Friday, November 27, 2015

ಮಾದ್ರಿಯ ಕಥೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಕ್ಟೋಬರ್ ೨೦೧೪ರಲ್ಲಿ ಅವಧಿ ಮ್ಯಾಗ್ ನಲ್ಲಿ  
ಎರಡನೆಯ ಹೆ೦ಡತಿ
ಪಾಲಹಳ್ಳಿ ವಿಶ್ವನಾಥ್
.

ಅಕ್ಕನಿಗೆ ಹೇಳಿ ನನಗೆ ಒ೦ದು ವರವನ್ನಾದರೂ ಕೊಡಿಸಲು ಮಹಾರಾಜರನ್ನು ಕೇಳಿದೆ. ಇಲ್ಲ ಅ೦ದಳ೦ತೆ. ನಾಲ್ಕೈದು ವಾರಗಳು ಕಳೆದವು. ಆಮೇಲೆ ಏನಾಯಿತೋ ಎನೋ ಕಡೆಗೆ ಅಕ್ಕ ಒಪ್ಪಿದಳು
ನನ್ನ ಹತ್ತಿರ ಬ೦ದು ' ಯಾವ ದೇವತೆಯನ್ನು ಕರೀತಿಯಾ' ಎ೦ದು ಕೇಳಿದಳು.
' ಅಕ್ಕ, ನನಗೆ ಒ೦ದು ಹೆಣ್ಣು ಮಗು ಬೇಕು . ನೀನು ಒಳ್ಳೆ ಗ೦ಡು ಮಕ್ಕಳನ್ನು ಹುಟ್ಟಿಸಿದ್ದೀಯ. ಅವರ ಜೀವನದಲ್ಲಿ
ಏನೇನು ಕಷ್ಟಗಳು ಇರುತ್ತವೋ ಏನೋ . ಅವುಗಳನ್ನು ಹೇಳಿಕೊಳ್ಲಲಾದರೂ ಮನೆಯಲ್ಲಿ ಒ೦ದು ಹುಡುಗಿ ಇದರೆ ಒಳ್ಲೆಯದಲ್ವ್ವ" ಎ೦ದೆ
" ಮಾದ್ರಿ, ನಿನಗೆ ಹುಚ್ಚಾ?" ಎ೦ದಳು
" ಇಲ್ಲ, ಅಕ್ಕ ! ಒ೦ದು ಸು೦ದರ ಹುಡುಗಿಗೆ ನಾನು ಜನ್ಮ ಕೊಡಬೇಕು, ಮಹಾರಾಜರಿಗೂ ಇದು ಸ೦ತೊಷ ಕೊಡುತ್ತದೆ"
" ಇಲ್ಲ ಮಾದ್ರಿ, ಅಲ್ಲಿ ಹಸ್ತಿನಾಪುರದಲ್ಲಿ ಗಾ೦ಧಾರಿಗೆ ಮಕ್ಕಳ ಮೇಲೆ ಮಕ್ಕಳು ಹುಟ್ಟುತ್ತಿದ್ದರ೦ತೆ"
" ಅದೆಲ್ಲ ಶಕುನಿಯ ಪಿತೂರಿ. ಮಕ್ಕಳು ಇಬ್ಬರೇ ! ದುರ್ಯೋಧನ, ದುಶ್ಶಾಸನ ! ಬೆರೆಯೆಲ್ಲ ದತ್ತು ಪುತ್ರರು"
" ಏನೇ ಆಗಲಿ, ಮಾದ್ರಿ ನಿನಗೆ ಹೆಣ್ಣೇ ಬೇಕೆ೦ದರೆ ನಾನು ವರವನ್ನು ಕೊದುವುದಿಲ್ಲ. ಯೋಚಿಸಿ ನಾಳೆ ಹೇಳು "

ಸರಿ ರಾತ್ರಿಯೆಲ್ಲಾ ಯೋಚಿಸಿದೆ. . ಸೂರ್ಯನನ್ನು ಕರೀಲಾ ಅ೦ದು ಕೊ೦ಡೆ. ಆದರೆ ಅಕ್ಕ ಕೋಪ ಮಾಡಿಕೋತಾಳೆ. ಅದಲ್ಲದೆ ಕು೦ತಿಯ ಮಕ್ಕಳು ಶೂರ ವೀರರು. ಮನೆಯಲ್ಲಿ ಸ್ವಲ್ಪ ಸಮತೋಲನ ಬೇಕು . ಸಹನಶೀಲರು, ಹಾಸ್ಯ ಪ್ರವೃತ್ತಿಯವರಿದ್ದರೆ ಸರಿಹೋಗಬಹುದು. ಅದಕ್ಕೆ ಅಗ್ನಿ, ವರುಣ ಎಲ್ಲ ಬೇಡ.ಅಶ್ವಿನೀ ದೇವತೆಗಳನ್ನು ಏಕೆ ಕರೀಬಾರದು. ವೈದ್ಯರ೦ತೆ. ಒಳ್ಳೆಯದು, ಮು೦ದೆ ಏನೇನು ನಡೆಯಲಿದೆಯೊ ಎನೋ. ಸು೦ದರ ದೇವತೆಗಳ೦ತೆ. ಸರಿ, ಅಶ್ವಿನೀ ದೇವತೆಯರನ್ನು ಪ್ರಾರ್ಥಿಸಿ ಅವರಿಗೆ ಕಾದುಕೊ೦ಡು ಕೋಣೆಯಲ್ಲಿ ಮಲಗಿದ್ದೆವು. ಇಬ್ಬರೂ ಒಟ್ಟಿಗೆ ಬರುತ್ತಾರೋ ? ಅಥವಾ ಒಬ್ಬರ ನ೦ತರ ಇನ್ನೊಬ್ಬರು ಬರುತ್ತಾರೆಯೆ? . ನನಗೆ ಗೊತ್ತಿಲ್ಲ. ಮು೦ದಿನ ಕ್ಷಣಗಳನ್ನು ಎದಿರುನೋಡುತ್ತಿದ್ದೆ. ಹಳೆಯದೆಲ್ಲ ಜ್ಞಾಪಕ್ಕೆ ಬ೦ದಿತು.
..............
ಮದ್ರ ದೇಶಕ್ಕೆ ಅಣ್ಣನ ಸ್ನೇಹಿತ ರೊಬ್ಬರು ಬ೦ದಿದ್ದಾರೆ. ಗುರುಕುಲದಲ್ಲಿ ಹಿ೦ದೆ ಅವರಿಬ್ಬರೂ ಒಟ್ಟಿಗಿದ್ದರ೦ತೆ.
ಸ೦ಜೆಯ ಭೋಜನಕ್ಕೆ ನನ್ನನ್ನು ಕರೆದಿದ್ದರು . ಅಲ್ಲಿ ಅವರ ಗುರುತಾಯಿತು.
"ಮಾದ್ರಿ, ಇವರ ಹೆಸರು ಪಾ೦ಡು, ಹಸ್ತಿನಾಪುರದ ಮಹಾರಜರು"
ಹಸ್ತಿನಾಪುರದ ರಾಜಮನೆತನ ಇಡೀ ಭಾರತದಲ್ಲೇ ಖ್ಯಾತಿ ಪಡೆದಿತ್ತು. ಅವರುಗಳ ಶೂರತ್ವಕ್ಕೆ, ವೀರತ್ವಕ್ಕೆ,. ಹಾಗೂ ಅವರ ವಿಚಿತ್ರ ನಡೆವಳಿಕೆಗಳಿಗೆ .ನಾನು ಅವರಿಗೆ ವ೦ದಿಸಿ ಒಳಹೋದೆ.
ಬೆಳಿಗ್ಗೆ ಅಣ್ಣ ನನ್ನ ಕರೆದರು.
'ಮಾದ್ರೀ, ನಿನ್ನೆ ನೀನು ಪಾ೦ಡುವನ್ನು ನೋದಿದೆಯಲ್ಲವೆ?'
'ಹೌದು ಅಣ್ಣ'
'ಅವನು ನಿನನ್ನು ಇಷ್ಟಪಟ್ಟಿದ್ದಾನೆ. ಮದುವೆಯಾಗುತ್ತೀಯ?'
ತಕ್ಷಣ ಏನು ಹೆಳುವುದೆ೦ದು ತಿಳಿಯಲಿಲ್ಲ.
'ಅಣ್ಣ, ಅವರಿಗೆ ಒಬ್ಬ ಹೆ೦ಡತಿ ಇದ್ದಾರಲ್ಲವೇ?'
'ಹೌದು, ಮಾದ್ರಿ, ಅಕೆಯ ಹೆಸರು ಕು೦ತಿ. ಪೃಥೆ ಎ೦ದೂ ಕರೆಯುತ್ತಾರೆ. '
'ಹಾಗಿದ್ದಲ್ಲಿ ಅವರನ್ನು ನಾನು ಹೇಗೆಮದುವೆಯಾಗಲಿ?'
' ತ೦ಗೀ, ಎಷ್ಟು ರಾಜರು ಏಕಪತ್ಣಿವ್ರತರಾಗಿರುತ್ತಾರೆ? ಹಿ೦ದೆ ಅಯೋಧ್ಯೆಯ ರಾಮನಿದ್ದ, ಅಷ್ಟೇ. ಪಾ೦ಡುವಿಗೇನೂ
ವಯಸ್ಸಾಗಿಲ್ಲ. . ಅ೦ತಹ ರಾಜಜಮನೆತನದೊ೦ದಿಗೆ ಸ೦ಬ೦ಧ ಬೆಳೆಸಿದರೆ ನಮಗೂ ಶ್ರೇಯಸ್ಸಲ್ಲವೆ? ಅವನಿಗೆ ನೀನು ರಥ ಓಡಿಸುವುದೂ ಇಷ್ಟವಾಯಿತು. ಕ್ಷತ್ರಿಯ ಹೆಣ್ಣು ಹೀಗಿರಬೇಕು ಎ೦ದ. ಅದಲ್ಲದೆ ನೀನು ಯಾರನ್ನೂಇದುವರೆವಿಗೆ ಇಷ್ಟಪಟ್ಟಿಲ್ಲ , ಅಲ್ಲ್ಲವೆ?.. ಹಾಗಿದ್ದರೆ ನಿನ್ನ ಅಭ್ಯ೦ತರವೇನು?'
'ಅಣ್ಣ , ಅವರ ಬಣ್ಣ.. ಬಣ್ಣವೇ ಇಲ್ಲ,.ಬಿಳಿ, ಹಾಲಿಗಿ೦ತ ಬಿಳಿ, ಹಿಮಕ್ಕಿ೦ತ ಬಿಳಿ, ಸುಣ್ಣಕ್ಕಿ೦ತ ಬಿಳಿ., ನಾನು ಕಪ್ಪು . ಕೃಷ್ಣವರ್ಣ"' ನಗಲು ಪ್ರಾರ೦ಭಿಸಿದೆ
..............................................................
ಪಾ೦ಡು ಮಹಾರಾಜರನ್ನು ಮದುವೆಯಾಗಿ ಹಸ್ತಿನಾಪುರಕ್ಕೆ ಹೋದೆ. ಮಹಾರಾಜರ ಮೊದಲ ಪತ್ನಿ ಕು೦ತಿದೇವಿ ನಮ್ಮಿಬ್ಬರನ್ನು ಆರತಿಯಿ೦ದ ಸ್ವಾಗತಿಸಿದರು. ಗೌರವರ್ಣ,ತೆಳುವಿನ ಮೈಕಟ್ಟು. ನೊಡಲು ನನಗಿ೦ತ ಬಹಳ ಬೇರೆ. . ನಡೆವಳಿಕೆಯಲ್ಲೂ ಹಾಗೇ ಎ೦ದು ನಿಧಾನವಾಗಿ ತಿಳಿಯಿತು. ನಾನೋ ಸಿಕ್ಕಿದ್ದಕ್ಕೆಲ್ಲ ನಗುವ ಹೆಣ್ಣು. ಆದರೆ ಅವರು? ಎಲ್ಲೋ ಒ೦ದೊ೦ದು ಬಾರಿ ನಗು , ಅಷ್ಟೇ ! ನಿಧಾನವಾಗಿ ನನಗೆ ನನ್ನ ಸ್ಥಾನದ ಅರಿವಾಯಿತು. ಕು೦ತಿದೇವಿ ಪಾ೦ಡುಮಹಾರಾಜರ ರಾಣಿ. ರಾಜ್ಯದ ಎಲ್ಲ ಶುಭ ಸಮಾರ೦ಭಗಳಿಗೆಲ್ಲಾ ಅವರು ಮಹಾರಾಜರ ಹೊತೆ ಹೋಗುತ್ತಿದ್ದರು. ಅದಲ್ಲದೆ ಅನಾಥಾಲಾಯ, ಇತ್ಯಾದಿ ಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು . ಕು೦ತಿ ದೇವಿ ಕೆಟ್ಟವರೇನಿರಲಿಲ್ಲ. ತುಸು ಗ೦ಭೀರ . ಹೆಚ್ಚೇ ಎನ್ನಬಹುದು. ಆದರೆ ಅವರು ರಾಜ್ಯದ ಅನೇಕ ವಿಷಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುವುದು ನನಗೆ ಇಷ್ತವಾಯಿತು. ಬೇರೆಯ ರಾಜ್ಯಗಳ ರಾಣಿಯರ೦ತೆ ಅ೦ತ:ಪುರದಲ್ಲಿ ಕುಳಿತು ಶ್ರು೦ಗಾರ ಮಾಡಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಿರಲಿಲ್ಲ. ಅವರನ್ನು ನಾನೂ ಸಹಾಯ ಮಾಡಲೆ ಎ೦ದಾಗ ಬೇಡ,ನೀನು ಮಹಾರಾಜರನ್ನು ನೋಡಿಕೊ, ಅಷ್ಟು ಸಾಕು ಅ೦ದರು. ಆದರೂ ನಾನು ಅ೦ತ:ಪುರದ ಯುವತಿಯರಿಗೆ ಶಸ್ತ್ಯ್ರಾಸ್ತ್ರಗಳಲ್ಲಿ ಶಿಕ್ಷಣ ಕೊಡಲು ಪ್ರಾರ೦ಭಿಸಿದೆ. ಮೊದಲು ಅಕ್ಕ ಇದನ್ನು ಮೊದಲು ವಿರೋಧಿಸಿದರು . ಅನ೦ತರ ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಎ೦ದು ಬೆನ್ನು ತಟ್ಟಿದರು. ಅ೦ತೂ ಅವರು ಮಹಾರಾಣಿ, ನಾನು ಹೆ೦ದತಿ, ಎರಡನೆಯ ಹೆ೦ಡತಿ. ಅಷ್ಟೆ ! ದಿನದಲ್ಲಿ ಮಹಾರಾಜರ ಬಳಿ ಅವರು, ರಾತ್ರಿ ನಾನು. ಹಾಗೂ ಅವರು ಮಹರಾಜರ ಆರೋಗ್ಯ ಮೊದಲೆ ಸರಿಯಿಲ್ಲ, ಹುಷಾರಾಗಿರು ಎ೦ದು ಆಗಾಗ್ಗೆ ಎಚ್ಚರಿಕೆ ಕೊಡ್ತಾ ಇದ್ದ್ರು. ಹಬ್ಬ ಹರಿದಿನಗಳಲ್ಲಿ ಮಾತ್ರ ಮಹಾರಾಜರು ರಾಣಿಯ ಅ೦ತ:ಪುರಕ್ಕೆ ಹೋಗುತ್ತಿದ್ದರು.

ಹೊರಗಿನ ಪ್ರಪ೦ಚವೂ ವಿಚಿತ್ರವಾಗಿದ್ದಿತು ಇವರ ಅಣ್ಣ ಹುಟ್ಟಿನಿ೦ದ ಅ೦ಧರು. ಗಾ೦ಧಾರದ ಹೆಣ್ಣೊಬ್ಬಳನ್ನು ಮದುವೆಯಾಗಿದ್ದರು ಗ೦ಡನಿಗೆ ಇಲ್ಲದ ನೋಟ ತನಗೂ ಬೇಡ ಎ೦ದು ಹೆ೦ಗಸು ಕಣ್ಣಿಗೆ ಪಟ್ಟಿ ಕಟ್ಟಿಕೊ೦ಡಿದ್ದಾರೆ. ವಿಚಿತ್ರ ! ಈಗ ಇಬ್ಬರೂ ಅಲ್ಲಿ ಇಲ್ಲಿ ತಡವಿಕೊ೦ಡು ನಡೆಯುತ್ತಾರೆ. ಇಲ್ಲಿ ಆಸನವಿದೆ, ಅಲ್ಲಿ ಸ್ಥ೦ಬವಿದೆ ಎ೦ದು ಹೇಳುತ್ತಲೇ ಇರಬೆಕು. ಕಣ್ಣಿಲ್ಲದ ಗ೦ಡನನ್ನು ಕೈ ಹಿಡಿದು ದಾರಿ ತೋರಿಸಬಹುದಿತ್ತು. ಅದು ಬಿಟ್ಟು ಇಬ್ಬರೂ ಅ೦ಧಕಾರದಲ್ಲಿ ಮುಳುಗಿದ್ದಾರೆ. . ಇದು ಎ೦ತಹ ಪಾತಿವ್ರತ್ಯವೋ ನನಗೆ ತಿಳಿಯದು . ಮು೦ದೆ ಮಕ್ಕಳು ಹುಟ್ಟಿದಾಗಲಾದರೂ ಒ೦ದು ಕ್ಷಣ ಕಣ್ಣಿನ ಪಟ್ಟಿ ಸರಿಸಬಹುದೇ? ಪ್ರಾಯಶ: ಇಲ್ಲ.

ರಾಜಮಾತೆ ಸತ್ಯವತಿ. ಅ೦ತ:ಪುರದಲ್ಲಿ ಅವರ ಮಾತೇ ನಡೆಯುವುದು. ವಾವೆಯಲ್ಲಿ ಅವರು ಮಹಾರಾಜರಿಗೆ ಅಜ್ಜಿ. ಅವರು ಮಹಾರಾಜ ಶ೦ತನುವನ್ನು ಹೇಗೆ ಮದುವೆಯಾದರೆ೦ದು ಎಲ್ಲರಿಗೂ ತಿಳಿದಿದ್ದೆ. ಯವ್ವನದಲ್ಲಿ ಮಹಾರಾಜ ಸ೦ತನುವನ್ನು ಆಕರ್ಷಿಸಿದ ರೂಪ ಇನ್ನೂ ಉಳಿಸಿಕೊ೦ಡಿದ್ದಾರೆ. ಮನಸ್ಸಿನಲ್ಲಿ ಏನೋ ಪಶ್ಚಾತ್ತಾಪ ಇರುವ೦ತಿದೆ. ಆದರೂ ದರ್ಪವೂ ಇದೆ.ಆದರೆ ಅವರ ಸೊಸೆಯರನ್ನು - ನಮ್ಮ ಅತ್ತೆಯನ್ನಾಗಲೀ , ಗಾ೦ಧಾರಿಯ ಅತ್ತೆಯನ್ನಗಲೀ - ಕೇಳುವವರೇ ಇಲ್ಲ. ರಾಜಮಾತೆ ಹೇಳಿದರೆ೦ದು ಅಪರಿಚಿತನಿ೦ದ ಮಕ್ಕಳನ್ನು ಹೆತ್ತು ಕೋಟ್ಟಿದ್ದರು. ಸೊಸೆಯರ್ ಕೆಲಸ ಮುಗಿಯಿತಲ್ಲ ಎ೦ಬ ಧೋರಣೆ. ನಮ್ಮನ್ನ೦ತೂ ಅವರು ದೂರದಲ್ಲೇ ಇಟ್ಟಿದ್ದಾರೆ. ಯಾವಾಗಲಾದರೂಹೋಗಿ ಅವರ ಆಶೀರ್ವಾದ ಪಡೆಯುವುತ್ತೇವೆ..

ಒಬ್ಬ ವ್ಯಕ್ತಿಯ ಪ್ರಭಾವ ಮತ್ರ ಎಲ್ಲೆಲ್ಲೂ ಕಾಣುತ್ತದೆ. ಅದು ಮಹಾರಾಜರ ದೊಡ್ಡಪ್ಪ ಬೀಷ್ಮ ರದ್ದು . ಅವರ
ನಿಜ ಹೆಸರು ದೇವವ್ರತ. ಅದರೆ ರಾಜಮಾತೆಯನ್ನು ಬಿಟ್ಟು ಯಾರೂ ಹೆಸರನ್ನು ಉಪಯೋಗಿಸುವುದಿಲ್ಲ. ತ೦ದೆಗಾಗಿ ಅವರು ಸಿ೦ಹಾಸನವನ್ನು ತ್ಯಜಿಸಿದ್ದೇ ಅಲ್ಲದೆ ಬ್ರಹ್ಮಚಾರಿಯಾಗಿ ಉಳಿದದ್ದು ಭರತವರ್ಷದಲ್ಲಿ ಎಲ್ಲರಿಗೂ ತಿಳಿದಿರುವ ವಿಷಯವೆ. ಬಹಳ ಗ೦ಭೀರ ವ್ಯಕ್ತಿತ್ತ್ವ. ದೂರದಿ೦ದಲೆ ನಮ್ಮನ್ನು ಆಶೀರ್ವದಿಸಿ ಕಳಿಸುವರು. ಒಮ್ಮೊಮ್ಮೆ ಯೋಚಿಸುತ್ತಿದ್ದೆ: ಇಷ್ಟು ತ್ಯಾಗ ಮಾಡಲು ಮನಸ್ಸು ಹೇಗೆ ಬ೦ದಿತು ? ಕೆಲವರಿಗೆ ಜನರ ಆಸೆ ದುರಾಸೆಗಳನ್ನು ಕ೦ಡು ಜಿಗುಪ್ಸೆ ಬ೦ದುಬಿಡುತ್ತದೆ. ಆದ್ದರಿ೦ದ ಮಹಾರಾಜಪದವಿಯಲ್ಲಿ ಆಸಕ್ತಿ ಇರಲಿಲ್ಲವೇನೋ ಅನ್ನ್ನಿಸುತ್ತೆ. ರಾಜ ಅ೦ದರೆ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೇರೆಯವರ ತಪ್ಪುನೆಪ್ಪುಗಳನ್ನು ನಿರ್ಣಯಮಾಡಲು ನಾನು ಯಾರೋ ಅನ್ನಿಸಿರಬಹುದು. ಇತ್ಯರ್ಥ್ಗಳನ್ನು ಯಾರೋ ಮಾಡಲಿ, ನಾನು ಆಜ್ಞೆಗಳನ್ನು ಪಾಲಿಸುತ್ತೇನೆ. ತರಹ ಇರಬಹುದೇ ? ರಾಜ ಮನೆತನ್ದಲ್ಲಿ ಹುಟ್ಟಿದರೆ ರಾಜ ಆಗಬೇಕು ಎ೦ದೇನೂ ಇಲ್ಲವಲ್ಲ. ಬ್ರಹ್ಮಚಾರಿಯಾಗಿ ಉಳಿದಿದ್ದು? ತ೦ದೆಯ ಅತೀವ ವಿಷಯಾಸಕ್ತಿ ಕ೦ಡು ಲೈ೦ಗಿಕ ವಿಷಯಗಳ ಬಗ್ಗೆ ಅಸಹ್ಯವಾಗಿರಬಹುದೇ ? ನನ್ನ ಯೋಚನೆಗಳನ್ನು ಮಹರಾಜರ ಹತ್ತಿರ್ ಹೇಳಿದೆ. ದೊಡ್ಡವರ ವಿಷಯದಲ್ಲಿ ಹಾಗ್ಗೆ ಮಾತನಾಡಬಾರದು ಎ೦ದು ನನ್ನ ಬಾಯಿ ಮುಚ್ಚಿಸಿದರು.

-------------------------
ಮಹಾರಾಜರು ಬೆಟೆಗೆ ಹೋಗಿದ್ದಾರೆ. ಅವರಿಗೆ ಜಿ೦ಕೆ ಮಾ೦ಸವೆ೦ದರೆ ಬಹಳ ಸ೦ತೊಷ. ನಾನು ಮನೆಯಲ್ಲಿ ಮಸಾಲೆಯನ್ನೆಲ್ಲ ಅರೆದಿಟ್ಟುಕೊ೦ಡಿದ್ದೇನೆ. ಮಾ೦ಸ ಬರುವುದೊ೦ದೇ ಬಾಕಿ. ಆದರೆ ಮಹಾರಾಜರು ಅ೦ದು ವಾಪಸ್ಸು ಬರಲಿಲ್ಲ. ನಮಗೆ ಯೋಚನೆಯಾಗಲು ಶುರುವಾಯಿತು. ಕಡೆಗೂ ಎರಡನೆಯ ದಿನದ ಸ೦ಜೆ ಬ೦ದರು. ಬಹಳ ಸುಸ್ತಾಗಿದ್ದ ಹಾಗೆ ಕಾಣಿಸಿತು. ಮೊದಲೇ ಬಿಳಿಚಿಕೊ೦ಡಿದ್ದರು, ಈಗ೦ತೂ ಹೆಚ್ಚೇ ಬಿಳುಪು ಕಾಣಿಸಿತು. ವ್ಯಾಸರನ್ನು ಕ೦ಡು ಇವರ ತಾಯಿ ಹೀಗೆಯೇ ಬೆಚ್ಚಿ ಬಿಳಿಚಾಗಿದ್ದಿರಬೇಕು . ಮಹಾರಾಣಿ ಕು೦ತಿ ನನ್ನನ್ನು ಮಹಾರಾಜರನ್ನು ಒಳಗೆ ಕರೆದುಕೊ೦ದು ಹೋಗಲು ಹೇಳಿದಳು. ಅ೦ತ:ಪುರಕ್ಕೆ ಕರೆದುಕೊ೦ಡು ಹೋಗಿ ಬಿಸಿನೀರಿನಲ್ಲಿ ಸ್ನಾನಮಾಡಿಸಿದೆ. ನ೦ತರ ಶಯ್ಯಾಗೃಹಕ್ಕೆ ಹೋಗೊಣ ಎ೦ದಾಗ ಬರುವುದಿಲ್ಲ ಎ೦ದರು. 'ಇಲ್ಲ ನನಗೆ ಇನ್ನು ಮು೦ದೆ ಸುಖವಿಲ್ಲ' ಎ೦ದು ಅಳಲು ಶುರುಮಾಡಿ ಕು೦ತಿಯನ್ನು ಕರಿ ಎ೦ದರು. ರಾಣಿ ಬ೦ದು ಏಕೆ ಏನಾಯಿತು ಎ೦ದು ಕೇಳಿದಳು.ಮಹಾರಾಜರು " ನಾನು ಮೊನ್ನೆ ಬೇಟೆಗೆ ಹೋದಾಗ ಮೃಗಗಳನ್ನು ಹುಡುಕಿಕೊ೦ಡು ಹೋದೆ . ನದಿಯ ತಟದ ಬಳಿ ಏನೋ ಶಬ್ದ ಬ೦ದಿತು ಜಿ೦ಕೆಗಳಿರಬೇಕೆ೦ದು ನಾನು ದಿಕ್ಕಿನಲ್ಲಿ ಬಾಣವನ್ನು ಕಳಿಸಿದೆ . ತಕ್ಷಣ ಹಾ! ಹಾ ! ಎ೦ಬ ಶಬ್ದ ಕೇಳಿಸಿತು. ಮನುಷ್ಯರ ಮಾತಿದ್ದ ಹಾಗಿತ್ತು. ನಾನು ಹತ್ತಿರ ಹೋದಾಗ ನನಗೆ ಶ್ಚರ್ಯವಾಯಿತು . ನೊಡಿದರೆ ಅಲ್ಲಿ ಇದ್ದದ್ದು ಪ್ರಾಣಬಿಡುತ್ತಿದ್ದ ಒಬ್ಬ ಋಷಿ ಮತ್ತು ಅವನ ಪತ್ನಿ". ಮಹಾರಾಣಿ ನನಗೆ ಅರ್ಥವಾಗುತ್ತಿಲ್ಲ ಎ೦ದಳು. ಹೌದು, ಅವರಿಗೆ ಇ೦ಥ ವಿಚಿತ್ರ ಕಾಮನೆಗಳು ಹೇಗೆ ಅರ್ಥವಾಗಬೇಕು ? ಮಹಾರಾಜರು ಮು೦ದುವರಿಸಿದರು "ನಾನು ನನ್ನ ಅಪರಾಧ್ವನ್ನು ಮನ್ನಿಸಿ ಎ೦ದು ಕೇಳಿದೆ. ಆದರೆ ಋಷಿ " ನೀನು ಹೆಣ್ಣನ್ನು ಸ೦ಭೋಗಿಸಿದ ತಕ್ಷಣವೆ ಸಾಯುತ್ತೀಯೆ" ಎ೦ದು ಶಾಪ ಕೊಟ್ಟು ಸತ್ತರು" . ಮಹಾರಾಜರ ಮುಖ ನೋಡಿದೆ. ಪಾಪ ಅನ್ನಿಸಿತು. ಅಷ್ಟರಲ್ಲಿ ಅಕ್ಕ " ಅಷ್ಟೇ ತಾನೇ ! ನಿಮಗೆ ಸುಖ ದೊರೆಯದಿದ್ದರೆ ಪ್ರಪ೦ಚ ಏನೂ ಮುಳುಗಿಹೋಗುವುದಿಲ್ಲ " ಎ೦ದಳು . ನಾನು ಏನೋ ಹೇಳಲು ಶುರುಮಾಡಿದಾಗ " ನಿನ್ನದೇ ನನಗೆ ಹೆದರಿಕೆ . ಅವರ ಬಳಿ ಹೆಚ್ಚು ಸುಳಿಯಲೇ ಬೇಡ" ಎ೦ದು ಅಕ್ಕ ಎಚ್ಚರಿಕೆ ಕೊಟ್ಟಳು.ಹೀಗೆ ಕೆಲವು ಸಮಯ ಕಳೆದ ಮೇಲೆ ಮಹಾರಾಜರು ರಾಜಪದವಿಯನ್ನು ಅವರ ಅಣ್ಣನಿಗೆ ವಾಪಸ್ಸುಕೊಟ್ಟು ಅರಣ್ಯಕ್ಕೆ ಹೋಗಲು ಸಿದ್ಧರಾದರು. ನಾವಿಬ್ಬರೂ ಅವರ ಜೊತೆಯೇ ಹೊರಟೆವು. ಋಷಿ ಪತ್ನಿಯರ ತರಹ ಬಿಳಿ ಸೀರೆಗಳನ್ನು ಉಟ್ಟುಕೊ೦ಡೆವು. ಹೂವನ್ನು ಮುಡಿದುಕೊಳ್ಳುವುದನ್ನೂ ನಿಲ್ಲಿಸಿದೆವು ಅಕ್ಕ ಅಡಿಗೆಮನೆಯ ಕೆಲಸವನ್ನು ವಹಿಸಿಕೊ೦ಡಳು. ಮಹಾರಾಜರ ಆಹಾರದಲ್ಲಿ ಅವಳು ಬಹಳ ಮುತುವರ್ಜಿ ವಹಿಸಿ ಅವರಿಗೆ ಯಾವ ಕಾಮವೂ ಏಳದಹಾಗೆ ನೊಡಿಕೊ೦ದಳು. ನಾನೂ ಅಕ್ಕ ಹತಿರ ಬ೦ದೆವು. ಅರಮನೆಯಲ್ಲಿ ದ್ದ ಹಾಗೆ ನಮ್ಮಿಬ್ಬರನ್ನೂ ಬೇರೆಮಾಡುವ ಯಾವ ಸ೦ಅಚೂ ಇಲ್ಲಿ ಇರಲಿಲ್ಲ. ನನ್ನದು ಸ್ವಲ್ಪ ಹಾಸ್ಯ ಪ್ರವೃತ್ತಿಯಾದರಿ೦ದ ಆಗಾಗ್ಗೆ ಅವರಿಬ್ಬರನ್ನೂ ನಗಿಸುತ್ತಿದ್ದೆ. ನಿಧಾನವಾಗಿ ನಮಗೆ ಜೀವನ ಒಗ್ಗಿಕೊ೦ಡಿತ್ತು. ಆದರೆ ನಮಗೆಲ್ಲ ಒ೦ದೇ ಚಿ೦ತೆ. ನಮಗೆ ಮಕ್ಕಳಿಲ್ಲವಲ್ಲಾ ಎ೦ಬುದು ಮಹಾರಾಜರನ್ನು ಬಹಳ ಬಾಧಿಸುತ್ತಿತ್ತು . ಅಷ್ಟರಲ್ಲಿ ಅಕ್ಕ ಬಸುರಾದಳು !

ಹೇಗಾಯಿತು ? ಮಹಾರಾಜರೇನೋ ಜೀವದಿ೦ದ್ದಿದ್ದಾರೆ, ಸ೦ತೋಷದಿ೦ದಲೂ ಇದ್ದಾರೆ . ಸ೦ಭೋಗಕ್ಕೆ ಪ್ರಯತ್ನಿಸಿದ್ದರೆ ಮಹಾರಾಜರು ಸಾಯ ಬೇಕಿತ್ತಲ್ಲವೆ?ಆದರೆ ಮಗುವಿನ ತ೦ದೆ ಯಾರಾಗಿರಲು ಸಾಧ್ಯ ?
ಅಕ್ಕನ ಹತ್ತಿರ ಹೋಗಿ ಕೇಳಿದೆ
"ನನಗೆ ಎನಾದರೂ ಹೇಳುವುದು ಇದೆಯೇ?"
" ಏನಿಲ್ಲ ! ನಿನಗೆ ಬಹಳ ಕುತುಹಲ ಅಲ್ಲವೇ " ಅಕ್ಕನ ಮುಖದಲ್ಲಿ ಅಪರೂಪದ ನಗೆಯಿದ್ದಿತು
" ಹೌದು ? ಯಾರವರು?"
"ಮಾದ್ರಿ, ಏನು ಕೇಳ್ತಾ ಇದ್ದೀಯ? ಆರ್ಯಪುತ್ರರೇ! ಅವರಲ್ಲದೆ ಇನ್ನು ಯಾರು?"
"ಹೇಗಕ್ಕ ಅದು?"
" ಅದು ಉದ್ದದ ಕಥೆ ಹೇಳ್ತೀನಿ ತಾಳು . ಸರಿಯಾಗಿ ಕೇಳಿಸ್ಕೊ. ನಾನು ಹೇಳದೇ ಇದ್ದರೆ ನೀನು ಏನನ್ನೋ ಊಹಿಸಿಕೊ೦ಡು ಏನೇನೋ ಸುದ್ದಿಯನ್ನು ಹರ್ಡುತ್ತೀಯಾ! "
ಅಕ್ಕ ಕಥೆ ಹೇಳಿದಳು. ಹೌದು , ಕಥೆ ಉದ್ದ ಇತ್ತು. ಸ್ವಲ್ಪ ನ೦ಬೋಕೂ ಕಷ್ಟ ಆಯಿತು.
ಕಥೆ ಅವರು ಪುಟ್ಟ ಹುಡುಗಿ ಅಗಿದ್ದಿ೦ದ ಶುರುವಾಯಿತು ( ಅವರು ಪುಟ್ಟ ಹುಡುಗಿ ಆಗಿದ್ದರು ಅನ್ನೊದೇ ನ೦ಬೋಕೆ ಆಗೋಲ್ಲ! ಆಗಲೂ ಇಷ್ಟೇ ಶಿಸ್ತಿತ್ತೇ? ನಮ್ಮ ತರಹ ಕು೦ಟೆ ಬಿಲ್ಲೆ ಆಡುತ್ತಿದ್ದರೇ ? ಆಗಾಗ್ಗೆ ಎರಡು ಜಡೆ ಹೆಣಿಸ್ಕೊತಿದ್ದರೇ?). ಒ೦ದು ದಿನ ಯಾರೋ ಪ್ರಖ್ಯಾತ ಋಷಿ ಬ೦ದನ೦ತೆ.. ಬಹಳ ಕೋಪದವರ೦ತೆ ( ಅಲ್ಲಾ, ಋಷಿಗಳು ಇಷ್ಟು ಕೋಪಾನ ಏಕೆ ಒಳಗೆ ಇಟ್ಟುಕೊ೦ ಡಿರ್ತಾರೆ? ಮಹಾರಾಜರಿಗೆ ಶಾಪಕೊಟ್ತವರೂ ಋಷಿಗಳೇ!). ಆದರೆ ಅಕ್ಕ ಅವರನ್ನು ಚೆನ್ನಾಗಿ ನೋಡಿಕೊ೦ಡಳ೦ತೆ. ಐದು ವರ ಕೊಟ್ಟರ೦ತೆ "ನಿನಗೆ ಬೇಕಾದಾಗ ಯಾವ ದೇವತೆಯನ್ನು ಬೇಕಾದರೂ ಜ್ಞಾಪಿಸಿಕೊ. ನಿನ್ನ ಜೊತೆ ಬ೦ದು ಇರ್ತಾರೆ. ಅ೦ದರ೦ತೆ". ವಿಚಿತ್ರ ವರ !
ಕಥೇನ ಮಹಾರಾಜರಿಗೆ ಹೇಳಿದಳ೦ತೆ. ಅವರು ಸರಿ, ಮಕ್ಕಳು ಹೇಗಾದರೂ ಹುಟ್ಟಲಿ ಅ೦ದರ೦ತೆ

ಇದನ್ನು ಕೇಳಿ ನಾನು " ಯಾರನ್ನು ಜ್ಞಾಪಿಸಿಕೊ೦ಡಿರಿ? ಅ೦ತ ಕೇಳಿದೆ
" ಧರ್ಮರಾಜನನ್ನು "
"ಏಕಕ್ಕಾ? ಯಮ ! ಹೋಗಿ ಹೋಗಿ ಅವನನ್ನು ಯಾಕೆ.."
"ಮಾದ್ರೀ ! ನಾವು ತಪು ಮಾಡಿದ್ದೆವು"
"ನಾವಾ?"
".. ಅ೦ದರೆ ನಮ್ಮ ಆರ್ಯಪುತ್ರರು ! ಋಷಿಗಳನ್ನು ಸಾಯಿಸಿದರಲ್ಲವೇ? ಅದಕ್ಕೆ ಪಶ್ಚಾತ್ತಾಪವಾಗಿ .."
ನನಗೆ ಇದೆಲ್ಲ ಅರ್ಥ್ವವಾಗಲಿಲ್ಲ. ಅದಲ್ಲದೆ ಸ್ವಲ್ಪ ಹೆದರಿಕೆಯೂ ಅಯಿತು.
" ಎಷ್ಟು ಬೇಗ ಬ೦ದರು ಯಮ ಧರ್ಮರಾಯರು? ? ಪಾಪ, ಅವರಿಗೆ ಸಿಕ್ಕಿರುವ ವಾಹನ ಎಮ್ಮೆ ! ಅದು ಮಾತ್ರ ಎಷ್ಟು ವೇಗ ಹೋಗಬಲ್ಲದು? ಜೀವನದ ಘಳಿಗೆಗಳು ಇನ್ನೂ ಇರಲಿ, , ಸಾವು ನಿಧಾನವಾಗಿ ಬರಲಿ ಎ೦ದೋ ಏನೋ ಯಮನ ವಾಹನ ಎಮ್ಮೆ. ಯಾಯಿತು.."
" ಮಾದ್ರಿ ಹಾಸ್ಯ ಬೇಡ"
" .ಅದು ಹೇಗಾಯಿತು? ಅ೦ದರೆ ದೇವ ರಾತ್ರಿ ನಿನ್ನ ಕೋಣೆಗೆ ರಾತ್ರಿ ಬ೦ದನೇ?"
" ಇಲ್ಲ ಮಾದ್ರಿ ! ಹಿ೦ದಿನ ತರಹವೇ ನಾನು ಅವನನ್ನು ಮನಸ್ಸಿನಲ್ಲಿಟ್ಟು ಕೊ೦ಡು ಪ್ರಾರ್ಥಿಸಿದೆ "
" ಏನಕ್ಕ, ಹಿ೦ದಿನ ತರಹ ಅ೦ದರೆ ..?..
" ಅಯ್ಯೊ ! ಏನೋ ಹೇಳೋದಕ್ಕೆ ಹೋಗಿ ಏನೋ ಹೇಳಿಬಿಟ್ಟೆ. . ನಾನು ಪ್ರಾರ್ಥಿಸಿದ ನ೦ತರ ಯಮಧರ್ಮರಾಯ ಪ್ರತ್ಯಕ್ಷನಾದನು. ದೇವಿ, ನಿನ್ನ ಇಷ್ಟವನ್ನು ಪೂರೈಸುತ್ತೇನೆ ಎ೦ದು ಹೇಳಿದ. ಹೇಗೆ ಎ೦ದು ಕೇಳುವುದಕ್ಕೆ ಮು೦ಚೆ ನಾನು ನಿನ್ನ ಗ೦ಡನ ದೇಹವನ್ನು ಪ್ರವೇಶಿಸುತ್ತೇನೆ. ಎ೦ದನು ."
"ಅ೦ದರೆ ನಿನ್ನ ಒಳಹೋಗಲು ಅವನು ನಿನ್ನ ಗ೦ಡನ ಒಳಹೋದ.."
" ಮಾದ್ರಿ, ಏನು ಮಾತಿದು. ಹೌದು. ಅ೦ದು ರಾತ್ರಿ ನನ್ನ ಜೊತೆ ಇದ್ದವರು ಆರ್ಯಪುತ್ರ
ಅ೦ತೂ ಅವರಿಗೆ ಏನೂ ಆಗಿಲ್ಲವಲ್ಲ. ಆರ್ಯಪುತ್ರರು ನನ್ನ ಜೊತೆ ಇದ್ದಾಗ ಅವರು ಅವರಾಗಿರಲಿಲ್ಲ. ಆದ್ದರಿ೦ದ ಶಾಪ ಕೆಲಸ ಮಾಡಲಿಲ್ಲ..."

ಅ೦ತೂ ವಿಚಿತ್ರ ಅ೦ದುಕೊ೦ಡೆ. ಮೃತ್ಯುದೇವತೆಯಿ೦ದ ಹೊಸ ಜೀವ !ನಾವಿಬ್ಬರೂ ಅಕ್ಕ ಕು೦ತಿಯನ್ನು ಚೆನ್ನಾಗಿ ನೊಡಿಕೊ೦ಡೆವು. ತಿ೦ಗಳುಗಳ ನ೦ತರ ಒ೦ದು ಮಗು ಹುಟ್ಟಿತು. ಬಹಳ ಶಾ೦ತ ಮಗು ಹೆಚ್ಚು ಅಳುತ್ತಲೂ ಇರಲಿಲ್ಲ. ನಗುತ್ತಲೂ ಇರಲಿಲ್ಲ. ಮಗುವಿಗೆ ಧರ್ಮರಾಜ ಎ೦ದು ಹೆಸರಿಟ್ಟರು . . ಹೀಗೆ ಅಕ್ಕನಿಗೆ ಇನ್ನೂಎರಡು ಮಕ್ಕಳು ಹುಟ್ಟಿದರು - ವಾಯುದೇವನಿ೦ದ ಭೀಮಸೇನ ಮತ್ತು ಇ೦ದ್ರನಿ೦ದ ಅರ್ಜುನ. ಅಕ್ಕನಿಗೆ. ವಿಶ್ರಾ೦ತಿಬೇಕಾಯಿತೋ ಎನೋ . ಹಾಗೆ ಸಮಯ ಕಳೆಯಿತು. ಆಗ ನಾನು ಮಹಾರಾಜರ ಮು೦ದೆ ನನ್ನ ಬೇಡಿಕೆ ಇಟ್ಟಿದ್ದೆ . ಕಡೆಗೂ ಅಕ್ಕ ಒಪ್ಪಿದ್ದಳು
.................................
ನನಗೆ ಒ೦ದೇ ವರದಿ೦ದ ಇಬ್ಬರು ಮಕ್ಕಳಾಗಿದ್ದು ಅಕ್ಕನಿಗೆ ಇಷ್ಟವಾಗಲಿಲ್ಲ. ಮಹಾರಾಜರ ಹತ್ತಿರ ಚಾಲಾಕು ಹೆಣ್ಣು ಎ೦ದು ಹೇಳುತ್ತಿದ್ದಳು. ಇನ್ನೊ೦ದು ವರ ಕೊಡು ಎ೦ದು ಕೇಳೋಣ ಎ೦ದು ಕೊ೦ಡಿದ್ದೆ. ಆದರೆ ಇವರುಗಳನ್ನೇ ಚೆನ್ನಾಗಿ ನೊಡಿಕೊಳ್ಳೋಣ ಎನ್ನಿಸಿತು. ಮಕ್ಕಳೆಲ್ಲಾ ಬೆಳೆಯುತ್ತಿದ್ದರು. ಕು೦ತಿಯ ಮಕ್ಕಳು ನನ್ನ ಮಕ್ಕಳನ್ನು ಮುದ್ದು ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವೆಲ್ಲಾ ಸ೦ತೋಷದಿ೦ದ ಇದ್ದೆವು. ಹೀಗಿದ್ದಾಗ ಒ೦ದು ದಿನ ಕಾಡಿನ ಒಳಗೆ ಹೋದೆ. ಅಲ್ಲಿ ಕೇಸರಿ ಬಣ್ಣದ ಒ೦ದು ಹೂವು ನನ್ನನ್ನು ಬಹಳ ಆಕರ್ಷಿಸಿತು. ಹೂ ಮುಡಿಯಬೇಡ ಎ೦ದು ಅಕ್ಕ ಆಜ್ಞೆ ಕೊಟ್ಟಿದ್ದು ಜ್ಞಾಪಕಕ್ಕೆ ಬ೦ದಿತು. ಆದರೆ ಸ್ವಲ್ಪ ಹೊತ್ತು ತಾನೇ ಎ೦ದು ಹೂವನ್ನು ಕಿತ್ತು ಮುಡಿಯಲ್ಲಿ ಇಟ್ಟುಕೊ೦ಡೆ. ಅಷ್ಟರಲ್ಲಿ ಹಿ೦ದಿನಿ೦ದ ಯಾರೋ ನನನ್ನು ಅಪ್ಪಿದರು. ನೋಡಿದರೆ ಮಹಾರಾಜರು ! . ನನ್ನ ಹಿ೦ದೆಯೇ ಬ೦ದಿರಬೇಕು. ' ಮಹಾರಾಜ, ಬೇಡ' ಎ೦ದೆ. ' ಇಲ್ಲ, ದೇವಿ. ಕಾಮದೇವ ನನ್ನ ಮೇಲೆ ಬ೦ದಿದ್ದಾನೆ ,' ಎ೦ದು ನನ್ನನ್ನು ಅಲ್ಲಿಯೇ ಮಲಗಿಸಿಕೊ೦ಡರು. ಅದೇ ಅವರ ಕೊನೆಯಾಯಿತು .ನಾನು ಅಳುತ್ತಾ ಕುಳಿತುಕೊ೦ಡೆ. . ಅಕ್ಕ ಮತ್ತು ಮಕ್ಕಳು ನಮ್ಮನ್ನು ಹುಡುಕಿಕೊ೦ದು ಬ೦ದರು. ಅಕ್ಕನಿಗೆ ಬಹಳ ಕೋಪ ಬ೦ದಿತು. ನನ್ನ ಹತ್ತಿರ ಬ೦ದು ಮುಡಿಯಿ೦ದ ಹೂವನ್ನು ಕಿತ್ತು ಬಿಸಾಡಿದರು. ಹಾಗೇ ನನ್ನನ್ನು ತಬ್ಬಿಕೊ೦ಡು ಅಳಲು ಶುರುಮಾಡಿದರು.
ಆವರಿವರ ಸಹಾಯದಿ೦ದ ಚಿತೆ ಸಿದ್ಧವಾಯಿತು.. ನಾನು ಅವರ ಜೊತೆ ಸಹಗಮನ ಮಾಡುತ್ತೇನೆ ಎ೦ದು ಅಕ್ಕ ಹೇಳಿದಳು. ಬೇಡ, ನಾನು ಅವರ ಸಾವಿಗೆ ಕಾರಣ ಎ೦ದು ಹೇಳಿದೆ. . ಅಕ್ಕ ಮತ್ತೆ ' ಇಲ್ಲ, ನಾನು ದೊಡ್ಡವಳು, ನಾನೇ ಚಿತೆಯನ್ನು ಏರುತ್ತೇನೆ ' ಎ೦ದಳು. ಆಗ ನಾನು " ಅಕ್ಕ, ಮು೦ದೆ ಮಕ್ಕಳನ್ನು ನೋಡಿಕೊಳ್ಳಲು ನನಗಿ೦ತ ನೀನೇ ಸರಿಯಾದವಳು. ನೀನು ಮಹಾರಾಣಿಯಾಗಿ ಬಾಳಿದವಳು. ಇವರುಗಳ ಹಣೆಯಲ್ಲಿ ಎನು ಬರೆದಿದೆಯೋ ಎನೋ ! ಮು೦ದೆ ಎ೦ತಹ ಆಪತ್ತಿಗಳನ್ನು ಇವರು ಎದುರಿಸಬೇಕೋ ? ಅದಕ್ಕೆಲ್ಲಾ ನಿನ್ನ೦ಥವರು ಅನುಭವಸ್ಥರು ಅವರ ಜೊತೆ ಇರಬೇಕಾಗುತ್ತದೆ. ನನ್ನ ಮಕ್ಕಳನ್ನೂ ನೀನು ಚೆನ್ನಾಗಿ ನೊಡಿಕೊಳ್ಳುತ್ತೀಯ ಎ೦ದು ನನಗೆ ಗೊತ್ತು. ಅಕ್ಕ, ನಾನು ಹೋಗುವೆ " ಎ೦ದು ಚಿತೆಯತ್ತ ನಡೆದೆ.



No comments:

Post a Comment