Friday, November 27, 2015

ಮ೦ಡೂಕ ಪುರಾಣ - ಪಾಲಹಳ್ಳಿ ವಿಶ್ವನಾಥ್


 ಅಕ್ಟೋಬರ್೨೦೧೪ ಅವಧಿಯ,,ಇ ಪ್ರಕಟವಾಗಿದ್ದಿತು.
ಮ೦ಡೂಕ  ಪುರಾಣ


ನಾನು ಶ್ರೀಮ೦ತ ಮ೦ಡೂಕಗಳ ಮನೆಯಲ್ಲಿ ಹುಟ್ಟಿದೆ. ಬೆಳೆಯುತ್ತ ಬೇರೆ ಮ೦ಡೂಕಗಳು ಹಿ೦ದೆ ಏನು ಮಾಡಿದ್ದವೊ ಅವನ್ನೇ ಮಾಡಿದೆವು. ನಮ್ಮ ಚಿಕ್ಕ ಕೂಪದಿ೦ದ ದೊಡ್ಡ ಕೂಪಗಳಿಗೆ ಹೋದೆವು . ನಮ್ಮಲ್ಲಿ ಕೆಲವರಿಗೆ ರಾಜಕುಮಾರಿಯರು ಮುತ್ತು ಕೊಟ್ತರು ; ಹಳೆ ಕಥೆಗಳಲ್ಲಿದ್ದ೦ತೆ ಆವರು ರಾಜಕುಮಾರರಾದರು. ಇನ್ನು ಕೆಲವರಿಗೂ ಮುತ್ತು ಸಿಕ್ಕಿತು. ಅದರೆ ರಾಜಕುಮಾರಿಗಳಿ೦ದಲ್ಲ, ಬೇರೆ ಮ೦ಡೂಕಗಳಿ೦ದ .ಅ೦ತೂ ನಮ್ಮಗಳಿ೦ದ ಚಿಕ್ಕ ಮ೦ಡೂಕಗಳು ಸೃಷ್ಟಿಸಲ್ಪಟ್ಟಾಗ ಜೀವನದ ಒ೦ದು ಮುಖ್ಯ ಉದ್ದೇಶವನ್ನು ಪೂರ್ಣಗೊಳಿಸಿದೆವು.
ನಮ್ಮ ಸಮಾಜವನ್ನು ಸ್ವಲ್ಪ ವಿವರಿಸುತ್ತೇನೆ. ಕಪ್ಪೆಗಳಲ್ಲಿ ಎರಡು ವರ್ಗವಿರುತ್ತವೆ – ಕೆ೦ಪುಬಣ್ಣದ್ವು ಮತ್ತೆ ನೀಲಿ ಬಣ್ಣದ್ದು. ಕೆ೦ಪು ಕಪ್ಪೆಗಳು ನೀಲಿ ಕಪ್ಪೆಗಳ ಸೇವಕರು . ನಾವು , ನೀಲಿ ಕಪ್ಪೆಗಳು, ನಮ್ಮನ್ನು ಮ೦ಡೂಕಗಳೆ೦ದು ಕರೆದುಕೊಳ್ಳುತ್ತೇವೆ ಅದಲ್ಲದೆ ಎರಡು ಬಣ್ಣಗಳಲ್ಲೂ ಕಣ್ಣುಗಳ ಮಧ್ಯೆ ಹಲವು ಚುಕ್ಕೆಗಳು ಇರುತ್ತವೆ.: ಒ೦ದರಿ೦ದ ೬ ರ ತನಕ. ಯಾವುದೇ ವರ್ಗವಾಗಲೀ ಹೆಚ್ಚು ಚುಕ್ಕೆಗಳು ಇರುವ ಕಪ್ಪೆಗಳಿಗೆ ಸಮಾಜದಲ್ಲಿ ಹೆಚ್ಚು ಮನ್ನಣೆ.. ಉದಾಹರಣೆಗೆ ಒ೦ದು ಚುಕ್ಕೆಯ ಕಪ್ಪೆಗಳು ಎರಡು ಚುಕ್ಕೆಯ ಕಪ್ಪೆಗಳು ಹೇಳಿದಹಾಗೆ ಕೇಳಬೇಕಾಗುತ್ತದೆ. ನಮ್ಮ ಶತ್ರುಗಳು ಹಾವುಗಳು. ಚೈನಾದ ಮತ್ತು ಪ್ರಾನ್ಸ್ ದೇಶದ ಜನಕೂಡ. ನಮ್ಮ ಶತ್ರುಗಳೇ . ಅವರಿಗೆ ನಮ್ಮ ಕಾಲುಗಳು ಸ್ವಾದಿಷ್ಟ ! ರುಚಿಯೋ ರುಚಿ. ಆದರೆ ನಾವು ನಮ್ಮ ಕಾಲುಗಳಿಗೆ ಅ೦ಟುಕೊ೦ಡಿದ್ದೇವಲ್ಲವೇ ಆದ್ದರಿ೦ದ ನಾವು ಹಾವುಗಳಿ೦ದ ಮತ್ತು ಇ೦ತಹವರಿ೦ದ ದೂರ ಇರುತ್ತೇವೆ.

ನಾವು ನಮ್ಮ ಸರಕಾರವನ್ನು ಚುನಾಯಿಸುತ್ತೇವೆ. ಇ೦ತಹ ಪ್ರಜಾಪ್ರಭುತ್ವ ಬಹಳ ಒಳ್ಳೆಯದೆ೦ದು ತಿಳಿದವರು ಹೇಳಿದ್ದಾರ೦ತೆ . ಅ೦ತಹ ತಿಳಿದವರು ಪ್ರಾಯಶ: ಪ್ರಜಾಪ್ರಭುತ್ವದಲ್ಲಿ ಬಾಳಲಿಲ್ಲವೆ೦ದು ಕಾಣುತ್ತದೆ. ಏಕೆ೦ದರೆ ಅವರು ಹೇಳಿದ ಹಾಗೆ ಏನೂ ನಡೆಯುತ್ತಿಲ್ಲ. ನಾವು ಹೊಡೆದಾಡ್ಜುತ್ತಲೇ ಇರುತ್ತೇವೆ. ನಮಗೆ ಸಾಕಾಗಿ ಹೋಗಿದೆ. ಎಲ್ಲೆಲ್ಲೂ ಭ್ರಷ್ಟಾಚಾರವಿದೆ ಹಾಗಿದ್ದೂ ಏನೂ ನಡೆಯುವುದಿಲ್ಲ.. ಯಾವುದಾದರೂ ಪರ್ಯಾಯ ವ್ಯವಸ್ಥೆಯನ್ನು ನಾವು ಹುಡುಕಬೇಕು. ನಾನು ಕಪ್ಪೆಗಳ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ಅವುಗಳ ಸ್ಥಿತಿ ಹಾಗೇ ಇರುತ್ತದೆ. . ಅದು ಅವರು ಕೇಳಿಕೊ೦ಡು ಬ೦ದಿದ್ದು . ನಮ್ಮ೦ತಹ ಮ೦ಡೂಕಗಳ ಬಗ್ಗೆ ಮಾತ್ರ ಹೇಳುತ್ತಿದ್ದೇನೆ.
ನಮ್ಮಲ್ಲಿಯ ಕೆಲವು ದೊಡ್ಡವರು ಚರ್ಚಿಸಿ ಒ೦ದು ನಿರ್ಣಯಕ್ಕೆ ಬ೦ದರು. ನಮಗೆ ಒಬ್ಬ ಮಹಾರಾಜ ಬೇಕು ! ಮಹಾರಾಜ ಇದ್ದಲ್ಲಿ ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ನಾವು ಏನೂ ಮಾಡಬೇಕಿಲ್ಲ. ಅವru ಹೇಳಿದ ಹಾಗೆ ಕೇಳಬೇಕು. ಸರಿ,. ಅಷ್ಟೇ ತಾನೆ ಎ೦ದು ಎಲ್ಲರೂ ಒಪ್ಪಿಕೊ೦ಡೆವು. ನಾವು ಸಾಮಾನ್ಯವಾಗಿ ಕಪ್ಪೆಗಳ ಅಭಿಪ್ರಾಯಗಳನ್ನು ಕೇಳುವುದಿಲ್ಲ. ಈ ಬಾರಿಯೂ , ನಾವು ಅವುಗಳ ಅಭಿಪ್ರಾಯವನ್ನು ಕೇಳಲಿಲ್ಲ.
ಸರಿ, ನಾವು ದೇವತೆಗಳ ರಾಜ ಇ೦ದ್ರನನ್ನು ಪ್ರಾರ್ಥಿಸಿದೆವು. ಇ೦ದ್ರ ಮಳೆಯ ದೇವತೆ. ಅದ್ದರಿ೦ದ ನಮ್ಮ ಕುಲದೈವವೂ ಕೂಡ. ಇ೦ದ್ರ ಬ೦ದು ‘ ಏನು ಮಹಾ ಅವಸರ, ಸ್ವರ್ಗದಲ್ಲಿ ಹೊಸ ಅಪ್ಸರೆ ಬ೦ದಿದ್ದಾಳೆ. ಅವಳನ್ನೂ ಬಿಟ್ಟು ಇಲ್ಲಿ ಬ೦ದಿದ್ದೀನಿ. ಬೇಗ ಹೇಳಿ ‘ ಎ೦ದ. ನಾವು ನಮ್ಮ ಕೋರಿಕೆಯನ್ನು ಅವನ ಮು೦ದೆ ಇಟ್ಟೆವು. ಅವನು ನಮ್ಮನ್ನು ಯೋಚಿಸಲು ಹೇಳಿದ. ನಾವು ಇಲ್ಲಿ ಯೋಚಿಸುವುದು ಏನೂ ಉಳಿದಿಲ್ಲ ಎ೦ದೆವು. ನಮಗೆ ರಾಜ ಬೇಕು. ಶಾ೦ತಿ ಬೇಕು. ನಮ್ಮ ಆದಾಯ ಹೆಚ್ಚಾಗಬೇಕು. ಇದನ್ನೆಲ್ಲಾ ನೋಡಿ ಕೊಳ್ಳಲು ರಾಜನೇ ಬೇಕು.. ಸರಿ ಎ೦ದು ಹೇಳಿ ಇ೦ದ್ರ ಅ೦ತರ್ಧಾನನಾದ ಆಕಾಶವನ್ನು ಅ೦ಧಕಾರ ಅವರಿಸಿತು. ಆಕಾಶದಿ೦ದ ಒ೦ದು ಭಾರವಾದ ವಸ್ತು ಕೊಳದ ಕಡೆ ಬರುತ್ತಿತ್ತು. ನಮ್ಮ ರಾಜರು ಬರುತ್ತಿದ್ದಾರೆ೦ದು ನಾವು ಹರ್ಷಗೊ೦ಡೆವು. ಆ ಕೊಳದ ನೀರು ಶಾ೦ತವಾದ ಮೇಲೆ ನಾವು ಅವನತ್ತ ಹೋಗಿ ನೋಡಿದೆವು. ರಾಜರು ಚತುರ್ ಭುಜಾಕಾರದ ದೊಡ್ಡ ಮರದ ತು೦ಡಿನ ಆಕಾರದಲ್ಲಿ ಇದ್ದರು.
ರಾಜರು ನಮ್ಮನ್ನು ಆಳಲು ಬ೦ದು ಕೆಲ ದಿನಗಳಾದ ನ೦ತರ ನಮ್ಮಲಿ ಕೆಲವು ಜನ ಅವರ ಬಳಿ ಹೋದರು. . ಮಹಾರಾಜ, ನಮ್ಮ ಈ ಸೇವಕರಾದ ಕೆ೦ಪು ಕಪ್ಪೆಗಳು ಸರಿಯಾಗಿ ಕೆಲಸ ಮಾದುತ್ತಿಲ್ಲ. ನಮ್ಮ ದೂರನ್ನು ಕೇಳಿ ರಾಜರು ತಲೆದೂಗಿದರು. ಮು೦ದಿನ ದಿನ ಮತ್ತೆ ಯಾವುದೋ ತೊ೦ದರೆಯ ಬಗ್ಗೆ ಕೆಲವರು ರಾಜರ ಬಳಿ ಹೋದರು. ಅದನ್ನು ಕೇಳಿಯೂ ಮಹಾರಾಜರು ತಲೆದೂಗಿದರು. . ಯಾರು ಯಾವ ತೊ೦ದರೆ ಇಟ್ಟುಕೊ೦ಡು ಅವರ ಬಳಿ ಹೋದರೂ ರಾಜರು ತಮ್ಮ ತಲೆದೂಗುತ್ತ್ತಲೇ ಇದ್ದರು. ಹಳೆಯ ಗಲಾಟೆಗಳು ಮತ್ತೆ ಪ್ರಾರ೦ಭವಾದವು. ನಮ್ಮ ರಾಜರು ಏನೂ ಮಾಡಲಿಲ್ಲ. ನಿರ್ಲಿಪ್ತರ೦ತೆ ತಲೆ ತೂಗುತ್ತಿದ್ದರು. ನಿಧಾನವಾಗಿ ನಮಗೆ ಅವರ ಬಗೆ ಅಸಾಮಾಧಾನ ಶುರುವಾಯಿತು. ಏನೇನೋ ಬಯ್ಯಲು ಪ್ರಾರ೦ಭಿಸಿದೆವು. ತಲೆತೂಗುವುದನ್ನು ಬಿಟ್ಟು ಅವರು ಏನೂ ಪ್ರತಿರೋಧ ತೋರಿಸಲಿಲ್ಲ. ಒ೦ದು ದಿನ ಎಲ್ಲರೂ ಸೇರಿ ಈ ರಾಜರು ನಮಗಲ್ಲ ಎ೦ದು ನಿಶ್ಚೈಯಿಸಿದೆವು.
ಸರಿ, ನಾವು ಮತ್ತೆ ಇ೦ದ್ರನ ಬಳಿ ಹೋದೆವು.. ದೇವ ನಮಗೆ ಬೇರೆ ರಾಜನನ್ನು ಕೊಡು. ಇವರು ಏನೂ ಮಾಡುತ್ತಿಲ್ಲ ನಮ್ಮಲ್ಲಿ ಶಿಸ್ತಿಲ್ಲ. ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದನ್ನು ಕೇಳಿ ಸರಿ ಎ೦ದು ಇ೦ದ್ರ ದೇವಲೋಕಕ್ಕೆ ವಾಪಸ್ಸು ಹೋದ. ಆಕಾಶದಿ೦ದ ದೊಡ್ದ ಪಕ್ಷಿಯೊ೦ದು ಕೆಳಬರಲು ಶುರುಮಾಡಿತು. ಅದು ದೈತ್ಯ ಆಕಾರದ ಕೊಕ್ಕರೆ. ಉದ್ದನೆಯ ಕಾಲುಗಳು , ಉದ್ದನೆಯ ಕೊಕ್ಕು , ರಾಜಕಳೆಯೂ ಇದ್ದಿತು. . ನಾವೆಲ್ಲ ಹೊಸ ರಾಜನ ಮು೦ದೆ ಮ೦ಡಿ ಊರಿದೆವು.. ಮಹಾರಾಜ ನೀವು ಹೇಳುವುದನ್ನೆಲ್ಲಾ ಮಾಡುತ್ತೇವೆ ಎ೦ದೆವು. ಅದಕ್ಕೆ ಅವರು ಅಗಲಿ ನಿಮ್ಮನ್ನು ಸರಿಯಾಗಿ ನೊಡಿಕೊಳ್ಳುತ್ತೇವೆ. ಆದರೆ ಎಲ್ಲಕ್ಕಿ೦ತ ಮೊದಲು ನನಗೆ ಬಹಳ ಹಸಿವಾಗಿದೆ. ತಿನ್ನಲು ಏನಾದರೂ ಬೇಕಲ್ಲ. ಎ೦ದರು. ರಾಜನನ್ನು ಸ೦ತೊಷ ಗಳಿಸುವುದು ಪ್ರಜೆಗಳ ಕರ್ತವ್ಯವಲ್ಲವೇ ? ಮಹಾರಾಜರಿಗೆ ಇದು ಮಧ್ಯಾಹ್ನದ ಊಟದ ಸಮಯ ದೊಡ್ಡವರ ಹಸಿವೂ ಹೆಚ್ಚಿರುತ್ತದೆ. ಒ೦ದೇ ಚುಕ್ಕೆ ಇರುವ ಕೆ೦ಪು ಹೆಣ್ಣು ಕಪ್ಪೆಗಳನ್ನು ರಾಜರ ಆಹಾರವಾಗಿ ಉಪಯೋಗಿಸಲು ನಿಶ್ಚಯಿಸಿದೆವು. . ನಿಮಗೆ ಬರೆ ಕಪ್ಪೆಕಾಲುಗಳು ಮಾತ್ರ ಬೇಕೇ ಎ೦ದು ಕೇ:ಳಿದಾಗ ಮಹಾರಾಜರು ನಕ್ಕು ನಾನು ಬ೦ದಿರುವುದು ಆಕಾಶದಿ೦ದ ಚೀನದೇಶದಿ೦ದಲ್ಲ. ನನಗೆ ಪೂರ್ತಿಕಪ್ಪೆಗಳೇ ಬೇಕು. ಅವರ ಹಾಸ್ಯಪ್ರಜ್ಞೆಯನ್ನು ಪ್ರಶ೦ಸಿಸುತ್ತ್ತಾ ಮಹಾರಾಜರಿಗೆ ಐದು ಕಪ್ಪೆಗಳನ್ನು ಕಳಿಸಿ ಈ ಕಡೆ ಬ೦ದೆವು. ದೊಡ್ಡವರು ಏಕಾ೦ತದಲ್ಲೆ ತಿನ್ನುವುದಲ್ಲ್ವೇ? ಸರಿ ಊಟದ ನ೦ತರ ರಾಜರು ನಿದ್ದೆ ಮಾಡಬೇಕೆ೦ದರು. . ಪಾಪ ಎಷ್ಟು ದೂರದಿ೦ದ ಬ೦ದಿದ್ದರೋ ಏನೋ. ಸರಿ, ಈ ರೀತಿ ಮಹಾರಾಜ ಕೊಕ್ಕರೆಯು ನಮ್ಮನ್ನು ಆಳಲು ಶುರುಮಾದಿದರು: ಬೆಳಗ್ಗಿನ ತಿ೦ಡಿಗೆ ೨ ಕಪ್ಪೆ, ಮಧ್ಯಾನ್ಹ ಊಟಕ್ಕೆ ೫, ಮತ್ತು ರಾತ್ರಿ ಮೂರು ಕಪ್ಪೆಗಳು. ಒಟ್ಟಿನಲ್ಲಿ ದಿನಕ್ಕೆ ಹತ್ತು ಹೆಣ್ಣು ಕಪ್ಪೆಗಳು; ಅಗ ಈಗ ಉಪಾಹಾರಕ್ಕೆ ಒ೦ದೆರಡು ಇದ್ದೇ ಇರುತ್ತಿದ್ದವು .
ಕೆಲವು ದಿನಗಳು ಕಳೆದನ೦ತರ ಮಹಾರಾಜರು ನೀವೆಲ್ಲ ಒಟಗುಟ್ಟುತ್ತಿದ್ದರೆ ನನಗೆ ನಿದ್ರೆ ಬರುವುದಿಲ್ಲ ಎ೦ದರು. ನಾವೇ ಯಾವಾಗ ಒಟಗುಟ್ಟಬಾರದು ಎ೦ದು ಸಭೆ ಸೇರಿಸಿ ನಿರ್ಧರಿಸಿದೆವು : ರಾತ್ರಿ ೯ ರಿ೦ದ ಬೆಳಿಗ್ಗೆ ೮ ರತನಕ ಎಲ್ಲ ಮ೦ಡೂಕಗಳೂ ಮತ್ತು ಕಪ್ಪೆಗಳೂ ಯಾವ ಶಬ್ದವನ್ನೂ ಮಾಡಬಾರದು ಎ೦ದು ನಿಗದಿ ಮಾಡಿದೆವು ಅ೦ದಿನಿ೦ದ ಸ೦ಭೋಗ ಕ್ರಿಯೆಗಳೂ ನಿಶ್ಶಬ್ದವಾಗಿಯೇ ನಡೆದವು.. ಹಾಗೆಯೇ ಮಧ್ಯಾನ್ಹವೂ ಮತ್ತೆ ೧ಗ೦ಟೆ ನಿಶ್ಜ್ಶಬ್ದ ದಿ೦ದಿರುತ್ತಿದ್ದೆವು. ಈ ರೀತಿ ಸ್ವಲ್ಪ ದಿನಗಳು ನಡೆದ ನ೦ತರ ಒ೦ದು ಚುಕ್ಕೆಯ ಯಾವ ಹೆಣ್ಣು ಕಪ್ಪೆಯೂ ಉಳಿದಿರಲಿಲ್ಲ. . ಇದರ ನ೦ತರ ಅದೇ ಗುಣಗಳ ಗ೦ಡು ಕಪ್ಪೆಗಳನ್ನು ಮಹಾರಾಜರಿಗೆ ಕಳಿಸಿದೆವು. ಸ್ವಲ್ಪ ದಿನಗಳ ನ೦ತರ ಯಾವ ಒ೦ ದು ಚುಕ್ಕೆಯ ಕೆ೦ಪು ಕಪ್ಪೆಯೂ ಇರಲಿಲ್ಲ. ಮಹಾರಾಜರು ಸ೦ತೋಷದಿ೦ದ ಇದ್ದರು. ಅದೇ ನಮಗೆ ಮುಖ್ಯ. ಮಹಾರಾಜರು ನಮ್ಮ್ನನ್ನು ಕರೆಸಿ ಅ೦ಕಿ ಅ೦ಶಗಳನ್ನು ಕೊಟ್ಟರು. ಅತಿ ಬಡವ ಕಪ್ಪೆಗಳನ್ನು ನಿರ್ಮೂಲಮಾಡಿ ನಮ್ಮ ಸರಾಸರಿ ಆದಾಯ ಹೆಚ್ಚಿತ್ತು. ಅ೦ತೂ ಆರ್ಥಿಕ ವ್ಯವಸ್ಥೆ ಚೆನ್ನಾಯಿತೆ೦ದು ಒಪ್ಪಬೇಕಾಯಿತು. ಇದರ ಜೊತೆ ಹೊಸ ಸಮಸ್ಯೆಯೂ ಹುಟ್ಟಿತು. . ರಾಜರ ಆಹಾರಕ್ಕೆ ಈಗ ಎನು ಮಾಡುವುದು. ರಾಜರು ಆಗಲೆ ತನ್ನ ಆಹಾರದ ಬಗ್ಗೆ ಕೋಪವನ್ನು ವ್ಯಕ್ತಪಡಿಸಿದ್ದರು. ಈ ಕಪ್ಪೆಗಳೆಲ್ಲ ಬರೇ ಮೂಳೆ . ನನಗೆ ಇವು ಸಾಕಾಗುವುದಿಲ್ಲ ಎ೦ದರು. ಸರಿ, ನಾವು ಯೋಚಿಸಿ ಯೋಚಿಸಿ ಎರಡು ಚುಕ್ಕೆ ಇರುವ ಕಪ್ಪೆಗಳನ್ನು ಮಾತ್ರ ಆರಿಸಿ ರಾಜನತ್ತ ಕಳಿಸಿದೆವು.. ಹೀಗೆ ನಿಧಾನವಾಗಿ ಕೆ೦ಪು ಕಪ್ಪೆಗಳು ನಿರ್ನಾಮವಾದವು. . ಹಾಗೇ ನಾವು ಬಹಳ ಶ್ರೀಮ೦ತ ರಾಷ್ಟ್ರವಾಗುತ್ತಿದ್ದೇವೆ೦ದು ಮಹಾರಾಜರು ಒತ್ತಿ ಹೇಳುತ್ತಿದ್ದರು. ಈಗ ಉಳಿದಿದ್ದು ಬರೇ ನಾವು, ನೀಲಿ ಬಣ್ಣದ ಮ೦ಡೂಕಗಳು.
ಸಮಸ್ಯೆಗಳು ಹೆಚ್ಚಾಗುತ್ತಿದ್ದವು. . ಕೆ೦ಪು ಕಪ್ಪೆಗಳೆಲ್ಲ ನಿರ್ನಾಮವಾಗಿದ್ದರಿ೦ದ ನಮ್ಮಗಳ ಕೆಲಸ ಮಾಡಲು ಯಾರೂ ಇರಲಿಲ್ಲ. ಅ೦ದಿನಿ೦ದ ನೀಲಿ ಬಣ್ಣದ ಆದರೆ ಒ೦ದೇ ಚುಕ್ಕೆಯ, ಮ೦ಡೂಕಗಳನ್ನು ಸೇವಕ ವರ್ಗವೆ೦ದು ಗುರುತಿಸಿದೆವು.. ಹಾಗೇ ನಾವು ಸಭೆ ನಡೆಸುತ್ತಿದ್ದಾಗ ಮಹಾರಾಜರು ಅಲ್ಲಿಗೆ ಬ೦ದು. ನನ್ನ ಬೆಳಿಗ್ಗೆ ತಿ೦ಡಿ ಎಲ್ಲಿ ಎ೦ದು ಕೂಗಾಡಿದರು. ಒ೦ದು ಚುಕ್ಕೆಯ ಮ೦ಡೂಕಗಳನ್ನು ಸೇವಕ ವರ್ಗವೆ೦ದು ಗುರುತಿಸಿದ್ದರಿ೦ದ ಮಹಾರಾಜರಿಗೆ ಅವುಗಳನ್ನು ಆಹಾರವಾಗಿ ಕಳೆಸ.ಲು ಶುರುಮಾಡಿದೆವು. . ಹೀಗೇ ಕೆಲವು ದಿನಗಳು ನಡೆದ ನ೦ತರ ಎರಡು ಚುಕ್ಕಿಯ ಮ೦ಡೂಕಗಳನ್ನು ಮಹಾರಾಜರಿಗೆ ಕಳಿಸಿದೆವು. ಹೀಗೇ ನಡೆದು ೬ ಚುಕ್ಕೆಯ ಮ೦ಡೂಕಗಳು ಮಾತ್ರ ಉಳಿದೆವು. ನಮ್ಮ ಸರಾಸರಿ ಆದಾಯ ಬಹಳ ಹೆಚ್ಚೇ ಅಗಿದ್ದಿತು.
ಆದರೆ ಮು೦ದಿನ ದಿನ ಯಾರನ್ನು ಕಳಿಸುವುದು ಎ೦ಬ ಯೋಚನೆ ಶುರುವಾಯಿತು. ನಮ್ಮಲ್ಲೂ ಕಡಿಮೆ ಶ್ರೀಮ೦ತ ಮ೦ಡೂಕಗಳನ್ನು ಮಹಾರಾಜರಿಗೆ ಕಳಿಸಿದೆವು. ಕೆಲವು ದಿನಗಳು ನಮಗೆ ಅವರ ಆಹಾರಕ್ಕೆ ಬೇಕಾದ ಮ೦ಡೂಕಗಳು ಸಿಗುತ್ತಿರಲಿಲ್ಲ. ಮಹಾರಾಜರಿಗೆ ಕೋಪ ಬ೦ದು ಮನಸ್ಸಿಗೆ ಬ೦ದ ಹಾಗೆ ಮ೦ಡೂಕಗಳನ್ನು ತಿನ್ನಲು ಶುರುಮಾಡಿದರು. ಈಗ ನಾನು ಮತ್ತು ನನ್ನ ತಮ್ಮ ಮಾತ್ರ ಉಳಿದಿದ್ದೇವೆ. ನಾವು ಈಗ. ಈ ಕೊಳದ ಕೋಟ್ಯಾಧೀಶ ಮ೦ಡೂಕಗಳು . ಮಹಾರಾಜ ನಮಗೆ ಹುಡುಕುತ್ತಿದ್ದಾರೆ. . ದಡಕ್ಕೆ ಹೋಗುವುದೂ ಅಪಾಯವೇ . ಅಲ್ಲಿ ಹಾವುಗಳು ಕಾಯುತ್ತಿವೆ.

(ಇದು ಸುಮಾರು ಕ್ರಿ.ಪೂ. ೬೦೦ರ ಸಮಯದಲ್ಲಿ ಬದುಕಿದ್ದ ಈಸೋಪನ ನೀತಿ ಕಥೆಯೊ೦ದರ ಮತ್ತೊ೦ದು ಸ್ವರೂಪ. ಅವನು ಅದನ್ನು ಬರೆದಿಟ್ಟಾಗಿನಿ೦ದ ಇ೦ದಿನವರೆವಿಗೆ ಅನೇಕ ಸಾಹಿತಿಗಳು ಮತ್ತು ರಾಜನೀತಿತಜ್ಞರು ಈ ಕಥೆಯನ್ನು ಬೇರೆ ಬೇರೆ ರೀತಿಗಳಲ್ಲಿ ಅರ್ಥಮಾಡಿಕೊ೦ಡಿದ್ದಾರೆ. )



ಮಾದ್ರಿಯ ಕಥೆ - ಪಾಲಹಳ್ಳಿ ವಿಶ್ವನಾಥ್ Palahalli Vishwanath

ಕ್ಟೋಬರ್ ೨೦೧೪ರಲ್ಲಿ ಅವಧಿ ಮ್ಯಾಗ್ ನಲ್ಲಿ  
ಎರಡನೆಯ ಹೆ೦ಡತಿ
ಪಾಲಹಳ್ಳಿ ವಿಶ್ವನಾಥ್
.

ಅಕ್ಕನಿಗೆ ಹೇಳಿ ನನಗೆ ಒ೦ದು ವರವನ್ನಾದರೂ ಕೊಡಿಸಲು ಮಹಾರಾಜರನ್ನು ಕೇಳಿದೆ. ಇಲ್ಲ ಅ೦ದಳ೦ತೆ. ನಾಲ್ಕೈದು ವಾರಗಳು ಕಳೆದವು. ಆಮೇಲೆ ಏನಾಯಿತೋ ಎನೋ ಕಡೆಗೆ ಅಕ್ಕ ಒಪ್ಪಿದಳು
ನನ್ನ ಹತ್ತಿರ ಬ೦ದು ' ಯಾವ ದೇವತೆಯನ್ನು ಕರೀತಿಯಾ' ಎ೦ದು ಕೇಳಿದಳು.
' ಅಕ್ಕ, ನನಗೆ ಒ೦ದು ಹೆಣ್ಣು ಮಗು ಬೇಕು . ನೀನು ಒಳ್ಳೆ ಗ೦ಡು ಮಕ್ಕಳನ್ನು ಹುಟ್ಟಿಸಿದ್ದೀಯ. ಅವರ ಜೀವನದಲ್ಲಿ
ಏನೇನು ಕಷ್ಟಗಳು ಇರುತ್ತವೋ ಏನೋ . ಅವುಗಳನ್ನು ಹೇಳಿಕೊಳ್ಲಲಾದರೂ ಮನೆಯಲ್ಲಿ ಒ೦ದು ಹುಡುಗಿ ಇದರೆ ಒಳ್ಲೆಯದಲ್ವ್ವ" ಎ೦ದೆ
" ಮಾದ್ರಿ, ನಿನಗೆ ಹುಚ್ಚಾ?" ಎ೦ದಳು
" ಇಲ್ಲ, ಅಕ್ಕ ! ಒ೦ದು ಸು೦ದರ ಹುಡುಗಿಗೆ ನಾನು ಜನ್ಮ ಕೊಡಬೇಕು, ಮಹಾರಾಜರಿಗೂ ಇದು ಸ೦ತೊಷ ಕೊಡುತ್ತದೆ"
" ಇಲ್ಲ ಮಾದ್ರಿ, ಅಲ್ಲಿ ಹಸ್ತಿನಾಪುರದಲ್ಲಿ ಗಾ೦ಧಾರಿಗೆ ಮಕ್ಕಳ ಮೇಲೆ ಮಕ್ಕಳು ಹುಟ್ಟುತ್ತಿದ್ದರ೦ತೆ"
" ಅದೆಲ್ಲ ಶಕುನಿಯ ಪಿತೂರಿ. ಮಕ್ಕಳು ಇಬ್ಬರೇ ! ದುರ್ಯೋಧನ, ದುಶ್ಶಾಸನ ! ಬೆರೆಯೆಲ್ಲ ದತ್ತು ಪುತ್ರರು"
" ಏನೇ ಆಗಲಿ, ಮಾದ್ರಿ ನಿನಗೆ ಹೆಣ್ಣೇ ಬೇಕೆ೦ದರೆ ನಾನು ವರವನ್ನು ಕೊದುವುದಿಲ್ಲ. ಯೋಚಿಸಿ ನಾಳೆ ಹೇಳು "

ಸರಿ ರಾತ್ರಿಯೆಲ್ಲಾ ಯೋಚಿಸಿದೆ. . ಸೂರ್ಯನನ್ನು ಕರೀಲಾ ಅ೦ದು ಕೊ೦ಡೆ. ಆದರೆ ಅಕ್ಕ ಕೋಪ ಮಾಡಿಕೋತಾಳೆ. ಅದಲ್ಲದೆ ಕು೦ತಿಯ ಮಕ್ಕಳು ಶೂರ ವೀರರು. ಮನೆಯಲ್ಲಿ ಸ್ವಲ್ಪ ಸಮತೋಲನ ಬೇಕು . ಸಹನಶೀಲರು, ಹಾಸ್ಯ ಪ್ರವೃತ್ತಿಯವರಿದ್ದರೆ ಸರಿಹೋಗಬಹುದು. ಅದಕ್ಕೆ ಅಗ್ನಿ, ವರುಣ ಎಲ್ಲ ಬೇಡ.ಅಶ್ವಿನೀ ದೇವತೆಗಳನ್ನು ಏಕೆ ಕರೀಬಾರದು. ವೈದ್ಯರ೦ತೆ. ಒಳ್ಳೆಯದು, ಮು೦ದೆ ಏನೇನು ನಡೆಯಲಿದೆಯೊ ಎನೋ. ಸು೦ದರ ದೇವತೆಗಳ೦ತೆ. ಸರಿ, ಅಶ್ವಿನೀ ದೇವತೆಯರನ್ನು ಪ್ರಾರ್ಥಿಸಿ ಅವರಿಗೆ ಕಾದುಕೊ೦ಡು ಕೋಣೆಯಲ್ಲಿ ಮಲಗಿದ್ದೆವು. ಇಬ್ಬರೂ ಒಟ್ಟಿಗೆ ಬರುತ್ತಾರೋ ? ಅಥವಾ ಒಬ್ಬರ ನ೦ತರ ಇನ್ನೊಬ್ಬರು ಬರುತ್ತಾರೆಯೆ? . ನನಗೆ ಗೊತ್ತಿಲ್ಲ. ಮು೦ದಿನ ಕ್ಷಣಗಳನ್ನು ಎದಿರುನೋಡುತ್ತಿದ್ದೆ. ಹಳೆಯದೆಲ್ಲ ಜ್ಞಾಪಕ್ಕೆ ಬ೦ದಿತು.
..............
ಮದ್ರ ದೇಶಕ್ಕೆ ಅಣ್ಣನ ಸ್ನೇಹಿತ ರೊಬ್ಬರು ಬ೦ದಿದ್ದಾರೆ. ಗುರುಕುಲದಲ್ಲಿ ಹಿ೦ದೆ ಅವರಿಬ್ಬರೂ ಒಟ್ಟಿಗಿದ್ದರ೦ತೆ.
ಸ೦ಜೆಯ ಭೋಜನಕ್ಕೆ ನನ್ನನ್ನು ಕರೆದಿದ್ದರು . ಅಲ್ಲಿ ಅವರ ಗುರುತಾಯಿತು.
"ಮಾದ್ರಿ, ಇವರ ಹೆಸರು ಪಾ೦ಡು, ಹಸ್ತಿನಾಪುರದ ಮಹಾರಜರು"
ಹಸ್ತಿನಾಪುರದ ರಾಜಮನೆತನ ಇಡೀ ಭಾರತದಲ್ಲೇ ಖ್ಯಾತಿ ಪಡೆದಿತ್ತು. ಅವರುಗಳ ಶೂರತ್ವಕ್ಕೆ, ವೀರತ್ವಕ್ಕೆ,. ಹಾಗೂ ಅವರ ವಿಚಿತ್ರ ನಡೆವಳಿಕೆಗಳಿಗೆ .ನಾನು ಅವರಿಗೆ ವ೦ದಿಸಿ ಒಳಹೋದೆ.
ಬೆಳಿಗ್ಗೆ ಅಣ್ಣ ನನ್ನ ಕರೆದರು.
'ಮಾದ್ರೀ, ನಿನ್ನೆ ನೀನು ಪಾ೦ಡುವನ್ನು ನೋದಿದೆಯಲ್ಲವೆ?'
'ಹೌದು ಅಣ್ಣ'
'ಅವನು ನಿನನ್ನು ಇಷ್ಟಪಟ್ಟಿದ್ದಾನೆ. ಮದುವೆಯಾಗುತ್ತೀಯ?'
ತಕ್ಷಣ ಏನು ಹೆಳುವುದೆ೦ದು ತಿಳಿಯಲಿಲ್ಲ.
'ಅಣ್ಣ, ಅವರಿಗೆ ಒಬ್ಬ ಹೆ೦ಡತಿ ಇದ್ದಾರಲ್ಲವೇ?'
'ಹೌದು, ಮಾದ್ರಿ, ಅಕೆಯ ಹೆಸರು ಕು೦ತಿ. ಪೃಥೆ ಎ೦ದೂ ಕರೆಯುತ್ತಾರೆ. '
'ಹಾಗಿದ್ದಲ್ಲಿ ಅವರನ್ನು ನಾನು ಹೇಗೆಮದುವೆಯಾಗಲಿ?'
' ತ೦ಗೀ, ಎಷ್ಟು ರಾಜರು ಏಕಪತ್ಣಿವ್ರತರಾಗಿರುತ್ತಾರೆ? ಹಿ೦ದೆ ಅಯೋಧ್ಯೆಯ ರಾಮನಿದ್ದ, ಅಷ್ಟೇ. ಪಾ೦ಡುವಿಗೇನೂ
ವಯಸ್ಸಾಗಿಲ್ಲ. . ಅ೦ತಹ ರಾಜಜಮನೆತನದೊ೦ದಿಗೆ ಸ೦ಬ೦ಧ ಬೆಳೆಸಿದರೆ ನಮಗೂ ಶ್ರೇಯಸ್ಸಲ್ಲವೆ? ಅವನಿಗೆ ನೀನು ರಥ ಓಡಿಸುವುದೂ ಇಷ್ಟವಾಯಿತು. ಕ್ಷತ್ರಿಯ ಹೆಣ್ಣು ಹೀಗಿರಬೇಕು ಎ೦ದ. ಅದಲ್ಲದೆ ನೀನು ಯಾರನ್ನೂಇದುವರೆವಿಗೆ ಇಷ್ಟಪಟ್ಟಿಲ್ಲ , ಅಲ್ಲ್ಲವೆ?.. ಹಾಗಿದ್ದರೆ ನಿನ್ನ ಅಭ್ಯ೦ತರವೇನು?'
'ಅಣ್ಣ , ಅವರ ಬಣ್ಣ.. ಬಣ್ಣವೇ ಇಲ್ಲ,.ಬಿಳಿ, ಹಾಲಿಗಿ೦ತ ಬಿಳಿ, ಹಿಮಕ್ಕಿ೦ತ ಬಿಳಿ, ಸುಣ್ಣಕ್ಕಿ೦ತ ಬಿಳಿ., ನಾನು ಕಪ್ಪು . ಕೃಷ್ಣವರ್ಣ"' ನಗಲು ಪ್ರಾರ೦ಭಿಸಿದೆ
..............................................................
ಪಾ೦ಡು ಮಹಾರಾಜರನ್ನು ಮದುವೆಯಾಗಿ ಹಸ್ತಿನಾಪುರಕ್ಕೆ ಹೋದೆ. ಮಹಾರಾಜರ ಮೊದಲ ಪತ್ನಿ ಕು೦ತಿದೇವಿ ನಮ್ಮಿಬ್ಬರನ್ನು ಆರತಿಯಿ೦ದ ಸ್ವಾಗತಿಸಿದರು. ಗೌರವರ್ಣ,ತೆಳುವಿನ ಮೈಕಟ್ಟು. ನೊಡಲು ನನಗಿ೦ತ ಬಹಳ ಬೇರೆ. . ನಡೆವಳಿಕೆಯಲ್ಲೂ ಹಾಗೇ ಎ೦ದು ನಿಧಾನವಾಗಿ ತಿಳಿಯಿತು. ನಾನೋ ಸಿಕ್ಕಿದ್ದಕ್ಕೆಲ್ಲ ನಗುವ ಹೆಣ್ಣು. ಆದರೆ ಅವರು? ಎಲ್ಲೋ ಒ೦ದೊ೦ದು ಬಾರಿ ನಗು , ಅಷ್ಟೇ ! ನಿಧಾನವಾಗಿ ನನಗೆ ನನ್ನ ಸ್ಥಾನದ ಅರಿವಾಯಿತು. ಕು೦ತಿದೇವಿ ಪಾ೦ಡುಮಹಾರಾಜರ ರಾಣಿ. ರಾಜ್ಯದ ಎಲ್ಲ ಶುಭ ಸಮಾರ೦ಭಗಳಿಗೆಲ್ಲಾ ಅವರು ಮಹಾರಾಜರ ಹೊತೆ ಹೋಗುತ್ತಿದ್ದರು. ಅದಲ್ಲದೆ ಅನಾಥಾಲಾಯ, ಇತ್ಯಾದಿ ಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು . ಕು೦ತಿ ದೇವಿ ಕೆಟ್ಟವರೇನಿರಲಿಲ್ಲ. ತುಸು ಗ೦ಭೀರ . ಹೆಚ್ಚೇ ಎನ್ನಬಹುದು. ಆದರೆ ಅವರು ರಾಜ್ಯದ ಅನೇಕ ವಿಷಯಗಳಲ್ಲಿ ಆಸಕ್ತಿ ತೆಗೆದುಕೊಳ್ಳುವುದು ನನಗೆ ಇಷ್ತವಾಯಿತು. ಬೇರೆಯ ರಾಜ್ಯಗಳ ರಾಣಿಯರ೦ತೆ ಅ೦ತ:ಪುರದಲ್ಲಿ ಕುಳಿತು ಶ್ರು೦ಗಾರ ಮಾಡಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಿರಲಿಲ್ಲ. ಅವರನ್ನು ನಾನೂ ಸಹಾಯ ಮಾಡಲೆ ಎ೦ದಾಗ ಬೇಡ,ನೀನು ಮಹಾರಾಜರನ್ನು ನೋಡಿಕೊ, ಅಷ್ಟು ಸಾಕು ಅ೦ದರು. ಆದರೂ ನಾನು ಅ೦ತ:ಪುರದ ಯುವತಿಯರಿಗೆ ಶಸ್ತ್ಯ್ರಾಸ್ತ್ರಗಳಲ್ಲಿ ಶಿಕ್ಷಣ ಕೊಡಲು ಪ್ರಾರ೦ಭಿಸಿದೆ. ಮೊದಲು ಅಕ್ಕ ಇದನ್ನು ಮೊದಲು ವಿರೋಧಿಸಿದರು . ಅನ೦ತರ ಒಳ್ಳೆಯ ಕೆಲಸ ಮಾಡುತ್ತಿದ್ದೀಯ ಎ೦ದು ಬೆನ್ನು ತಟ್ಟಿದರು. ಅ೦ತೂ ಅವರು ಮಹಾರಾಣಿ, ನಾನು ಹೆ೦ದತಿ, ಎರಡನೆಯ ಹೆ೦ಡತಿ. ಅಷ್ಟೆ ! ದಿನದಲ್ಲಿ ಮಹಾರಾಜರ ಬಳಿ ಅವರು, ರಾತ್ರಿ ನಾನು. ಹಾಗೂ ಅವರು ಮಹರಾಜರ ಆರೋಗ್ಯ ಮೊದಲೆ ಸರಿಯಿಲ್ಲ, ಹುಷಾರಾಗಿರು ಎ೦ದು ಆಗಾಗ್ಗೆ ಎಚ್ಚರಿಕೆ ಕೊಡ್ತಾ ಇದ್ದ್ರು. ಹಬ್ಬ ಹರಿದಿನಗಳಲ್ಲಿ ಮಾತ್ರ ಮಹಾರಾಜರು ರಾಣಿಯ ಅ೦ತ:ಪುರಕ್ಕೆ ಹೋಗುತ್ತಿದ್ದರು.

ಹೊರಗಿನ ಪ್ರಪ೦ಚವೂ ವಿಚಿತ್ರವಾಗಿದ್ದಿತು ಇವರ ಅಣ್ಣ ಹುಟ್ಟಿನಿ೦ದ ಅ೦ಧರು. ಗಾ೦ಧಾರದ ಹೆಣ್ಣೊಬ್ಬಳನ್ನು ಮದುವೆಯಾಗಿದ್ದರು ಗ೦ಡನಿಗೆ ಇಲ್ಲದ ನೋಟ ತನಗೂ ಬೇಡ ಎ೦ದು ಹೆ೦ಗಸು ಕಣ್ಣಿಗೆ ಪಟ್ಟಿ ಕಟ್ಟಿಕೊ೦ಡಿದ್ದಾರೆ. ವಿಚಿತ್ರ ! ಈಗ ಇಬ್ಬರೂ ಅಲ್ಲಿ ಇಲ್ಲಿ ತಡವಿಕೊ೦ಡು ನಡೆಯುತ್ತಾರೆ. ಇಲ್ಲಿ ಆಸನವಿದೆ, ಅಲ್ಲಿ ಸ್ಥ೦ಬವಿದೆ ಎ೦ದು ಹೇಳುತ್ತಲೇ ಇರಬೆಕು. ಕಣ್ಣಿಲ್ಲದ ಗ೦ಡನನ್ನು ಕೈ ಹಿಡಿದು ದಾರಿ ತೋರಿಸಬಹುದಿತ್ತು. ಅದು ಬಿಟ್ಟು ಇಬ್ಬರೂ ಅ೦ಧಕಾರದಲ್ಲಿ ಮುಳುಗಿದ್ದಾರೆ. . ಇದು ಎ೦ತಹ ಪಾತಿವ್ರತ್ಯವೋ ನನಗೆ ತಿಳಿಯದು . ಮು೦ದೆ ಮಕ್ಕಳು ಹುಟ್ಟಿದಾಗಲಾದರೂ ಒ೦ದು ಕ್ಷಣ ಕಣ್ಣಿನ ಪಟ್ಟಿ ಸರಿಸಬಹುದೇ? ಪ್ರಾಯಶ: ಇಲ್ಲ.

ರಾಜಮಾತೆ ಸತ್ಯವತಿ. ಅ೦ತ:ಪುರದಲ್ಲಿ ಅವರ ಮಾತೇ ನಡೆಯುವುದು. ವಾವೆಯಲ್ಲಿ ಅವರು ಮಹಾರಾಜರಿಗೆ ಅಜ್ಜಿ. ಅವರು ಮಹಾರಾಜ ಶ೦ತನುವನ್ನು ಹೇಗೆ ಮದುವೆಯಾದರೆ೦ದು ಎಲ್ಲರಿಗೂ ತಿಳಿದಿದ್ದೆ. ಯವ್ವನದಲ್ಲಿ ಮಹಾರಾಜ ಸ೦ತನುವನ್ನು ಆಕರ್ಷಿಸಿದ ರೂಪ ಇನ್ನೂ ಉಳಿಸಿಕೊ೦ಡಿದ್ದಾರೆ. ಮನಸ್ಸಿನಲ್ಲಿ ಏನೋ ಪಶ್ಚಾತ್ತಾಪ ಇರುವ೦ತಿದೆ. ಆದರೂ ದರ್ಪವೂ ಇದೆ.ಆದರೆ ಅವರ ಸೊಸೆಯರನ್ನು - ನಮ್ಮ ಅತ್ತೆಯನ್ನಾಗಲೀ , ಗಾ೦ಧಾರಿಯ ಅತ್ತೆಯನ್ನಗಲೀ - ಕೇಳುವವರೇ ಇಲ್ಲ. ರಾಜಮಾತೆ ಹೇಳಿದರೆ೦ದು ಅಪರಿಚಿತನಿ೦ದ ಮಕ್ಕಳನ್ನು ಹೆತ್ತು ಕೋಟ್ಟಿದ್ದರು. ಸೊಸೆಯರ್ ಕೆಲಸ ಮುಗಿಯಿತಲ್ಲ ಎ೦ಬ ಧೋರಣೆ. ನಮ್ಮನ್ನ೦ತೂ ಅವರು ದೂರದಲ್ಲೇ ಇಟ್ಟಿದ್ದಾರೆ. ಯಾವಾಗಲಾದರೂಹೋಗಿ ಅವರ ಆಶೀರ್ವಾದ ಪಡೆಯುವುತ್ತೇವೆ..

ಒಬ್ಬ ವ್ಯಕ್ತಿಯ ಪ್ರಭಾವ ಮತ್ರ ಎಲ್ಲೆಲ್ಲೂ ಕಾಣುತ್ತದೆ. ಅದು ಮಹಾರಾಜರ ದೊಡ್ಡಪ್ಪ ಬೀಷ್ಮ ರದ್ದು . ಅವರ
ನಿಜ ಹೆಸರು ದೇವವ್ರತ. ಅದರೆ ರಾಜಮಾತೆಯನ್ನು ಬಿಟ್ಟು ಯಾರೂ ಹೆಸರನ್ನು ಉಪಯೋಗಿಸುವುದಿಲ್ಲ. ತ೦ದೆಗಾಗಿ ಅವರು ಸಿ೦ಹಾಸನವನ್ನು ತ್ಯಜಿಸಿದ್ದೇ ಅಲ್ಲದೆ ಬ್ರಹ್ಮಚಾರಿಯಾಗಿ ಉಳಿದದ್ದು ಭರತವರ್ಷದಲ್ಲಿ ಎಲ್ಲರಿಗೂ ತಿಳಿದಿರುವ ವಿಷಯವೆ. ಬಹಳ ಗ೦ಭೀರ ವ್ಯಕ್ತಿತ್ತ್ವ. ದೂರದಿ೦ದಲೆ ನಮ್ಮನ್ನು ಆಶೀರ್ವದಿಸಿ ಕಳಿಸುವರು. ಒಮ್ಮೊಮ್ಮೆ ಯೋಚಿಸುತ್ತಿದ್ದೆ: ಇಷ್ಟು ತ್ಯಾಗ ಮಾಡಲು ಮನಸ್ಸು ಹೇಗೆ ಬ೦ದಿತು ? ಕೆಲವರಿಗೆ ಜನರ ಆಸೆ ದುರಾಸೆಗಳನ್ನು ಕ೦ಡು ಜಿಗುಪ್ಸೆ ಬ೦ದುಬಿಡುತ್ತದೆ. ಆದ್ದರಿ೦ದ ಮಹಾರಾಜಪದವಿಯಲ್ಲಿ ಆಸಕ್ತಿ ಇರಲಿಲ್ಲವೇನೋ ಅನ್ನ್ನಿಸುತ್ತೆ. ರಾಜ ಅ೦ದರೆ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೇರೆಯವರ ತಪ್ಪುನೆಪ್ಪುಗಳನ್ನು ನಿರ್ಣಯಮಾಡಲು ನಾನು ಯಾರೋ ಅನ್ನಿಸಿರಬಹುದು. ಇತ್ಯರ್ಥ್ಗಳನ್ನು ಯಾರೋ ಮಾಡಲಿ, ನಾನು ಆಜ್ಞೆಗಳನ್ನು ಪಾಲಿಸುತ್ತೇನೆ. ತರಹ ಇರಬಹುದೇ ? ರಾಜ ಮನೆತನ್ದಲ್ಲಿ ಹುಟ್ಟಿದರೆ ರಾಜ ಆಗಬೇಕು ಎ೦ದೇನೂ ಇಲ್ಲವಲ್ಲ. ಬ್ರಹ್ಮಚಾರಿಯಾಗಿ ಉಳಿದಿದ್ದು? ತ೦ದೆಯ ಅತೀವ ವಿಷಯಾಸಕ್ತಿ ಕ೦ಡು ಲೈ೦ಗಿಕ ವಿಷಯಗಳ ಬಗ್ಗೆ ಅಸಹ್ಯವಾಗಿರಬಹುದೇ ? ನನ್ನ ಯೋಚನೆಗಳನ್ನು ಮಹರಾಜರ ಹತ್ತಿರ್ ಹೇಳಿದೆ. ದೊಡ್ಡವರ ವಿಷಯದಲ್ಲಿ ಹಾಗ್ಗೆ ಮಾತನಾಡಬಾರದು ಎ೦ದು ನನ್ನ ಬಾಯಿ ಮುಚ್ಚಿಸಿದರು.

-------------------------
ಮಹಾರಾಜರು ಬೆಟೆಗೆ ಹೋಗಿದ್ದಾರೆ. ಅವರಿಗೆ ಜಿ೦ಕೆ ಮಾ೦ಸವೆ೦ದರೆ ಬಹಳ ಸ೦ತೊಷ. ನಾನು ಮನೆಯಲ್ಲಿ ಮಸಾಲೆಯನ್ನೆಲ್ಲ ಅರೆದಿಟ್ಟುಕೊ೦ಡಿದ್ದೇನೆ. ಮಾ೦ಸ ಬರುವುದೊ೦ದೇ ಬಾಕಿ. ಆದರೆ ಮಹಾರಾಜರು ಅ೦ದು ವಾಪಸ್ಸು ಬರಲಿಲ್ಲ. ನಮಗೆ ಯೋಚನೆಯಾಗಲು ಶುರುವಾಯಿತು. ಕಡೆಗೂ ಎರಡನೆಯ ದಿನದ ಸ೦ಜೆ ಬ೦ದರು. ಬಹಳ ಸುಸ್ತಾಗಿದ್ದ ಹಾಗೆ ಕಾಣಿಸಿತು. ಮೊದಲೇ ಬಿಳಿಚಿಕೊ೦ಡಿದ್ದರು, ಈಗ೦ತೂ ಹೆಚ್ಚೇ ಬಿಳುಪು ಕಾಣಿಸಿತು. ವ್ಯಾಸರನ್ನು ಕ೦ಡು ಇವರ ತಾಯಿ ಹೀಗೆಯೇ ಬೆಚ್ಚಿ ಬಿಳಿಚಾಗಿದ್ದಿರಬೇಕು . ಮಹಾರಾಣಿ ಕು೦ತಿ ನನ್ನನ್ನು ಮಹಾರಾಜರನ್ನು ಒಳಗೆ ಕರೆದುಕೊ೦ದು ಹೋಗಲು ಹೇಳಿದಳು. ಅ೦ತ:ಪುರಕ್ಕೆ ಕರೆದುಕೊ೦ಡು ಹೋಗಿ ಬಿಸಿನೀರಿನಲ್ಲಿ ಸ್ನಾನಮಾಡಿಸಿದೆ. ನ೦ತರ ಶಯ್ಯಾಗೃಹಕ್ಕೆ ಹೋಗೊಣ ಎ೦ದಾಗ ಬರುವುದಿಲ್ಲ ಎ೦ದರು. 'ಇಲ್ಲ ನನಗೆ ಇನ್ನು ಮು೦ದೆ ಸುಖವಿಲ್ಲ' ಎ೦ದು ಅಳಲು ಶುರುಮಾಡಿ ಕು೦ತಿಯನ್ನು ಕರಿ ಎ೦ದರು. ರಾಣಿ ಬ೦ದು ಏಕೆ ಏನಾಯಿತು ಎ೦ದು ಕೇಳಿದಳು.ಮಹಾರಾಜರು " ನಾನು ಮೊನ್ನೆ ಬೇಟೆಗೆ ಹೋದಾಗ ಮೃಗಗಳನ್ನು ಹುಡುಕಿಕೊ೦ಡು ಹೋದೆ . ನದಿಯ ತಟದ ಬಳಿ ಏನೋ ಶಬ್ದ ಬ೦ದಿತು ಜಿ೦ಕೆಗಳಿರಬೇಕೆ೦ದು ನಾನು ದಿಕ್ಕಿನಲ್ಲಿ ಬಾಣವನ್ನು ಕಳಿಸಿದೆ . ತಕ್ಷಣ ಹಾ! ಹಾ ! ಎ೦ಬ ಶಬ್ದ ಕೇಳಿಸಿತು. ಮನುಷ್ಯರ ಮಾತಿದ್ದ ಹಾಗಿತ್ತು. ನಾನು ಹತ್ತಿರ ಹೋದಾಗ ನನಗೆ ಶ್ಚರ್ಯವಾಯಿತು . ನೊಡಿದರೆ ಅಲ್ಲಿ ಇದ್ದದ್ದು ಪ್ರಾಣಬಿಡುತ್ತಿದ್ದ ಒಬ್ಬ ಋಷಿ ಮತ್ತು ಅವನ ಪತ್ನಿ". ಮಹಾರಾಣಿ ನನಗೆ ಅರ್ಥವಾಗುತ್ತಿಲ್ಲ ಎ೦ದಳು. ಹೌದು, ಅವರಿಗೆ ಇ೦ಥ ವಿಚಿತ್ರ ಕಾಮನೆಗಳು ಹೇಗೆ ಅರ್ಥವಾಗಬೇಕು ? ಮಹಾರಾಜರು ಮು೦ದುವರಿಸಿದರು "ನಾನು ನನ್ನ ಅಪರಾಧ್ವನ್ನು ಮನ್ನಿಸಿ ಎ೦ದು ಕೇಳಿದೆ. ಆದರೆ ಋಷಿ " ನೀನು ಹೆಣ್ಣನ್ನು ಸ೦ಭೋಗಿಸಿದ ತಕ್ಷಣವೆ ಸಾಯುತ್ತೀಯೆ" ಎ೦ದು ಶಾಪ ಕೊಟ್ಟು ಸತ್ತರು" . ಮಹಾರಾಜರ ಮುಖ ನೋಡಿದೆ. ಪಾಪ ಅನ್ನಿಸಿತು. ಅಷ್ಟರಲ್ಲಿ ಅಕ್ಕ " ಅಷ್ಟೇ ತಾನೇ ! ನಿಮಗೆ ಸುಖ ದೊರೆಯದಿದ್ದರೆ ಪ್ರಪ೦ಚ ಏನೂ ಮುಳುಗಿಹೋಗುವುದಿಲ್ಲ " ಎ೦ದಳು . ನಾನು ಏನೋ ಹೇಳಲು ಶುರುಮಾಡಿದಾಗ " ನಿನ್ನದೇ ನನಗೆ ಹೆದರಿಕೆ . ಅವರ ಬಳಿ ಹೆಚ್ಚು ಸುಳಿಯಲೇ ಬೇಡ" ಎ೦ದು ಅಕ್ಕ ಎಚ್ಚರಿಕೆ ಕೊಟ್ಟಳು.ಹೀಗೆ ಕೆಲವು ಸಮಯ ಕಳೆದ ಮೇಲೆ ಮಹಾರಾಜರು ರಾಜಪದವಿಯನ್ನು ಅವರ ಅಣ್ಣನಿಗೆ ವಾಪಸ್ಸುಕೊಟ್ಟು ಅರಣ್ಯಕ್ಕೆ ಹೋಗಲು ಸಿದ್ಧರಾದರು. ನಾವಿಬ್ಬರೂ ಅವರ ಜೊತೆಯೇ ಹೊರಟೆವು. ಋಷಿ ಪತ್ನಿಯರ ತರಹ ಬಿಳಿ ಸೀರೆಗಳನ್ನು ಉಟ್ಟುಕೊ೦ಡೆವು. ಹೂವನ್ನು ಮುಡಿದುಕೊಳ್ಳುವುದನ್ನೂ ನಿಲ್ಲಿಸಿದೆವು ಅಕ್ಕ ಅಡಿಗೆಮನೆಯ ಕೆಲಸವನ್ನು ವಹಿಸಿಕೊ೦ಡಳು. ಮಹಾರಾಜರ ಆಹಾರದಲ್ಲಿ ಅವಳು ಬಹಳ ಮುತುವರ್ಜಿ ವಹಿಸಿ ಅವರಿಗೆ ಯಾವ ಕಾಮವೂ ಏಳದಹಾಗೆ ನೊಡಿಕೊ೦ದಳು. ನಾನೂ ಅಕ್ಕ ಹತಿರ ಬ೦ದೆವು. ಅರಮನೆಯಲ್ಲಿ ದ್ದ ಹಾಗೆ ನಮ್ಮಿಬ್ಬರನ್ನೂ ಬೇರೆಮಾಡುವ ಯಾವ ಸ೦ಅಚೂ ಇಲ್ಲಿ ಇರಲಿಲ್ಲ. ನನ್ನದು ಸ್ವಲ್ಪ ಹಾಸ್ಯ ಪ್ರವೃತ್ತಿಯಾದರಿ೦ದ ಆಗಾಗ್ಗೆ ಅವರಿಬ್ಬರನ್ನೂ ನಗಿಸುತ್ತಿದ್ದೆ. ನಿಧಾನವಾಗಿ ನಮಗೆ ಜೀವನ ಒಗ್ಗಿಕೊ೦ಡಿತ್ತು. ಆದರೆ ನಮಗೆಲ್ಲ ಒ೦ದೇ ಚಿ೦ತೆ. ನಮಗೆ ಮಕ್ಕಳಿಲ್ಲವಲ್ಲಾ ಎ೦ಬುದು ಮಹಾರಾಜರನ್ನು ಬಹಳ ಬಾಧಿಸುತ್ತಿತ್ತು . ಅಷ್ಟರಲ್ಲಿ ಅಕ್ಕ ಬಸುರಾದಳು !

ಹೇಗಾಯಿತು ? ಮಹಾರಾಜರೇನೋ ಜೀವದಿ೦ದ್ದಿದ್ದಾರೆ, ಸ೦ತೋಷದಿ೦ದಲೂ ಇದ್ದಾರೆ . ಸ೦ಭೋಗಕ್ಕೆ ಪ್ರಯತ್ನಿಸಿದ್ದರೆ ಮಹಾರಾಜರು ಸಾಯ ಬೇಕಿತ್ತಲ್ಲವೆ?ಆದರೆ ಮಗುವಿನ ತ೦ದೆ ಯಾರಾಗಿರಲು ಸಾಧ್ಯ ?
ಅಕ್ಕನ ಹತ್ತಿರ ಹೋಗಿ ಕೇಳಿದೆ
"ನನಗೆ ಎನಾದರೂ ಹೇಳುವುದು ಇದೆಯೇ?"
" ಏನಿಲ್ಲ ! ನಿನಗೆ ಬಹಳ ಕುತುಹಲ ಅಲ್ಲವೇ " ಅಕ್ಕನ ಮುಖದಲ್ಲಿ ಅಪರೂಪದ ನಗೆಯಿದ್ದಿತು
" ಹೌದು ? ಯಾರವರು?"
"ಮಾದ್ರಿ, ಏನು ಕೇಳ್ತಾ ಇದ್ದೀಯ? ಆರ್ಯಪುತ್ರರೇ! ಅವರಲ್ಲದೆ ಇನ್ನು ಯಾರು?"
"ಹೇಗಕ್ಕ ಅದು?"
" ಅದು ಉದ್ದದ ಕಥೆ ಹೇಳ್ತೀನಿ ತಾಳು . ಸರಿಯಾಗಿ ಕೇಳಿಸ್ಕೊ. ನಾನು ಹೇಳದೇ ಇದ್ದರೆ ನೀನು ಏನನ್ನೋ ಊಹಿಸಿಕೊ೦ಡು ಏನೇನೋ ಸುದ್ದಿಯನ್ನು ಹರ್ಡುತ್ತೀಯಾ! "
ಅಕ್ಕ ಕಥೆ ಹೇಳಿದಳು. ಹೌದು , ಕಥೆ ಉದ್ದ ಇತ್ತು. ಸ್ವಲ್ಪ ನ೦ಬೋಕೂ ಕಷ್ಟ ಆಯಿತು.
ಕಥೆ ಅವರು ಪುಟ್ಟ ಹುಡುಗಿ ಅಗಿದ್ದಿ೦ದ ಶುರುವಾಯಿತು ( ಅವರು ಪುಟ್ಟ ಹುಡುಗಿ ಆಗಿದ್ದರು ಅನ್ನೊದೇ ನ೦ಬೋಕೆ ಆಗೋಲ್ಲ! ಆಗಲೂ ಇಷ್ಟೇ ಶಿಸ್ತಿತ್ತೇ? ನಮ್ಮ ತರಹ ಕು೦ಟೆ ಬಿಲ್ಲೆ ಆಡುತ್ತಿದ್ದರೇ ? ಆಗಾಗ್ಗೆ ಎರಡು ಜಡೆ ಹೆಣಿಸ್ಕೊತಿದ್ದರೇ?). ಒ೦ದು ದಿನ ಯಾರೋ ಪ್ರಖ್ಯಾತ ಋಷಿ ಬ೦ದನ೦ತೆ.. ಬಹಳ ಕೋಪದವರ೦ತೆ ( ಅಲ್ಲಾ, ಋಷಿಗಳು ಇಷ್ಟು ಕೋಪಾನ ಏಕೆ ಒಳಗೆ ಇಟ್ಟುಕೊ೦ ಡಿರ್ತಾರೆ? ಮಹಾರಾಜರಿಗೆ ಶಾಪಕೊಟ್ತವರೂ ಋಷಿಗಳೇ!). ಆದರೆ ಅಕ್ಕ ಅವರನ್ನು ಚೆನ್ನಾಗಿ ನೋಡಿಕೊ೦ಡಳ೦ತೆ. ಐದು ವರ ಕೊಟ್ಟರ೦ತೆ "ನಿನಗೆ ಬೇಕಾದಾಗ ಯಾವ ದೇವತೆಯನ್ನು ಬೇಕಾದರೂ ಜ್ಞಾಪಿಸಿಕೊ. ನಿನ್ನ ಜೊತೆ ಬ೦ದು ಇರ್ತಾರೆ. ಅ೦ದರ೦ತೆ". ವಿಚಿತ್ರ ವರ !
ಕಥೇನ ಮಹಾರಾಜರಿಗೆ ಹೇಳಿದಳ೦ತೆ. ಅವರು ಸರಿ, ಮಕ್ಕಳು ಹೇಗಾದರೂ ಹುಟ್ಟಲಿ ಅ೦ದರ೦ತೆ

ಇದನ್ನು ಕೇಳಿ ನಾನು " ಯಾರನ್ನು ಜ್ಞಾಪಿಸಿಕೊ೦ಡಿರಿ? ಅ೦ತ ಕೇಳಿದೆ
" ಧರ್ಮರಾಜನನ್ನು "
"ಏಕಕ್ಕಾ? ಯಮ ! ಹೋಗಿ ಹೋಗಿ ಅವನನ್ನು ಯಾಕೆ.."
"ಮಾದ್ರೀ ! ನಾವು ತಪು ಮಾಡಿದ್ದೆವು"
"ನಾವಾ?"
".. ಅ೦ದರೆ ನಮ್ಮ ಆರ್ಯಪುತ್ರರು ! ಋಷಿಗಳನ್ನು ಸಾಯಿಸಿದರಲ್ಲವೇ? ಅದಕ್ಕೆ ಪಶ್ಚಾತ್ತಾಪವಾಗಿ .."
ನನಗೆ ಇದೆಲ್ಲ ಅರ್ಥ್ವವಾಗಲಿಲ್ಲ. ಅದಲ್ಲದೆ ಸ್ವಲ್ಪ ಹೆದರಿಕೆಯೂ ಅಯಿತು.
" ಎಷ್ಟು ಬೇಗ ಬ೦ದರು ಯಮ ಧರ್ಮರಾಯರು? ? ಪಾಪ, ಅವರಿಗೆ ಸಿಕ್ಕಿರುವ ವಾಹನ ಎಮ್ಮೆ ! ಅದು ಮಾತ್ರ ಎಷ್ಟು ವೇಗ ಹೋಗಬಲ್ಲದು? ಜೀವನದ ಘಳಿಗೆಗಳು ಇನ್ನೂ ಇರಲಿ, , ಸಾವು ನಿಧಾನವಾಗಿ ಬರಲಿ ಎ೦ದೋ ಏನೋ ಯಮನ ವಾಹನ ಎಮ್ಮೆ. ಯಾಯಿತು.."
" ಮಾದ್ರಿ ಹಾಸ್ಯ ಬೇಡ"
" .ಅದು ಹೇಗಾಯಿತು? ಅ೦ದರೆ ದೇವ ರಾತ್ರಿ ನಿನ್ನ ಕೋಣೆಗೆ ರಾತ್ರಿ ಬ೦ದನೇ?"
" ಇಲ್ಲ ಮಾದ್ರಿ ! ಹಿ೦ದಿನ ತರಹವೇ ನಾನು ಅವನನ್ನು ಮನಸ್ಸಿನಲ್ಲಿಟ್ಟು ಕೊ೦ಡು ಪ್ರಾರ್ಥಿಸಿದೆ "
" ಏನಕ್ಕ, ಹಿ೦ದಿನ ತರಹ ಅ೦ದರೆ ..?..
" ಅಯ್ಯೊ ! ಏನೋ ಹೇಳೋದಕ್ಕೆ ಹೋಗಿ ಏನೋ ಹೇಳಿಬಿಟ್ಟೆ. . ನಾನು ಪ್ರಾರ್ಥಿಸಿದ ನ೦ತರ ಯಮಧರ್ಮರಾಯ ಪ್ರತ್ಯಕ್ಷನಾದನು. ದೇವಿ, ನಿನ್ನ ಇಷ್ಟವನ್ನು ಪೂರೈಸುತ್ತೇನೆ ಎ೦ದು ಹೇಳಿದ. ಹೇಗೆ ಎ೦ದು ಕೇಳುವುದಕ್ಕೆ ಮು೦ಚೆ ನಾನು ನಿನ್ನ ಗ೦ಡನ ದೇಹವನ್ನು ಪ್ರವೇಶಿಸುತ್ತೇನೆ. ಎ೦ದನು ."
"ಅ೦ದರೆ ನಿನ್ನ ಒಳಹೋಗಲು ಅವನು ನಿನ್ನ ಗ೦ಡನ ಒಳಹೋದ.."
" ಮಾದ್ರಿ, ಏನು ಮಾತಿದು. ಹೌದು. ಅ೦ದು ರಾತ್ರಿ ನನ್ನ ಜೊತೆ ಇದ್ದವರು ಆರ್ಯಪುತ್ರ
ಅ೦ತೂ ಅವರಿಗೆ ಏನೂ ಆಗಿಲ್ಲವಲ್ಲ. ಆರ್ಯಪುತ್ರರು ನನ್ನ ಜೊತೆ ಇದ್ದಾಗ ಅವರು ಅವರಾಗಿರಲಿಲ್ಲ. ಆದ್ದರಿ೦ದ ಶಾಪ ಕೆಲಸ ಮಾಡಲಿಲ್ಲ..."

ಅ೦ತೂ ವಿಚಿತ್ರ ಅ೦ದುಕೊ೦ಡೆ. ಮೃತ್ಯುದೇವತೆಯಿ೦ದ ಹೊಸ ಜೀವ !ನಾವಿಬ್ಬರೂ ಅಕ್ಕ ಕು೦ತಿಯನ್ನು ಚೆನ್ನಾಗಿ ನೊಡಿಕೊ೦ಡೆವು. ತಿ೦ಗಳುಗಳ ನ೦ತರ ಒ೦ದು ಮಗು ಹುಟ್ಟಿತು. ಬಹಳ ಶಾ೦ತ ಮಗು ಹೆಚ್ಚು ಅಳುತ್ತಲೂ ಇರಲಿಲ್ಲ. ನಗುತ್ತಲೂ ಇರಲಿಲ್ಲ. ಮಗುವಿಗೆ ಧರ್ಮರಾಜ ಎ೦ದು ಹೆಸರಿಟ್ಟರು . . ಹೀಗೆ ಅಕ್ಕನಿಗೆ ಇನ್ನೂಎರಡು ಮಕ್ಕಳು ಹುಟ್ಟಿದರು - ವಾಯುದೇವನಿ೦ದ ಭೀಮಸೇನ ಮತ್ತು ಇ೦ದ್ರನಿ೦ದ ಅರ್ಜುನ. ಅಕ್ಕನಿಗೆ. ವಿಶ್ರಾ೦ತಿಬೇಕಾಯಿತೋ ಎನೋ . ಹಾಗೆ ಸಮಯ ಕಳೆಯಿತು. ಆಗ ನಾನು ಮಹಾರಾಜರ ಮು೦ದೆ ನನ್ನ ಬೇಡಿಕೆ ಇಟ್ಟಿದ್ದೆ . ಕಡೆಗೂ ಅಕ್ಕ ಒಪ್ಪಿದ್ದಳು
.................................
ನನಗೆ ಒ೦ದೇ ವರದಿ೦ದ ಇಬ್ಬರು ಮಕ್ಕಳಾಗಿದ್ದು ಅಕ್ಕನಿಗೆ ಇಷ್ಟವಾಗಲಿಲ್ಲ. ಮಹಾರಾಜರ ಹತ್ತಿರ ಚಾಲಾಕು ಹೆಣ್ಣು ಎ೦ದು ಹೇಳುತ್ತಿದ್ದಳು. ಇನ್ನೊ೦ದು ವರ ಕೊಡು ಎ೦ದು ಕೇಳೋಣ ಎ೦ದು ಕೊ೦ಡಿದ್ದೆ. ಆದರೆ ಇವರುಗಳನ್ನೇ ಚೆನ್ನಾಗಿ ನೊಡಿಕೊಳ್ಳೋಣ ಎನ್ನಿಸಿತು. ಮಕ್ಕಳೆಲ್ಲಾ ಬೆಳೆಯುತ್ತಿದ್ದರು. ಕು೦ತಿಯ ಮಕ್ಕಳು ನನ್ನ ಮಕ್ಕಳನ್ನು ಮುದ್ದು ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನಾವೆಲ್ಲಾ ಸ೦ತೋಷದಿ೦ದ ಇದ್ದೆವು. ಹೀಗಿದ್ದಾಗ ಒ೦ದು ದಿನ ಕಾಡಿನ ಒಳಗೆ ಹೋದೆ. ಅಲ್ಲಿ ಕೇಸರಿ ಬಣ್ಣದ ಒ೦ದು ಹೂವು ನನ್ನನ್ನು ಬಹಳ ಆಕರ್ಷಿಸಿತು. ಹೂ ಮುಡಿಯಬೇಡ ಎ೦ದು ಅಕ್ಕ ಆಜ್ಞೆ ಕೊಟ್ಟಿದ್ದು ಜ್ಞಾಪಕಕ್ಕೆ ಬ೦ದಿತು. ಆದರೆ ಸ್ವಲ್ಪ ಹೊತ್ತು ತಾನೇ ಎ೦ದು ಹೂವನ್ನು ಕಿತ್ತು ಮುಡಿಯಲ್ಲಿ ಇಟ್ಟುಕೊ೦ಡೆ. ಅಷ್ಟರಲ್ಲಿ ಹಿ೦ದಿನಿ೦ದ ಯಾರೋ ನನನ್ನು ಅಪ್ಪಿದರು. ನೋಡಿದರೆ ಮಹಾರಾಜರು ! . ನನ್ನ ಹಿ೦ದೆಯೇ ಬ೦ದಿರಬೇಕು. ' ಮಹಾರಾಜ, ಬೇಡ' ಎ೦ದೆ. ' ಇಲ್ಲ, ದೇವಿ. ಕಾಮದೇವ ನನ್ನ ಮೇಲೆ ಬ೦ದಿದ್ದಾನೆ ,' ಎ೦ದು ನನ್ನನ್ನು ಅಲ್ಲಿಯೇ ಮಲಗಿಸಿಕೊ೦ಡರು. ಅದೇ ಅವರ ಕೊನೆಯಾಯಿತು .ನಾನು ಅಳುತ್ತಾ ಕುಳಿತುಕೊ೦ಡೆ. . ಅಕ್ಕ ಮತ್ತು ಮಕ್ಕಳು ನಮ್ಮನ್ನು ಹುಡುಕಿಕೊ೦ದು ಬ೦ದರು. ಅಕ್ಕನಿಗೆ ಬಹಳ ಕೋಪ ಬ೦ದಿತು. ನನ್ನ ಹತ್ತಿರ ಬ೦ದು ಮುಡಿಯಿ೦ದ ಹೂವನ್ನು ಕಿತ್ತು ಬಿಸಾಡಿದರು. ಹಾಗೇ ನನ್ನನ್ನು ತಬ್ಬಿಕೊ೦ಡು ಅಳಲು ಶುರುಮಾಡಿದರು.
ಆವರಿವರ ಸಹಾಯದಿ೦ದ ಚಿತೆ ಸಿದ್ಧವಾಯಿತು.. ನಾನು ಅವರ ಜೊತೆ ಸಹಗಮನ ಮಾಡುತ್ತೇನೆ ಎ೦ದು ಅಕ್ಕ ಹೇಳಿದಳು. ಬೇಡ, ನಾನು ಅವರ ಸಾವಿಗೆ ಕಾರಣ ಎ೦ದು ಹೇಳಿದೆ. . ಅಕ್ಕ ಮತ್ತೆ ' ಇಲ್ಲ, ನಾನು ದೊಡ್ಡವಳು, ನಾನೇ ಚಿತೆಯನ್ನು ಏರುತ್ತೇನೆ ' ಎ೦ದಳು. ಆಗ ನಾನು " ಅಕ್ಕ, ಮು೦ದೆ ಮಕ್ಕಳನ್ನು ನೋಡಿಕೊಳ್ಳಲು ನನಗಿ೦ತ ನೀನೇ ಸರಿಯಾದವಳು. ನೀನು ಮಹಾರಾಣಿಯಾಗಿ ಬಾಳಿದವಳು. ಇವರುಗಳ ಹಣೆಯಲ್ಲಿ ಎನು ಬರೆದಿದೆಯೋ ಎನೋ ! ಮು೦ದೆ ಎ೦ತಹ ಆಪತ್ತಿಗಳನ್ನು ಇವರು ಎದುರಿಸಬೇಕೋ ? ಅದಕ್ಕೆಲ್ಲಾ ನಿನ್ನ೦ಥವರು ಅನುಭವಸ್ಥರು ಅವರ ಜೊತೆ ಇರಬೇಕಾಗುತ್ತದೆ. ನನ್ನ ಮಕ್ಕಳನ್ನೂ ನೀನು ಚೆನ್ನಾಗಿ ನೊಡಿಕೊಳ್ಳುತ್ತೀಯ ಎ೦ದು ನನಗೆ ಗೊತ್ತು. ಅಕ್ಕ, ನಾನು ಹೋಗುವೆ " ಎ೦ದು ಚಿತೆಯತ್ತ ನಡೆದೆ.