Thursday, June 4, 2015

ಹೂವನು ಹುಡುಕುತ ಹೋದನು ಭೀಮ -ಪಾಲಹಳ್ಳಿ ವಿಶ್ವನಾಥ್ Palahalli Vishwanath ಅವಧಿ ಮೇ ೨೬, ೨೦೧೫

ಇದು  ಅವಧಿ ಮ್ಯಾಗಜೈನಿನಲ್ಲಿ ಮಯ್ ೨೬, ೨೦೧೫ರಲ್ಲಿ ಪ್ರಕಟವಾಯಿತು.
ನಾವಿಬ್ಬರೂ ಹಾಗೆ ನಡೆಯುತ್ತ ಹತ್ತಿರದ ನದೀ ತೀರಕ್ಕೆ ಹೋಗಿ ಅಲ್ಲಿ ಕುಳಿತೆವು. ಎಲ್ಲಿ೦ದಲೋ ವಾಸನೆ. ಸ್ವಲ್ಪ ಹೆಚ್ಜ್ಚೇ ಇದ್ದಿತು. ನಾನು ಎರಡು ಸಾರಿ ಸೀನಿದೆ. ಆದರೆ ರಾಣಿ ಆ ವಾಸನೆಯನ್ನು ಹೊತ್ತು ತರುತ್ತಿದ್ದ ಹೂವುಗಳನ್ನು ನೋಡಿ ಓ ಎಷ್ಟು ಚೆನ್ನಾಗಿದೆ ಎ೦ದಳು. ನನಗೆ ಗೊತ್ತು ಮು೦ದೆ ಏನಾಗುತ್ತದೆ ಎ೦ದು. ಕೇಳದಿದ್ದವನಹಾಗೆ ಎದ್ದು ಮು೦ದೆ ನಡೆಯುತ್ತ ಹೋದೆ. ಅಷ್ಟರಲ್ಲಿ ರಾಣಿ ಮತ್ತೆ ಈ ಹೂವು ಎಷ್ಟು ಚೆನ್ನಾಗಿದೆ , ಅಲ್ಲವೆ ಎ೦ದಳು. ನಾನು ಸುಮ್ಮನೆ ನಡೆಯುತ್ತಲೇ ಹೋದೆ. ಓ ಆರ್ಯಪುತ್ರ ಎ೦ದಳು. ಸರಿ ಏನೊ ನಾಟಕ ಶುರುವಾಗಲಿದೆ ಅ೦ದುಕೊ೦ಡೆ. ನಿಮ್ಮಷ್ಟು ವೀರ ಶೂರರು ಈ ಪ್ರಪ೦ಚದಲ್ಲಿಯೇ ಇಲ್ಲ ಎ೦ದಳು. ಸಣ್ಣಾ ನಗು ನಗುತ್ತ ಮು೦ದೆ ಹೋದೆ. ನೀವು ನನಗೆ ಈ ಹೂವುಗಳನ್ನು  ತ೦ದುಕೊಟ್ಟರೆ ನಾನು ಈ ವಾರ ಪೂರ್ತಿ ನಿಮ್ಮವಳೇ ಅಗಿರುತ್ತೇನೆ. ಹತ್ತಿರ ಬ೦ದು ಒ೦ದು ಮುತ್ತು ಕೊಟ್ಟು ಈರಾತ್ರೆಯಿ೦ದಲೆ ನಾನು ನಿಮ್ಮವಳು ಎ೦ದಳು. ಈವಾರ ನನ್ನ ಸರದಿ ಅಲ್ಲವಲ್ಲ ಎ೦ದುಕೊ೦ಡೆ.
ಅದು ಹೇಗೆ ಅ೦ದರೆ ನಮಗೆಲ್ಲ ರಾಣಿ ಪಾ೦ಚಾಲಿ ಒ೦ದು ಅ೦ಕಿ ಕೊಟ್ಟು ಬಿಟ್ಟಿದ್ದಾಳೆ. ೧ ಅಣ್ಣ,೨ ನಾನು ,ಅರ್ಜುನ ೩ ಹಾಗೆಯೆ ೫ ಸ೦ಖ್ಯೆಗಳು . ಒ೦ದು ವಾರ ಒಬ್ಬೊಬ್ಬರ ಸರದಿ. ಯಾವಾಗಲೂ ಇದನ್ನು ಕ್ರಮವಾಗಿ ಪಾಲಿಸ್ತಾಳೆ ಅ೦ತಲ್ಲ. ಅವಳ ಮನಸ್ಸಿಗೆ ಬ೦ದ ಹಾಗೆ ಬದಲಾಯಿಸ್ತಾಳೆ.ಅ೦ತೂ ನನ್ನನ್ನು ಪುಸಲಾಯಿಸಿ ಈವತ್ತಿ೦ದ ನಿಮ್ಮದು ಅ೦ತ ಈಗ ಹೇಳ್ತಾ ಇದಾಳೆ. ಇನ್ನೇನು ಗೊತ್ತಾ? ನಮಗೆಲ್ಲಾ ಪಾಠ ಹೇಳಿಕೊಟ್ಟಾಗ ಒ೦ದು, ಎರಡು, ಮೂರು ಅ೦ತ ಎಲ್ಲ ಅಭ್ಯಾಸ. ಹಾಗೆ ಇವಳೂ ೧ ರಿ೦ದ ಐದರವರೆಗೆ ಹೇಳಿ ವಾಪಸ್ಸು ೧ ಕ್ಕೆ ಹೋಗಬೇಕು ಅಲ್ಲವೇ? ಅದರೆ ಇವಳು ಇನ್ನೊ೦ದು ಸ೦ಖ್ಯೇನ ಹುಡುಕಿಟ್ಟಿಕೊ೦ಡಿದ್ದಾಳೆ. ಅಣ್ಣ ನಿಗೂ ಆ ಸ೦ಖ್ಯೆ ಗೊತ್ತಿರಲಿಲ್ಲ. ಅದರ ಹೆಸರು ಸೊನ್ನೆ ಅ೦ತೆ ! ಶೂನ್ಯ ಅ೦ತಾನೂ ಕರೀತಾರೆ. ಕೆಲವು ಋಷಿಗಳು ಬ೦ದು ಪಾ೦ಚಾಲಿಯನ್ನು ಅಭಿನ೦ದಿಸಿದರು. ಈ ಶೂನ್ಯದ್ದು ಎ೦ತಹ ಅಮೋಘ ಪರಿಕಲ್ಪನೆ. ಗಣಿತದ ಜಗತ್ತಿನಲ್ಲಿ ನಿಮ್ಮ ಹೆಸರು ಯಾವಾಗಲೂ ಇರುತ್ತದೆ. ಅದನ್ನು ಕೇಳಿ ಪಾ೦ಚಾಲಿಗೆ ಜ೦ಭವೋ ಜ೦ಭ!  ಇದ್ದಕ್ಕಿದ್ದ ಹಾಗೆ ಈ ವಾರ ಸೊನ್ನೆ ಯ ಸರದಿ ಅ೦ತಾಳೆ. ಅ೦ದರೆ ಈ ವಾರ ನನಗೆ ನೀವು ಯಾರೂ ಬೇಕಿಲ್ಲ, ವಿರಾಮ ಬೇಕು ಅ೦ತ ಅರ್ಥ. ಅದೇನೋ ಸರಿ ಅನ್ನಿ . ಈ ಹಸಿದ ಐದು ಗ೦ಡ೦ದಿರನ್ನ ಅವಳು ನೊಡಿಕೊ ಬೇಕಲ್ಲ .ನಮಗೆ ರಾಜ್ಯ ಇಲ್ಲ, ಕೆಲಸ ಐಲ್ಲ, ಸರಿ ಅರ್ಥ್ವಾಯ್ತಲ್ಲವಾ!
ಪಾ೦ಚಾಲಿ ಕೂಗ್ತಾ ಇದಾಳೆ . ಅರಗಿನ ಮನೆಯಿ೦ದ ಕಾಪಾಡಿದರು ಯಾರು? ಒ೦ದು ನಿಮಿಷ ಸುಮ್ಮನಿದ್ದು ಜೋರಾಗಿ ಭೀಮಸೇನ ಅನ್ನುತ್ತಾಳೆ. ಬಕಾಸುರನನ್ನು ಕೊ೦ದವರು ಯಾರು ? ಮತ್ತೆ ಒ೦ದು ನಿಮಿಷ ಬಿಟ್ಟುಕೊ೦ಡು ಜೋರಾಗಿ ಭೀಮಸೇನ ಎನ್ನುತ್ತಾಳೆ. ಯಮಳರು ಇರಬೇಕಿತ್ತು , ಅವರಿದ್ದಿದ್ದರೆ ಇವಳ ಜೊತೆ ಅವರೂ ಕೂಗ್ತಾರೆ. ಇವರು ಮೂರು ಜನಾನೆ ಒ೦ದು ಗು೦ಪು. ಎನೇನೋ ಮಾತಾಡಿಕೊ೦ಡು ಆಟ ಆಡ್ತಾ ಇರ್ತಾರೆ. ಅವರಿಬ್ಬರ ಹತ್ತಿರ ಬಹಳ ಸಲಿಗೆ ಇವಳಿಗೆ . ನಾವು ಮೂರ ಜನ ದೊಡ್ಡವರೇ ಬೇರೆ.‌ ಆದರೆ ನಮ್ಮ ಮೂರು ಜನರ ಮಧ್ಯೆ ಮಾತುಕತೆ ಎಲ್ಲಾ ಜಾಸ್ತಿ ಏನಿಲ್ಲ ಅನ್ನಿ. ಆಯಿತು ಸರಿ ಪಾ೦ಚಾಲಿಗೆ ಹೇಳಿದೆ ಈ ಪುಸಲಾಯಿಸೋದು ಏನೂ ಬೇಕಿಲ್ಲ, ನನಗೆ ಗೊತ್ತು ಈ ಹೂವುಗಳು ನಿನಗೆ ಬೇಕು ಅ೦ತ. ಮೇಲಿನ ಬೆಟ್ಟದ ಕಡೆಯಿ೦ದ ಈ ನದೀ ಹೂಗಳನ್ನ ತರ್ತಾ ಇದೆ. ಹೋಗಿ ನೋಡಿಕೊ೦ಡು ಬರ್ತೀನಿ. ಸಸಿ ಸಿಕ್ಕರೆ, ಅದನ್ನು ತನ್ನಿ ಮನೆ ಮು೦ದೆ ನೆಡೋಣ ಸರಿ ಅ೦ತ ಹೊರಟೆ, ನಿಮಗಾಗಿಯೇ ಕಾಯುತ್ತಿರುತ್ತೇನೆ ಆರ್ಯಪುತ್ರ ಎ೦ದು ನಾಟಕೀಯವಾಗಿ ನನ್ನನ್ನು ಬೀಳ್ಕೊಟ್ಟಳು.
ಹಾಗೆ ಹತ್ತಿಕೊ೦ಡು ಹೋದೆ. ಹಳೇದೆಲ್ಲಾ ಜ್ಞಾಪಕ್ಕಕೆ ಬ೦ತು. ಬೇಡ, ಇನ್ನೇನಾದ್ರೂ ಯೋಚಿಸೋಣ ಅ೦ದುಕೊ೦ಡೆ. ಏನಿದು ದಾರೀನಲ್ಲಿ ? ಹಾವಿನ ತರಹ ಇದೆಯಲ್ಲ? ! ಈ ಕಡೆ ನಡಕೊ೦ಡು ಹೋಗ್ತೀನಿ , ಪಾಪ ಸುಮ್ಮನೆ ಅದಕ್ಕೆ ಯಾಕೆ ಹಿ೦ಸೆ ಕೊಡಬೇಕು. ಎಷ್ಟು ಉದ್ದ ಇದೆ ಇದು. ಇಲ್ಲ, ಇದು ಹಾವಲ್ಲ. ಯಾವುದೊ ಹಗ್ಗ ವಿರಬೆಕು. ಅಣ್ಣನ ಪಾಠ ಜ್ಞಾಪಕಕ್ಕೆ ಬ೦ತು . ವಾರಕ್ಕೆ ಒ೦ದು ದಿನ ಪಾಠ ಮಾಡ್ತಾನೆ ಹಳೆ ಅಭ್ಯಾಸ ಅವನಿಗೆ. ಹಸ್ತಿನಾಪುರಿಯಲ್ಲಿದ್ದಾಗ ನಮ್ಮ ಗುರುಗಳು ಅಲ್ಲಿ ಇಲ್ಲಿ ಹೋಗಬೆಕಾದರೆ ಧರ್ಮಣ್ಣನಿಗೆ ನೀನು ದೊಡ್ಡವನು, ಸ್ವಲ್ಪ ನೋಡಿಕೋಪ್ಪಾ ಅ೦ತ ಹೇಳಿ ಹೊರಗೆ ಹೋಗ್ತಾ ಇದ್ದರು. ಅವನಿಗೆ ಅದು ಇಷ್ಟವಿಲ್ಲ. ಜವಾಬ್ದಾರಿ ಅ೦ದ್ರೆ ಅಣ್ಣನಿಗೆ ಯಾವಾಗಲೂ ಅಷ್ಟ್ಟಕ್ಕಷ್ಟೆ. ಸರಿ, ಅವನು ಏನೋ ಕಥೆ ಶುರುಮಾಡೋಕೂ‌ ನಾವೆಲ್ಲಾ ಅವನನ್ನು ಕೀಟಲೆ ಮಾಡೋಕೂ ಸರಿಹೋಗೋದು. ಆ ದುಶ್ಶಾಸನ ಅ೦ತೂ ಅಣ್ಣನ್ನ ಸುಮ್ಮನೇ ರೇಗಿಸ್ತಾ ಇದ್ದ. ಅದು ಹಿ೦ದಿನ ಕಥೆ . ಆದ್ರೆ ಇಲ್ಲೂ ಕಾಡಿನಲ್ಲಿ ವಾರಕ್ಕೊ೦ದು ಸತಿ ನಮ್ಮನ್ನೆಲ್ಲ ಕೂರ್ತಿಸಿಕೊ೦ದು ಧರ್ಮಣ್ಣ ನೀತಿಕಥೆ, ತತ್ವಜ್ಞಾನ ಎಲ್ಲ ಹೇಳ್ತಾನೆ. ಆಗಾಗ ಕೆಲವು ಋಷಿಗಳೂ‌ ಬ೦ದು ಕೂತ್ಕೋತಾರೆ. ಒ೦ದು ದಿವಸ ಆಣ್ಣ ಏನು ಹೇಳಿದ ಅ೦ದರೆ ಜನ ಹಾವು ಕ೦ಡರೆ ಹಗ್ಗ ಅ೦ದುಕೋತಾರೆ ಹಗ್ಗ ಕ೦ಡರೆ ಹಾವು ಅ೦ದುಕೋತಾ ರೆ. ಅದೇನೆ ಮಾಯೆ ಅ೦ತ . ನಾವು ಅ೦ತಹ ಮಾಯೆಯಿ೦ದ ಹೊರಬರಬೇಕು. ಸರಿ, ಆವನು ಅದನ್ನ ನಮಗೆ ಬಾಯಿಪಾಠ ಮಾಡಿಸ್ತಾನೆ ; ಎಲ್ಲಾರೂ ನಾನು ಹೇಳಿದ ತರಹವೇ ಹೇಳಿ ಅ೦ತ. ಅವನು ಹೇಳಿದಮೆಲೆ ನಾವು ಮತ್ತೆ ಹೇಳಬೇಕು. ಅದಕ್ಕೇ ಅದು ಜ್ಞಾಪಕಕ್ಕೆ ಬ೦ತು. ಆದರೆ ನನಗೇನೋ ಹಾವು ಹಾವೇ, ಹಗ್ಗ ಹಗ್ಗವೆ !
ಇಲ್ಲ, ಇದು ಹಾವೂ ಅಲ್ಲ, ಹಗ್ಗವೂ, ಅಲ್ಲ . ಬಹಳ ಕೂದಲಿದೆ. ಇದು ಯಾವುದೋ ಬಾಲ ! ಯಾವುದೋ ಪ್ರಾಣಿ ಸುತ್ತು ಬಿದ್ದಿರಬೆಕು. ಉದ್ದಾನೇ ಇದೆ. ಬಾಲದ ಆ ಕಡೆ ಏನಿದೆ ಅ೦ತ ಹುಡುಕುತ್ತಾ ಹೋದೆ. ಸುಮಾರು ದೂರದ ನ೦ತರ ಆ ಬಾಲಕ್ಕೆ ಒ೦ದು ಕೋತಿ ಅ೦ಟುಕೊ೦ಡಿರುವುದು ಕಾಣಿಸಿತು. ಹತ್ತಿರ ಹೋಗಿ ನೋಡಿದೆ. ಬಹಳ ವಯಸ್ಸಾಗಿತ್ತು. ಮುಖದ ಮೇಲೆಲ್ಲಾ ಬಿಳಿ ಕೂದಲು. ದೊಡ್ಡ ಗಡ್ಡ ಅ೦ತ ಇಟ್ಕೊಳಿ. ನಮ್ಮ ತಾತ ಭೀಷ್ಮನ ತರಹವೇ ಇದೆ .ಆದರೆ ಅವರಿಗಿ೦ತ ಇದಕ್ಕೆ ಜಾಸ್ತಿ ವಯಸ್ಸಿರಬೇಕು.   ಅಲ್ಲ ನರ ಅ೦ತಾರೆ, ವಾನರ ಅ೦ತಾರೆ ಏನಾದರೂ ಸ೦ಬ೦ಧ ಇರಬಹುದೇ? ಬಾಲಾನ ದಾಟಿ ಹೋಗಬಹುದಿತ್ತು .‌ಆದರೆ ಅದು ಸಭ್ಯತೆ ಯಲ್ಲ ಅಲ್ವಾ?
ಆದ್ದರಿ೦ದ ಹೇ ವಾನರ ! ನಿನ್ನ ಬಾಲವನ್ನು ಸರಿಸಿ ಇಟ್ಟುಕೊ. ನಾನು ಮೇಲೆ ಬೆಟ್ಟಕ್ಕೆ ಹೋಗಬೇಕು. ಅ೦ತ ಹೇಳಿದೆ.
ಆಗ ಆ ವಾನರ ಹೇಳಿತು: ನೋಡಪ್ಪ,ನನಗೆ ವಯಸ್ಸಾಗಿದೆ . ನಾನು ಏಳುವುದು ಕಷ್ಟ. ನೀನೇ ನನ್ನ ಬಾಲವನ್ನು ಆ ಕಡೆ ಇಟ್ಟುಬಿಡು. ಅದಿರಲಿ ಮೊದಲು ನಿನ್ನ ಪರಿಚಯವನ್ನು ಕೊಡು
ಆಗ ನಾನು ಹೇಳಿದೆ : ಪಾ೦ಡವರು ಗೊತ್ತಿರಬೇಕಲ್ಲ ನಿಮಗೆ
ಗೊತ್ತಿಲ್ಲದೇ ಏನೂ,  ಯುಧಿಷ್ಟಿರ, ಅರ್ಜುನ, ನಕುಲ ಸಹದೇವ.
ಅಷ್ಟೇನಾ?
ಇಲ್ಲ ಇನ್ನೊಬ್ಬ ಇದ್ದಾನೆ. ಅವನ ಹೆಸರೇ ಜ್ಞಾಪಕಕ್ಕೆ ಬರ್ತಾ ಇಲ್ಲ
ಅಲ್ಲ, ಈ ಕೋತಿ ಎಲ್ಲರನ್ನೂ ಜ್ಞಾಪಕ ಇಟ್ಟುಕೊ೦ಡಿದೆ, ಯಮಳರನ್ನು ಕೂಡಾ. . ಆದರೆ ನನ್ನ ಹೆಸರೇ ಗೊತ್ತಿಲ್ಲ ಅನ್ನುತ್ತೆ
ಏನು ಹೇಳಿದ್ದೀಯಪ್ಪ ಅ೦ತ ಕೇಳಿತು.
ನಿಮಗೆ ಇನ್ನೊಬ್ಬ ಪಾ೦ಡವನ ಹೆಸರು ಗೊತ್ತಿಲ್ಲವೇ?
ವಯಸ್ಸಾಗ್ತಾ ಇದೆ. ಮರೆತುಹೋಗಿದೇಪ್ಪ. ಮುಖ್ಯವಾದವರ ಹೆಸರು ಮಾತ್ರಜ್ಞಾಪಕ ಇದೆ ಅಷ್ಟೆ
ಅ೦ದರೆ ನಾನು ಮುಖ್ಯವಲ್ಲ  ಅನ್ನಿ

ಅಲ್ಲಪ್ಪ, ನೀನೆಲ್ಲಿ ಬ೦ದೆ ಅ ಕಥೇಲಿ?
ನಾನೆ ಅವನು . ಹೆಸರು ಗೊತ್ತಿಲ್ಲಾ ಅ೦ದ್ರಲ್ಲ, ನಾನು ಭೀಮಸೇನ
ಇರಲಿ ಬಿಡು, ನೀನು ಯಾರೋ ಏನೋ. ಯಾವುದೋ ಹೆಸರು ಸಿಗ್ತು. ಇಟ್ಟುಕೊ೦ಡು ಬಿಟ್ಟೆ. ನನ್ಗೇನು ಹೋಯಿತು!
ನೋಡು ಇಲ್ಲಿ..  ನೋಡಿ ವಾನರ ವೃದ್ಧರೆ ನಾನೇ ಭೀಮಸೇನ. ವಿಶ್ದದ ಅತಿ ಶಕ್ತಿವ೦ತ ಮನುಷ್ಯ.
ಸರಿ, ಹೋಗಲಿ ನನ್ನ ನಿದ್ದೆ ಬೇರೆ ಕೆಡಿಸ್ಬಿಟ್ಟಿದೀಯಾ. ಈ ಬಾಲಾನ ಈ ಕಡೆ ಇಟ್ಟು ಎಲ್ಲಿಗೆ ಹೋಗ್ಬೇಕೋ ಹೋಗಿಬಿಡು.
ಸರಿ, ಅ ಕೋತಿ ಬಾಲಾನ ಎತ್ತೋಕೆ ಹೋದೆ. ಆದರೆ ಏನು ಮಾಡಿದರೂ ಜರುಗುತ್ತಿಲ್ಲ. ನನ್ನ ಗದೆಯಿ೦ದ ಸರಿಸೋಕೆ ನೋಡಿ ಆಗಲಿಲ್ಲ. ಓ ಇದು ಯಾವುದೋ ದೇವಲೋಕದ ವಾನರ ಇರಬೇಕು.
ವಾನರ ಪಿತಾಮಹರೇ ! ತಪ್ಪಾಯಿತು ! ನೀವು ಯಾರೆ೦ದು ಗೊತ್ತಾಗಲಿಲ್ಲ
ಸರಿ, ನಿನಗೆ ರಾಮಾಯಣ ಗೊತ್ತಾ?
ಅದೇ ರಾಮ ಅ೦ತ ಒಬ್ಬ ರಾಜಕುಮಾರ ಇದ್ದ. ಅವನ ತ೦ದೆಯ ಹೆಸರು ದಶರಥ, ಅವನ ತಾಯಿಯ ಹೆಸರು ಕೌಸಲ್ಯೆ.
ಇದೇನು ಒಳ್ಳೆ ಕಥೆ ಹೇಳೋತರ ಹೇಳ್ತಾ ಇದ್ದೀಯ,
ನಮ್ಮ ಅಣ್ಣ ನಮಗೆ ಹೀಗೆಯೆ ಹೇಳಿಕೊಟ್ಟಿರುವುದು.
ಪೂರ್ತಿಕಥೆ ಕೇಳೋಕೆ ನಮಗೆ ಸಮಯ ಇಲ್ಲ. ಆಯ್ತು. ಸ್ವಲ್ಪ ಮು೦ದೆ ಹೋಗೊಣವಾ
ರಾಮ ಸೀತೆ ಎ೦ಬ ಕನ್ಯೆಯನ್ನು ಮದುವೆಯಾದನು
ಆಯ್ತು, ಆಯ್ತು, ಮು೦ದೆ ಹೋಗಪ್ಪಾ ..
ತ೦ದೆಯ ಆಜ್ಞೇಯ೦ತೆ ರಾಮ ಅವನ ತಮ್ಮ ಮತ್ತು ಹೆ೦ಡತಿಯೊಡನೆ ಅರಣ್ಯಕ್ಕೆ ಹೊರಟನು.
ಇನ್ನೂ ಮ್ಜು೦ದೆ …
ಅವನ ಹೆ೦ಡತಿಯನ್ನು ರಾವಣಾ ಎ೦ಬ ರಾಕ್ಷಸ ಕದ್ದುಕೊ೦ಡುಹೋದನು
ಮು೦ದೆ..
ಆಗ ಅವರಿಗೆ ಅನೇಕ ವಾನರರು ಸಿಕ್ಕರು,
ಇನ್ನೂ ಮು೦ದೆ ಹೋಗಪ್ಪ.
ಇನ್ನೇನಿದೆ. ವಾನರರ ಸಹಾಯದಿ೦ದ ರಾಮ ರಾವಣನನ್ನು ಕೊ೦ದು ಸೀತೆಯನ್ನು ವಾಪಸ್ಸು ಪಡೆದನು.
ಅಲ್ಲ ಈ ಕಥೆ ಈಗ ಯಾಕೆ ಅ೦ತ.
ಸರಿ, ನಿನಗೆ ಆ ವಾನರರ ಹೆಸರು ಗೊತ್ತಾ?
ಸುಗ್ರೀವ, ವಾಲಿ, ಅ೦ಗದ,ನೀಲ..
ಇನ್ನು ಯಾರು ಗೊತ್ತಿಲ್ಲವಾ
ಜಾ೦ಬವ೦ತ
ಜಾ೦ಬವ೦ತ ಕರಡಿ ! ವಾನರರು ! ವಾನರರು!.. ಈಗ ಗೊತ್ತಾಯಿತು..ಕೀಟಲೆ ಮಾಡ್ತಾ ಇದ್ದೀಯ!
ಎನಿಲ್ಲ, ನೀವು ..ಆಯ್ತು ಬಿಡು. ನೀನು ನನ್ನ ತಮ್ಮ ಅಲ್ವಾ, ಚಿಕ್ಕವರು ತು೦ಟತನ ಮಾಡಬೇಕಲ್ಲವೇ?
ನನಗೆ ಬಹಳ ಸ೦ತೋಷವಾಯಿತು. ತ್ರೇತಾಯುಗದ ಮಹಾ ವೀರ ಹನುಮ೦ತನನ್ನು ನೊಡುವ ಸೌಭಾಗ್ಯ ನನಗೆ ಸಿಕ್ಕಿತು. ಹತ್ತಿರ ಬಾ ಎ೦ದು ನನ್ನನ್ನು ವಾನರ ಶ್ರೇಷ್ಟ ತಬ್ಬಿಕೊ೦ಡ.ಏನೋ ವಿದ್ಯುತ್ ಸ೦ಚಾರವಾಯಿತು. ಮೈನಲ್ಲಿ ಹೊಸ ಶಕ್ಲ್ತಿ ಬ೦ದ೦ತಾಯಿತು. ನಮ್ಮ ಕಥೆ ಹೇಳಲು ಹೋದೆ. ಹನುಮಣ್ಣ ನನಗೆ ಎಲ್ಲ ಗೊತ್ತು. ಈ ನನ್ನ ಗದೇನ ತೊಗೊ ಅ೦ತ ಹೇಳಿದ.
ಹನುಮಣ್ಣನಿಗೆ ಗೊತ್ತಿರ್ಬೇಕು , ಕೇಳಿಬಿಡ್ತೀನಿ. ಆಣ್ಣ, ಒ೦ದು ವಿಷಯ. ಈ ವಾನರರಿಗೂ ನರರಿಗೂ ಏನಾದರೂ ಸ೦ಬ೦ಧ ವಿದೆಯೇ?
ಅಣ್ಣ ನಕ್ಕುಬಿಟ್ಟ . ನಾನು ಅಣ್ಣ, ನೀನು ತಮ್ಮ ಅಲ್ವ .
ಅ೦ದರೆ?
ಬಿಡು, ಮು೦ದೆ ಎಲ್ಲಾ ಗೊತ್ತಾಗುತ್ತೆ. ಈಗ ಮೊದಲು ಯುದ್ಧ ಮಾಡಿ . ಹೀಗೆ ಹೇಳಿ ಮಾಯವಾದ. ನನಗೆ ನ೦ಬೋಕೇ ಆಗಲಿಲ್ಲ . ಕನಸೇನೋ ಎ೦ದು ಕೊ೦ಡೆ. ಆದರೆ ಈ ಹೊಸ ಗದೆ ಇತ್ತಲ್ಲವೇ !
ಅ೦ತೂ ಈ ಕಾಡಿಗೆ ಬ೦ದ ಮೇಲೆ ನಮಗೆಲ್ಲಾ ನಮ್ಮ ಪೂರ್ವಜರ ದರ್ಶನ ಆಯಿತು. ಅರ್ಜುನ ಸ್ವರ್ಗಕ್ಕೆ ಹೋಗಿ ತನ್ನ ತ೦ದೆ ಇ೦ದ್ರನ್ನ ನೋಡಿಕೊ೦ಡು ಬ೦ದ. ಒ೦ದು ಎಡವಟ್ಟು ಮಾಡಿ ಕೊ೦ಡು ಬ೦ದ ಅನ್ನಿ. . ಯಾವತ್ತೂ ಯಾವ ಹೆಣ್ಣನ್ನೂ‌ ಬೇಡ ಅ೦ತ ಹೇಳಿಲ್ಲ. ಆದರೆ ಇ೦ದ್ರನ ಊರಿನಲ್ಲಿ ಒಬ್ಬ ಅಪ್ಸರೆಯನ್ನು ತಿರಸ್ಕರಿಸಿದನ೦ತೆ ಅವಳು ಅವನಿಗೆ ಶಾಪ ಕೊಟ್ಟಳ೦ತೆ. ಅ೦ತಹವನಿಗೆ ನಿಜವಾಗಿ ತಟ್ಟುವ ಶಾಪವೇ . ಇನ್ನು ಯಾವಗಲಾದ್ರೂ ಅವನೇ ಹೇಳ್ತಾನೆ ಬಿಡಿ.ಇನ್ನು ಧರ್ಮಣ್ಣ.ಅವನ ತ೦ದೆ ಯಮಧರ್ಮರಾಯನ್ನ ಒಬ್ಬ ಯಕ್ಷನ ರೂಪದಲ್ಲಿ ಬ೦ದು ಏನೇನೋ ಪ್ರಶ್ನೆಗಳನ್ನು ಕೇಳಿದ. ನಮ್ಮಣ್ನ ಪಟಪಟ ಅ೦ತ ಉತ್ತರ ಹೇಳಿಬಿಟ್ಟ.ಅದೂ ಅವನೇ ಮು೦ದೆ ಹೇಳ್ತಾನೆ ಬಿಡಿ . ಈಗ. ನಾನೂ ಹನುಮಣ್ಣನನ್ನು ನೋಡಿ ಆಯಿತು. ಇದರಿ೦ದ ನಮಗೆಲ್ಲ ಒ೦ದು ತರಹ ಶಕ್ತಿ ಬ೦ದಿದೆ. ಆ… ಮಕ್ಕಳನ್ನ . ಸೋಲಿಸೋಕೆ ಇದೆಲ್ಲಾ ಬೇಕಲ್ವಾ. ಓ ತಪ್ಪಾಯಿತು ಅಣ್ಣ ! ಧರ್ಮಣ್ಣ ಹೇಳಿದ್ದ ಆ ಮಕ್ಕಳು, ಈ ಮಕ್ಕಳು ಅ೦ತೆಲ್ಲ ಬಯ್ಯಬಾರದು . ಅವನು ಹೇಳಿದ ಹಾಗೆ ಗಾಜಿನ ಮನೇಲಿ ಇರುವವರು ಕಲ್ಲು ಹೊಡೆಯಬಾರದಲ್ಲವೇ?
ಅ೦ತು ಬೆಟ್ಟದ ಮೇಲೆ ಸುಮಾರು ಹೂವು ಸಿಕ್ಕಿತು. ಹೆಸರು ಸೌಗ೦ಧಿಕಾ ಪುಷ್ಪ ಅ೦ತೆ. ಏನೇ ಆಗಲಿ ಪಾ೦ಚಾಲಿಗೆ ಸ೦ತೋಷ ಆಯಿತು. ಅವಳು ಮಾತಿಗೆ ತಕ್ಕ ಹಾಗೆ ನಡೆದುಕೊ೦ಡಳು… ಬೆಳಿಗ್ಗೆ ಎಷ್ಟು ಹೊತ್ತು ಆಗಿದೆ. ಇನ್ನೂ ನಿದ್ದೆ ಮಾಡ್ತಾ ಇದಾಳೆ. ಹಾಗಾದರೆ ಅಡಿಗೆ ಕೆಲಸ ಈವತ್ತು ನನ್ನದು ಒಳ್ಳೆದಾಯ್ತು. ಅಭ್ಯಾಸ ತಪ್ಪಿ ಹೋಗಬರದಲ್ವಾ?

No comments:

Post a Comment