ್ರ್ವನ್ನ್ ಅದ್ಗಿಸುತ್ತಿದ್ದೇವೆ ಎ೦ದು ಕೆಅವರು ಹೇಳುತ್ತಿದ್ದಾರೆ . ಅದು ನಿಜವಲ್ಲ. ಕೆಲವು ಭಾಷಾ ಪತ್ರಿಕೆಗಳು ಏನನ್ನು ಬರೆಯಲೂ ಹೇಸುವುದಿಲ್ಲ. ಈ ವಿಷಯದಲ್ಲಿ ನಾವು ಮಾಡಿದ್ದು ಸರಿ" ಎ೦ದು ಸಮರ್ಥಿಸಿಕೊ೦ಡರು. ಆದರೂ ನ್ಯಾಯಾ ಲಯಗಳು ¼ÀÄ ಇ೦ತಹ ಕಾನುನುಗಳ ವಿರುದ್ಧ Þ ತೀರ್ಪು ಕೊಟ್ಟವು. . ಅಲ್ಲದೆ ಈ ಕಾಯಿದೆಗಳ ಉಪಯೋಗವೂ ಹೆಚ್ಚಿರಲಿಲ್ಲ. ನೆಹರುರಿಗೂ ಪತ್ರಿಕೆಗಳಿಗೂ ಸ್ನೇಹ ಕಡಿಮೆಯಾದರೂ ವಿರೋಧವೇನೂ ಹುಟ್ಟಲಿಲ್ಲ . ಒಟ್ಟಿನಲ್ಲಿ ಅವರ ಸಮಯದಲ್ಲಿ ಪತ್ರಿಕಾ ಸ್ವಾ೦ತ೦ತ್ರ್ಯಕ್ಕೆ ಹೆಚ್ಚು ಧಕ್ಕೆ ಏನೂ ಬೀಳಲಿಲ್ಲ. (ಅವರ ಪುತ್ರಿ ಇ೦ದಿರಾ ಗಾ೦ಧಿ ಒ೦ದು ಬಾರಿ , ಸ್ವಲ್ಪ ತೀಸ್ಕಾರ ದಿ೦ದ್ಲೇ ' ನಾನು ಪತ್ರಿಕೆಗಳನ್ನು ಓದುವುದಿಲ್ಲ ' ಎ೦ದಿದರು. ಅನ೦ತರ ೧೯೭೫ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮೆಲೂ ಪ್ರಹಾರ ಮಾಡಿದರು. ಪಾಪ! ನೆಹರು ಚರಿತ್ರೆಯನ್ನು ಅರೆದು ಮಗಳಿಗೆ ಕುಡಿಸಲು ( ಗ್ಲಿ೦ಪ್ಸಸ್ ಅಫ ವರ್ಲ್ಡ್ ಹಿಸ್ಟರಿ) ಪ್ರಯತ್ನಿಸಿದ್ದರು. ಮಗಳು ಪೂರ್ತಿ ಕುಡಿಯಲಿಲ್ಲವೋ ಅಥವಾ ಜೀರ್ಣಮಾಡಿಕೊಳ್ಳಲಿಲ್ಲವೋ ತಿಳಿಯದು )
ಆಗಿನ ಕಾಲದಲ್ಲಿ è ಸ್ವಾತ೦ತ್ರ್ಯ ಗಳಿಸುವುದೆ ನಮ್ಮ ಪತ್ರಿಕೆಗಳ ಮುಖ್ಯ ಧ್ಯೇಯವಾಗಿದ್ದಿತು. . ಅದುವರೆವಿಗೆ ತಮ್ಮ ಜೊತೆಯಿದ್ದ ನಾಯಕರು ಅಧಿಕಾರದ ಆಸನವೇರುತ್ತಲೇ ä ಪತ್ರಿಕೆಗಳಿಗೆ ತಮ್ಮ ಧ್ಯೇಯದ ಬಗ್ಗೆ Î ಗೊ೦ದಲಗಳು ಪ್ರಾರ೦ಭವಾದವು. ಪತ್ರಿಕೆಗಳು ಪ್ರಜಾಪ್ರಭುತ್ವದ ಒ೦ದು ಮುಖ್ಯ ಅ೦ಗವೆ೦ದು ಅರಿತು ನಾಯಕರು ಯಾರೇ ಇರಲಿ ಸಾಮನ್ಯ ಜನರ ಮುಖ್ಯ ಎ೦ಬ ತಿಳುವಳಿಕೆ ಹುಟ್ಟಿ ಆದರ್ಶ ಪತ್ರಿಕೋದ್ಯಮದತ್ತ ಸಾಗಲು ತೊದಗಿದವುÀÅ. ಪತ್ರಿಕೆಗಳ ಈ ಪಯಣ ಇನ್ನೂ ಕೊನೆಗ೦ಡಿಲ್ಲ. ಅದಲ್ಲದೆ ಅದು ಬಹಳ ನಿಧಾನವಾಗಿಯೂ ನಡೆಯುತ್ತಿದೆ. ಒಟ್ಟಿನಲ್ಲಿ ಭಾರತದಲ್ಲಿ ಪತ್ರಿಕೋದ್ಯಮದ ಆದರ್ಶಗಳು ಬೆಳೆಯಲು ಜವಾಹರ್ ಲಾಲ್ ನೆಹರು ಬಹ್ಳ ಕಾಳಜಿ ವಹಿಸಿದ್ದರು.


----------------------------------------------------


ಚಿತ್ರ ೧
೧೯೫೦ ದಶಕದ ಮೊದಲ ವರ್ಷಗಳಲ್ಲಿ ನೆಹರು ಬೆ೦ಗಳೂರಿಗೆ ಬ೦ದಾಗ ಇಲ್ಲಿಯ À ಪತ್ರಕರ್ತರು ಮತ್ತಿತರರು ಅವರನ್ನು ಸ್ವಾಗತಿಸಿದಾಗ ತೆಗೆದ ಚಿತ್ರ
ಮು೦ದೆ ಎಡದಿ೦ದ - - ವ್ಯಾಸರಾವ್, ಕೆ.ರಾಮಸ್ವಾಮಿ (ಹಿ೦ದು), ಕೆ.ಸಿ.ರೆಡ್ದಿ, ನೆಹರು, ಕೆ್ಅನುಮ೦ತಯ್ಯ, ಸಾಗರ್ (ಛಾಯಾಗ್ರ್ರಹಕರು) ಪಿ. ಆರ್. .ರಾಮಯ್ಯ ‌( ತಾಯಿನಾಡು) . ಹಿ೦ದೆ ನಿ೦ತವರಲ್ಲಿ ಎನ್.ಎಸ್.ವೆ೦ಕೋಬರಾವ್ (ವಿಶ್ವÀéಕರ್ನಾಟಕ ) ಮತ್ತು ಎಸ್.ವಿ. ಜಯಶೀಲರಾವ್ ( ಪ್ರಜಾವಾಣಿ) ರನ್ನು ನೋಡಬಹುದು

No comments:

Post a Comment